Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, ನಿನ್ನೆ ಹೆಣ್ಣುಮಗುವಿನ ಮೇಲೆ ಅಮಾನುಶವಾಗಿ ಬರ್ಬರ ಹತ್ಯೆ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಬೇಜಾವಾಬ್ದಾರಿತನದ ಹೇಳಿಕೆ ನೀಡ್ತಾರೆ. ಗೃಹ ಸಚಿವರಿಗೆ ಮಾನ ಮರ್ಯಾದೆ ಇದೆಯಾ? ಘಟನೆ ಬಗ್ಗೆ ಯಾವುದೇ ಮಾಹಿತಿ ತೆಗೆದುಕೊಳ್ಳದೇ ಈ ರೀತಿ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಹೆಣ್ಣುಮಕ್ಕಳು ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ಇದೆ. ವೋಟ್ ಬ್ಯಾಂಕ್ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಯತ್ನಾಳ್ ಹರಿಹಾಯ್ದಿದ್ದಾರೆ.
ಇದೇ ರೀತಿ ಘಟನೆಗಳು ನಡೆದ್ರೆ ರಕ್ಷಣೆ ಮಾಡೋರ್ಯಾರು..? ನಿಮಗೆ ತಾಕತ್ ಇದ್ರೆ ಇಂತವರನ್ನ ಎನ್ ಕೌಂಟರ್ ಮಾಡಿ. ನೇಹಾ ಕುಟುಂಬಸ್ಥರ ಜೊತೆ ನಾವೂ ಕೂಡ ಕಾನೂನು ಹೋರಾಟ ಮಾಡುತ್ತೇವೆ. ಆರೋಪಿಗೆ ಮೂರು ತಿಂಗಳಲ್ಲಿಶಿಕ್ಷೆ ನೀಡಬೇಕು ಅನ್ನೋದು ಸುಪ್ರೀಂಕೋರ್ಟ್ ನಿಯಮ ಇದೆ. ಮೂರು ತಿಂಗಳಲ್ಲಿ ಆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಗೃಹ ಸಚಿವರು, ಸಿಎಂ ಇದು ವೈಯಕ್ತಿಕ ಅಂತಾ ಹೇಳಿಕೆ ನೀಡಿದ್ದಾರೆ. ಇದರಲ್ಲಿ ಏನು ವೈಯಕ್ತಿಕ ಇದೆ. ವೈಯಕ್ತಿಕ ಇದ್ದಿದ್ರೆ ಆ ಹೆಣ್ಣುಮಗು ತಾಯಿಗೆ ಯಾಕೆ ಫೋನ್ ಮಾಡುತ್ತಿದ್ದಳು ? ಎಂದು ಯತ್ನಾಳ್ ಪ್ರಶ್ನಿಸಿದ್ದಾಳೆ.
ಆರೋಪಿ ಮನೆಗೆ ಪೊಲೀಸ್ ಭದ್ರತೆ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ್, ಇದು ನಾಚಿಕೆಗೇಡಿನ ವಿಷಯ. ಮುಸ್ಲೀಂರಿಗೆ ಕಾಂಗ್ರೆಸ್ ನವರು ಪ್ರಚೋದನೆ ನೀಡುತ್ತಿದ್ದಾರೆ. ಸಂತೋಷ ಲಾಡ್ ಒಬ್ಬ ಸಚಿವ ಅವರ ಮನೇಲಿಈ ರೀತಿ ಆಗಿದ್ರೆ ಸುಮ್ಮನೇ ಇರ್ತಿದ್ರಾ ? ಗೃಹ ಸಚಿವರ ಮನೆಯಲ್ಲಿ ಈ ರೀತಿ ಆಗಿದ್ದರೆ ಸುಮ್ಮನೇ ಇರುತ್ತಿದ್ದರಾ ? ಅಲ್ಪಸಂಖ್ಯಾತರ ರಕ್ಷಣೆಗೆ ಕಾನೂನು ಜಾರಿಗೆ ತರೋದಾಗಿ ಹೇಳ್ತಾರೆ. ಆದ್ರೆ ಹಿಂದೂಗಳ ರಕ್ಷಣೆ ಮಾಡೋರ್ಯಾರು ? ಮದರಸಾಗಳಲ್ಲಿ ಮುಸ್ಲೀಂರಿಗೆ ಇದೆ ಶಿಕ್ಷಣ ನೀಡುತ್ತಾರೆ. ಹಿಂದೂಗಳ ಮೇಲೆ ಈ ರೀತಿ ಹಲ್ಲೆ ಮಾಡುವಂತಹ ಶಿಕ್ಷಣವನ್ನೇ ನೀಡುತ್ತಾರೆ ಎಂದು ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.
ನಟಿ ಹರ್ಷಿಕಾ ಮತ್ತು ಭುವನ್ ಮೇಲೆ ಹಲ್ಲೆ ಯತ್ನ: ನಾವೇನು ಪಾಕಿಸ್ತಾನದಲ್ಲಿದ್ದೇವಾ..? ಎಂದು ಬೇಸರ..
ಇಂಥ ಕೆಲಸಕ್ಕೆ ಎನ್ಕೌಂಟರ್ ಕಾನೂನು ಬರಲೇಬೇಕು: ಸಚಿವ ಸಂತೋಷ್ ಲಾಡ್ ಆಗ್ರಹ