Political News: ಕೇರಳದಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿ ಸ್ಥಿತಿ ಇರುವಾಗಲೇ, ತ್ರಿಶೂರ್ನಲ್ಲಿ ಬಿಜೆಪಿಯಿಂದ ನಿಂತು ಗೆದ್ದಿರುವ ಒಬ್ಬರೇ ಒಬ್ಬ ಅಭ್ಯರ್ಥಿ ಅಂದ್ರೆ, ಅವರು ಸುರೇಶ್ ಗೋಪಿ.
ನಿನ್ನೆಷ್ಟೇ ಮೋದಿ ಸರ್ಕಾರಕ್ಕೆ ಸುರೇಶ್ ಪ್ರಮಾಣವಚನ ಸ್ವೀಕರಿಸಿ, ಸಂಪುಟ ಸಚಿವರಾಗಿ ಆಯ್ಕೆಯಾಗಿದ್ದಾರೆ. ಆದರೆ ಸುರೇಶ್ ಅವರು ಸಚಿವ ಸ್ಥಾನ ನಿರಾಕರಿಸಿದ್ದಾರೆಂಬ ಸುದ್ದಿ ಅದಾಗಲೇ ಹರಿದಾಡಲು ಶುರುವಾಗಿತ್ತು. ಆದರೆ ಅದಕ್ಕೆ ಸ್ಪಷ್ಟನೆ ನೀಡಿರುವ ಸುರೇಶ್ ಗೋಪಿ, ಇದು ಸುಳ್ಳು ಸುದ್ದಿ. ನಾನು ಎಲ್ಲಿಯೂ ಕೇಂದ್ರ ಸಚಿವ ಸ್ಥಾನ ಬೇಡ ಎಂದು ಹೇಳಲೇ ಇಲ್ಲವೆಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸುರೇಶ್ ಗೋಪಿ, ಕೆಲವು ಮಾಧ್ಯಮಗಳು ನಾನು ನನ್ನ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದು ಸುಳ್ಳು ಸುದ್ದಿ ಹಬ್ಬಿಸಿದೆ. ಆದರೆ ಇದು ಸತ್ಯಕ್ಕೆ ದೂರ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೇರಳದ ಅಭಿವೃದ್ಧಿ ಮತತ್ತು ಸಮೃದ್ಧಿಗೆ ನಾವು ಸದಾ ಸಿದ್ಧರಿದ್ದೇವೆ ಎಂದಿದ್ದಾರೆ.
Sandalwood News: ಯುವ ರಾಜ್ಕುಮಾರ್ ವಿಚ್ಛೇದನ- ಪತ್ನಿ ಶ್ರೀದೇವಿ ಸ್ಫೋಟಕ ಹೇಳಿಕೆ
ನಾವು ಸೋತರೂ ಒಳ್ಳೆ ಫೈಟ್ ಕೊಟ್ಟಿದ್ದೇವೆ: ಕಾಂಗ್ರೆಸ್ ಸೋಲಿನ ಬಗ್ಗೆ ಸಂತೋಷ್ ಲಾಡ್ ಮಾತು