ಶುಗರ್ ಅನ್ನೋ ರೋಗ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಹೋಗಿದೆ. ಮೊದಲಾದರೆ, ಶ್ರೀಮಂತರಿಗಷ್ಟೇ ಈ ರೋಗ ಬರುತ್ತಿತ್ತು ಅಂತಾ ಹೇಳ್ತಿದ್ರು. ಯಾಕಂದ್ರೆ ಅವರಿಗೆ ಟೆನ್ಶನ್ ಜಾಸ್ತಿ ಇರ್ತಿತ್ತು. ಅವರು ಹೊತ್ತೊತ್ತಿಗೆ ಊಟ ಮಾಡಲು ಆಗ್ತಾ ಇರ್ಲಿಲ್ಲಾ.. ಹಾಗಾಗಿ ಶುಗರ್ ಬರುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಶ್ರೀಮಂತರಿಗಷ್ಟೇ ಅಲ್ಲ, ತಾನೂ ಶ್ರೀಮಂತನಾಗಬೇಕು ಅನ್ನೋ ತವಕದಲ್ಲಿ, ಸಮಯಕ್ಕೆ ಸರಿಯಾಗಿ ಊಟ ಮಾಡದೇ, ಊರ ಉಸಾಬರಿ ಎಲ್ಲಾ, ತನ್ನ ಪ್ರಾಬ್ಲಮ್ ಅನ್ನೋ ರೀತಿ ಜೀವನ ಮಾಡುವವರಿಗೂ ಶುಗರ್ ಬರುತ್ತಿದೆ. ಹಾಗಾದ್ರೆ ಶುಗರ್ ಕಂಟ್ರೋಲಿನಲ್ಲಿಡುವುದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪದೇ ಪದೇ ತಲೆಸುತ್ತು ಬರುತ್ತಿದ್ದರೆ, ಈ ಟಿಪ್ಸ್ ಅನುಸರಿಸಿ..
ಮೊದಲನೇಯದಾಗಿ ಮಧುಮೇಹವನ್ನು ಕಂಟ್ರೋಲಿನಲ್ಲಿಡಲು, ನೀವು ಸಿಹಿ ತಿಂಡಿ ತಿನ್ನುವುದನ್ನ ಕಂಟ್ರೋಲ್ ಮಾಡಬೇಕು. ಸ್ವೀಟ್ಸ್, ಮೈದಾ, ಸಕ್ಕರೆ, ಬಿಳಿ ಅನ್ನ ತಿನ್ನುವುದನ್ನ ಕಡಿಮೆ ಮಾಡಿ. ಸಾಧ್ಯವಾದಲ್ಲಿ ಸಂಪೂರ್ಣ ನಿಲ್ಲಿಸಿಬಿಡಿ. ಅಲ್ಲದೇ ವಾಕಿಂಗ್, ಸೈಕ್ಲಿಂಗ್, ಜಾಗಿಂಗ್, ಯೋಗಾ ಮಾಡುವುದನ್ನು ಕಲಿಯಿರಿ. ಬಿಪಿ, ಶುಗರ್ ಕಂಟ್ರೋಲ್ ಮಾಡಲು ಕೂಡ ಕೆಲ ಯೋಗಗಳಿದೆ. ಹಾಗಾಗಿ ಯೋಗ ಮಾಡುವುದು ಉತ್ತಮ.
ಶುಗರ್ಗೆ ಉತ್ತಮ ಔಷಧ ಅಂದ್ರೆ, ನೇರಳೆ ಹಣ್ಣಿನ ಬೀಜ. ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ, ಕುಟ್ಟಿ ಪುಡಿ ಮಾಡಿ ಇಟ್ಟುಕೊಂಡಿರಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬೆಚ್ಚಗಿನ ನೀರಿನೊಂದಿಗೆ ಒಂದು ಸ್ಪೂನ್ ನೇರಳೆ ಬೀಜದ ಪುಡಿ ಸೇರಿಸಿ ಕುಡಿಯಿರಿ. ಅಲ್ಲದೇ ವಾರದಲ್ಲಿ ಮೂರು ದಿನವಾದ್ರೂ ಹಾಗಲಕಾಯಿ ಜ್ಯೂಸ್ ಕುಡಿಯಿರಿ. ಅಥವಾ ಜಾಸ್ತಿ ಬೆಲ್ಲ ಹಾಕದೇ, ಪಲ್ಯ ಮಾಡಿ ಸೇವಿಸುವುದು ಒಳ್ಳೆಯದು.
ಬೊಜ್ಜನ್ನ ಕರಗಿಸಬೇಕೇ..? ಹಾಗಾದ್ರೆ ಈ ಸೂಪ್ಗಳನ್ನ ಸೇವಿಸಿ..
ಆ್ಯಲೋವೆರಾ ಎಲೆಯಿಂದ ಬರೀ ಸೌಂದರ್ಯವಷ್ಟೇ ಅಲ್ಲ, ಆರೋಗ್ಯವೂ ಉತ್ತಮವಾಗಿರುತ್ತದೆ. ಆ್ಯಲೋವೆರಾ ಜ್ಯೂಸ್ ಕುಡಿಯುವುದರಿಂದ ಶುಗರ್ ಕಂಟ್ರೋಲಿಗೆ ಬರುತ್ತದೆ. ಅಥವಾ ನೀವು ವಾರಕ್ಕೆ ಮೂರು ಬಾರಿ, ಆ್ಯಲೋವೆರಾ ಜೆಲ್ ಸೇವನೆ ಮಾಡಬೇಕು. ಆ್ಯಲೋವೆರಾ ಗಿಡದಿಂದ ಎಲೆಯನ್ನು ತೆಗೆದು, ಅದರಲ್ಲಿರುವ ಜೆಲ್ ಸೇವನೆ ಮಾಡಿದ್ರೆ, ಶುಗರ್ ಕಂಟ್ರೋಲಿಗೆ ಬರುತ್ತದೆ. ಆದ್ರೆ ನಾವು ನಿಮಗೆ ಹೇಳಿರುವ ಆಹಾರಗಳಲ್ಲಿ ಯಾವುದಾದರೂ ಆಹಾರ ತಿಂದ್ರೆ ನಿಮಗೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.