Saturday, June 27, 2026

Sumalatha Ambareesh

ಮಂಡ್ಯದಲ್ಲಿ ಸುಮಕ್ಕ ಭರ್ಜರಿ ವಿಜಯೋತ್ಸವ- ಜನತೆಗೆ ಸಂಸದೆ ಕೃತಜ್ಞತೆ

ಮಂಡ್ಯ: ಜಿದ್ದಾಜಿದ್ದಿನ ಕಣದಲ್ಲಿ ಸ್ಪರ್ಧಿಸಿ ಕೊನೆಗೂ ಪಕ್ಷೇತರ ಅಭ್ಯರ್ಥಿ ಸ್ವಾಭಿಮಾನಿ ಸುಮಲತಾರನ್ನ ಸಂಸದೆಯನ್ನಾಗಿ ಮಾಡಿದ ಮಂಡ್ಯ ಜನತೆಗೆ ಇಂದು ಕೃತಜ್ಞತೆ ಸಲ್ಲಿಸೋ ಸಲುವಾಗಿ ಬೃಹತ್ ಸಮಾವೇಶ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಶ್, ನೆನಪಿರಲಿ ಪ್ರೇಮ್ ಭಾಗವಹಿಸಿದ್ರು. ಸ್ವಾಭಿಮಾನವನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ಅಭಿನಂದಿಸೋ ಸಲುವಾಗಿ...

‘ನನಗೆ ಮಂಡ್ಯ ಜನ, ಅಭಿವೃದ್ಧಿ ಮುಖ್ಯ’- ಸಂಸದೆ ಸುಮಲತಾ

ಬೆಂಗಳೂರು: ಸಂಸದೆ ಸುಮಲತಾಗೆ ಕಾವೇರಿ ನೀರು ಹಂಚಿಕೆ ಕುರಿತಾದ ದೊಡ್ಡ ಜವಾಬ್ದಾರಿ ಹೆಗಲೇರಿದೆ. ಈ ಕುರಿತು ಮಾತನಾಡಿದ ಸುಮಲತಾ ಒಗ್ಗಟ್ಟಾಗಿ ಕೆಲಸ ಮಾಡಿ ಇದನ್ನ ಬಗೆ ಹರಿಸೋಣ ಅಂತ ಹೇಳಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಆಯೋಜಿಸಲಾಗಿರೋ ಅಂಬರೀಶ್ ಹುಟ್ಟಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಸುಮಲತಾ, ಮಂಡ್ಯ ಜನತೆ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಕೇವಲ 5...

ಮಂಡ್ಯ ಜನರನ್ನು ಹಾಡಿಹೊಗಳಿದ ಡಿ-ಬಾಸ್…!

ಮೈಸೂರು:  ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ಗೆಲುವು ತಂದುಕೊಟ್ಟ ಮಂಡ್ಯ ಜನರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧನ್ಯವಾದ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ನಟ ದರ್ಶನ್ ಸುಮಲತಾ ಅಮ್ಮನನ್ನು ಗೆಲ್ಲಿಸೋ ಮೂಲಕ ಮಂಡ್ಯ ಜನ ಸ್ವಾಭಿಮಾನಿಗಳು ಅಂತ ತೋರಿಸಿಕೊಟ್ಟಿದ್ದಾರೆ. ಜನರು ಕೊಟ್ಟ ಗಿಫ್ಟ್ ಉಳಿಸಿಕೊಂಡು ಹೋಗೋದು ಮುಖ್ಯ. ಮಂಡ್ಯ ಜನರಿಗೆ ಧನ್ಯವಾದ ಅಂದ್ರೆ ಅದು ಚಿಕ್ಕ ಪದ ಆಗುತ್ತೆ...

