Saturday, July 27, 2024

Latest Posts

ಪುನೀತ್ ಪುತ್ಥಳಿ :ಪೊಲೀಸರ ವಶಕ್ಕೆ

- Advertisement -

ಮೈಸೂರು: ಮೈಸೂರಿನ ಲಿಂಗಾಬುದಿ ಪಾಳ್ಯ ಬಡಾವಣೆಯ ಅಭಿಮಾನಿಗಳು ಪುನೀತ್ ಪುತ್ಥಳಿ ಮಾಡಿಸಿದ್ದರು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪ್ಪು ಆಗಲಿ ತಿಂಗಳಾದರೂ ಅವರ ನೆನಪು ಮಾತ್ರ ಇನ್ನೂ ಮಾಡುತ್ತಿಲ್ಲ ಅವರ ಆರಾಧನೆ ಹಾಗೂ ಅವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಇದು ಅವರ ಸರಳತೆ ಸಜ್ಜನಿಕೆ ಯವರ ಜನಸೇವೆ ಹಾಗೂ ಅವರ ನಟನೆ ಡ್ಯಾನ್ಸ್ ಇವೆಲ್ಲವುದರ ಜೊತೆಗೆ ಸಾವಿನಲ್ಲೂ ಸಹ ಕಣ್ಣನ್ನು ದಾನ ಮಾಡಿ ಸಾರ್ಥಕತೆ ಮೆರೆದ ಅವರಿಗೆ ಸಲ್ಲುತ್ತಿರುವ ಗೌರವ ಎನ್ನಬಹುದು. ಮೈಸೂರಿನಲ್ಲಿ ಅಭಿಮಾನಿಗಳು ಅವರ ಪುನೀತ್ ಪುತ್ಥಳಿಯನ್ನು ಮಾಡಿಸಿದ್ದು, ಅದನ್ನು ಮೈಸೂರಿನವರ ವಲಯದ ರಿಂಗ್ ರಸ್ತೆಯ ಮಧ್ಯೆ ನೀಡಲು ಮುಂದಾಗಿದ್ದು ಅದಕ್ಕಾಗಿ ಸಿದ್ಧತೆಗಳು ನಡೆದಿದ್ದವು, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪುತ್ಥಳಿಯನ್ನು ಸ್ಥಾಪಿಸಬಾರದು ಎನ್ನುವ ಆದೇಶವಿದೆ. ಇದೇ ಕಾರಣಕ್ಕಾಗಿ ಕುವೆಂಪು ನಗರದ ಪೊಲೀಸರು ಪುತ್ತಳಿ ತಯಾರಿಸಿದ್ದ ಜಾಗಕ್ಕೆ ತೆರಳಿ ಪುತ್ಥಳಿಯನ್ನು ವಶಕ್ಕೆ ಪಡೆದಿದ್ದಾರೆ. ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ನಮಗೆ ತಿಳಿಸಿದ್ದರೆ ನಾವೇ ಪುತ್ಥಳಿ ಪ್ರತಿಷ್ಠಾನ ಮಾಡುತ್ತಿರಲಿಲ್ಲ ಎಂದು ಅಪ್ಪು ಅಭಿಮಾನಿಗಳು ಕುವೆಂಪು ನಗರ ಪೊಲೀಸ್ ಠಾಣೆ ಮುಂದೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss