ಬೆಂಗಳೂರು- ತಮ್ಮ ನೆಚ್ಚಿನ ಗೆಳೆಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್ ಅಗಲಿದ ತಾರೆಗೆ ನುಡಿನಮನ ಸಲ್ಲಿಸಿದ್ದಾರೆ.
ಈಗ ಎಲ್ಲಾ ಮುಗಿದು ಹೋಗಿದೆ. ಪುನೀತ್ ಅಗಲಿಕೆ ಕೇವಲ ನಷ್ಟವಲ್ಲ, ಬದಲಾಗಿ ಇದು ಇಡೀ ಚಿತ್ರರಂಗಕ್ಕೆ ಎದುರಾಗಿರೋ ಅಘಾತ ,. ಈ ದುಃಖದಿಂದ ಹೊರಬಂದು ಎಲ್ಲಾ ಮೊದಲಿನಂತಾಗಲು ನಮಗೆ ಕೆಲದಿನಗಳು ಬೇಕು.
ಒಂದು ಅದ್ಭುತ ಅಧ್ಯಾಯವೊಂದು ಮುಗಿದಿರೋದಕ್ಕೆ ಈ ದಿನಸಾಕ್ಷಿಯಾಗಿದೆ. ನಾನು ಪುನೀತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಅವರು ಇಬ್ಬರು ಪುತ್ರಿಯರು ಹಾಗೂ ಅಲ್ಲಿದ್ದ ಹಿರಿಯರ ಪರಿಸ್ಥಿತಿ ಹೇಗಿರಬಹುದು ಅನ್ನೋ ಬಗ್ಗೆ ಆಲೋಚನೆ ಮಾಡುತ್ತಾ ಕುಳಿತಿದ್ದೆ.
ಪುನೀತ್ ರಾಜ್ ಕುಮಾರ್ ಪ್ರತಿಯೊಬ್ಬರಿಂದಲೂ ಪ್ರೀತಿಸಲ್ಪಡುತ್ತಿದ್ದ ಅದ್ಬುತ ವ್ಯಕ್ತಿ. ಆದ್ರೆ ಇಂದು ಕೊನೆಗೂ ಆತನನ್ನು ತಂದೆ ತಾಯಿಯ ಪಕ್ಕದಲ್ಲಿ ಮಲಗಿಸಿ ಬರಲಾಗಿದೆ. ಪುನೀತ್ ಹುಟ್ಟಿದ್ದು, ಬೆಳೆದಿದ್ದು ಶ್ರೀಮಂತಿಕೆಯಲ್ಲಿ ಹಾಗೆಯೇ ನಮ್ಮನ್ನು ತೊರೆದಿದ್ದೂ ಶ್ರೀಮಂತಿಕೆಯಲ್ಲೇ. ಈ ನಮ್ಮ ತಾರೆ ಇದೀಗ ಬಾನಂಗಳ ಸೇರಿದೆ. ನಾನು ಪ್ರತಿ ಬಾರಿ ಆಕಾಶ ನೋಡಿದಾಗಲೆಲ್ಲಾ ನಿಮ್ಮನ್ನು ಅತ್ಯಂತ ಪ್ರಕಾಶಮಾನವಾದ ನಕ್ಷತ್ರದಂತೆ ನೋಡಬಯಸುತ್ತೇನೆ. ಹೋಗಿ ಬಾ ಗೆಳೆಯಾ ಅಂತ ಕಿಚ್ಚ ಸುದೀಪ್ ಅಗಲಿದ ಸ್ನೇಹಿತನಿಗೆ ಟ್ವಿಟ್ಟರ್ ಮೂಲಕ ನುಡಿ ನಮನ ಸಲ್ಲಿಸಿದ್ದಾರೆ.
ಕರ್ನಾಟಕ ಟಿವಿ- ಬೆಂಗಳೂರು