‘ಸುಮಲತಾರನ್ನು ದೇವೇಗೌಡ್ರಿಗೆ ಹೋಲಿಸೋಕ್ಕಾಗುತ್ತಾ?’- ಶಾಸಕ ಅನ್ನದಾನಿ ಲೇವಡಿ

ಮಂಡ್ಯ: ದೇವೇಗೌಡ ಅಂದರೆ ದೇಶದ ದೊಡ್ಡ ಶಕ್ತಿ. ಅಂತಹವರನ್ನ ಸುಮಲತಾಗೆ ಯಾವ ವಿಷಯದಲ್ಲೂ ಹೋಲಿಸಲು ಆಗಲ್ಲ ಅಂತ ಸಂಸದೆ ಸುಮಲತಾ ಅಂಬರೀಶ್ ರನ್ನ ಮಳವಳ್ಳಿ ಶಾಸಕ ಅನ್ನದಾನಿ ಜರಿದಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಅನ್ನದಾನಿ, ಕಾವೇರಿ ನೀರು ಹಂಚಿಕೆ ವಿಚಾರವಾಗಿ ದೇವೇಗೌಡರು ಹೋರಾಟಕ್ಕೆ ಶಕ್ತಿ ತುಂಬಿದ್ದರು. ದೇವೇಗೌಡ್ರು ಅಂದ್ರೇನೇ ದೇಶದ ಒಂದು ದೊಡ್ಡ ಶಕ್ತಿ. ಅವರು...

ನಾಳೆ ಮಂಡ್ಯದಲ್ಲಿ ದಚ್ಚು,ಯಶ್ ಕಮಾಲ್-ಸಂಸದೆ ಸುಮಲತಾ ಭರ್ಜರಿ ವಿಜಯೋತ್ಸವ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರೋ ಸಂಸದೆ ಸುಮಲತಾ ನಾಳೆ ಮಂಡ್ಯದ ಜನತೆಗೆ ಅಭಿನಂದನೆ ಹೇಳೋ ಸಲುವಾಗಿ ಸ್ವಾಭಿಮಾನಿ ವಿಜಯೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಚುನಾವಣೆ ಮುಗಿದ ಬಳಿಕ ಮಂಡ್ಯದತ್ತ ಸುಳಿಯದ ಸಂಸದೆ ಸುಮಲತಾ ನಾಳೆ ವಿಜಯೋತ್ಸವ ಆಚರಿಸೋ ಸಲುವಾಗಿ ತಮ್ಮ ಕ್ಷೇತ್ರ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಮಂಡ್ಯ ನಗರದಲ್ಲಿರೋ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ವಿಜಯೋತ್ಸವಕ್ಕಾಗಿ ಭರ್ಜರಿ ವೇದಿಕೆ ಸಿದ್ದವಾಗ್ತಿದೆ....

‘ಮಂಡ್ಯದಲ್ಲಿ ಕೈ ನಾಯಕರಿಗೆ ಜೆಡಿಎಸ್ ಟಾರ್ಚರ್’- ಚಲುವರಾಯಸ್ವಾಮಿ

ಮಂಡ್ಯ: ಜಿಲ್ಲಾ ಜೆಡಿಎಸ್ ನವರು ಕಾಂಗ್ರೆಸ್ಸಿಗರಿಗೆ ನಿರಂತವಾಗಿ ಕಿರುಕುಳ ನೀಡ್ತಿದ್ದಾರೆ. ಹೀಗೆ ಆದ್ರೆ ನಾವು ಬೀದಿಗಿಳಿದು ಹೋರಾಟ ಮಾಡ್ತೀವಿ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ  ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಮಂಡ್ಯದಲ್ಲಿ ಜೆಡಿಎಸ್ ನವರು ಕಾಂಗ್ರೆಸ್ಸಿಗರನ್ನ ಟಾರ್ಗೆಟ್ ಮಾಡಿ ನಿರಂತರವಾಗಿ ಕಿರುಕುಳ ನೀಡ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಮೇಲೆ ಮಂಡ್ಯ ಕಾಂಗ್ರೆಸ್ಸಿಗರು ಸಭೆ...

‘ಜನ ಸುಮಲತಾರನ್ನ ಗೆಲ್ಲಿಸಿ ಕುಮಾರಸ್ವಾಮಿಗೆ ಪಾಠ ಕಲಿಸಿದ್ದಾರೆ’- ಚಲುರಾಯಸ್ವಾಮಿ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನರು ಸೂಕ್ತ ತೀರ್ಮಾನ ಕೈಗೊಳ್ತಾರೆ ಅಂತ ನಾನು ಹೇಳಿದಂತೆ ಆಗಿದೆ. ಸುಮಲತಾರನ್ನು ಜನ ಗೆಲ್ಲಿಸೋ ಮೂಲಕ ಕುಮಾರಸ್ವಾಮಿಗೆ ಪಾಠ ಕಲಿಸಿದ್ದಾರೆ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ನಾನು ಹೇಳಿದ ಹಾಗೆ ಜನ ಸೂಕ್ತ ತೀರ್ಮಾನ ಕೈಗೊಂಡು ಸುಮಲತಾರನ್ನು ಗೆಲ್ಲಿಸೋ ಮೂಲಕ...

