Sunday, September 8, 2024

Latest Posts

ಅಭಿಮಾನಿ ದೇವರುಗಳ ಮೇಲೆ ಲಾಠಿ ಚಾರ್ಜ್ ಬೇಡ- ಶಿವಣ್ಣ ಮನವಿ

- Advertisement -

ಬೆಂಗಳೂರು- ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಶುಕ್ರವಾರ ಸಂಜೆ ಪುನೀತ್ ಪಾರ್ಥಿವ ಶರೀರವನ್ನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡುತ್ತಿದ್ದಂತೆಯೇ ಅಲ್ಲಿಗೆ ಜನಸಾಗರ ಹರಿದುಬರದೊಡಗಿತ್ತು. ಸಾಗರೋಪಾದಿಯಲ್ಲಿ ನುಗ್ಗುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರಿಗೆ ಸವಾಲಾಗಿತ್ತು. ಸುನಾಮಿಯಂತೆ ನುಗ್ಗುತ್ತಿದ್ದ ಜನರ ಗುಂಪು ಮತ್ತು ಗದ್ದಲ ನಿವಾರಿಸಲು ಪೊಲೀಸರು ಬೇರೆ ದಾರಿಯಿಲ್ಲದೆ ಕೆಲವೊಮ್ಮೆ ಲಾಠಿ ಚಾರ್ಜ್ ಮಾಡಬೇಕಾಯ್ತು. ಆದ್ರೆ, ಪುನೀತ್ ರ ದರ್ಶನ ಪಡೆಯಲು ಬಂದಿದ್ದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದ ಸುದ್ದಿ ತಿಳಿದ ಶಿವಣ್ಣ, ಯಾವುದೇ ಕಾರಣಕ್ಕೂ ಅಭಿಮಾನಿಗಳ ಮೇಲೆ ಕೈ ಮಾಡಬಾರದು, ಲಾಠಿ ಬೀಸಬಾರದು ಅಂತ ಶಿವಣ್ಣ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಶಿವಣ್ಣ ಚರ್ಚಿಸಿದ್ರ. ಹೀಗಾಗಿ ಸಿಎಂ ಕೂಡ ಪೊಲೀಸರಿಗೆ ಯಾವುದೇ ಅಭಿಮಾನಿಗಳ ಮೇಲೆ ಲಾಠಿ ಪ್ರಹಾರ ನಡೆಸದಂತೆ ತಿಳಿಸಿದ್ದರು ಎನ್ನಲಾಗಿದೆ.

ಒಟ್ಟಾರೆ ಅಭಿಮಾನಿಗಳೇ ನಮ್ಮನೆ ದೇವ್ರು ಅಂತ ಭಾವಿಸಿರೋ ಡಾ. ರಾಜ್ ಕುಟುಂಬ ಇಂಥಹ ಕಷ್ಟದ ಪರಿಸ್ಥಿತಿಯಲ್ಲೂ ಅಭಿಮಾನಿಗಳ ತೋರಿದ ಕಾಳಜಿ ಶ್ಲಾಘನೀಯ.

ಕರ್ನಾಟಕ ಟಿವಿ- ಬೆಂಗಳೂರು

- Advertisement -

Latest Posts

Don't Miss