ಸುಮಲತಾ ಮಾತು ಉಳಿಸಿಕೊಳ್ತಾರೋ, ಮಾತು ತಪ್ತಾರೋ…?

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಲತಾ ಅಂಬರೀಶ್ ಜೆಡಿಎಸ್ ಭದ್ರಕೋಟೆಯನ್ನ ಛಿದ್ರ ಛಿದ್ರ ಮಾಡಿದ್ದು ಈಗ ಇತಿಹಾಸ. ಸುಮಲತಾಗೆ ಬಿಜೆಪಿ ನೀವು ಯಾವಾಗ ಬೇಕಾದ್ರೂ ನಮ್ಮ ಪಕ್ಷಕ್ಕೆ ಬರಬಹುದು ಅಂತ ಆಹ್ವಾನಿಸಿದೆ. ಇದೇ ವಿಚಾರವಾಗಿ ಸುಮಲತಾ ಚುನಾವಣೆ ವೇಳೆ ಮಂಡ್ಯದ ಮುಸ್ಲಿಂ ಬಾಂಧವರಿಗೆ ನೀಡಿದ್ದ ಆ ಒಂದು ಮಾತು ಉಳಿಸಿಕೊಳ್ತಾರೋ ಇಲ್ಲವೋ ಅನ್ನೋ ಪ್ರಶ್ನೆ ಎದುರಾಗಿದೆ....

‘ದ್ವೇಷ, ಕಿತ್ತಾಟ ಬೇಡ’- ಮಂಡ್ಯ ಜನತೆಗೆ ಸುಮಲತಾ ಶಾಂತಿ ಮಂತ್ರ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿ ಪ್ರಮೋಟ್ ಆಗಿರೋ ಸುಮಲತಾ ಅಂಬರೀಶ್ , ಮಂಡ್ಯ ಜನತೆಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರೋ ಸುಮಲತಾ,’ನನ್ನ ಎಲ್ಲಾ ಬಂಧುಗಳೇ ..ಚುನಾವಣೆ ಮುಗಿದಿದೆ. ಚುನಾವಣೆಯ ಸಂದರ್ಭದಲ್ಲಿ ಗೆಲುವಿನ ಪ್ರತಿಷ್ಠೆಗಳು ಪರಸ್ಪರ ವೈಷಮ್ಯ ಸಹಜವಾಗಿ ಉಂಟಾಗುತ್ತದೆ. ಆದರೆ ನಾವೆಲ್ಲರೂ ಒಂದೇ ಊರಿನಲ್ಲಿ ಬದುಕುತ್ತಿರುವವರು. ಪರಸ್ಪರ...

ಬೆರಳನ್ನೇ ಕತ್ತರಿಸಿಕೊಂಡ ನಿಖಿಲ್ ಕುಮಾರ್ ಅಭಿಮಾನಿ..!

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಸೋಲಿನಿಂದ ಬೇಸರಗೊಂಡ ಅಭಿಮಾನಿಯೊಬ್ಬ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿ ಸೋತಿರುವ ನಿಖಿಲ್ ಗೌಡ ಅಭಿಮಾನಿಯೊಬ್ಬ ನಿಖಿಲ್ ಸೋತಿದ್ದಾರೆ, ಹೀಗಾಗಿ ಅವರಿಗಾಗಿ ಮತದಾನ ಮಾಡಿ ಶಾಹಿ ಹಾಕಿಸಿಕೊಂಡ ಬೆರಳೇ ಇರಬಾರದು ಅಂತ ತಮ್ಮ ಬೆರಳನ್ನೇ ಕತ್ತರಿಸಿಕೊಂಡಿದ್ದಾನಂತೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ...
- Advertisement -spot_img

Latest News

Sandalwood: ನನಗೆ ಹೃದಯಾಘಾತವಾಗಿರಲಿಲ್ಲ: ನಟ ವಿನೋದ್ ಪ್ರಭಾಕರ್ ಸ್ಪಷ್ಟನೆ

Sandalwood: ನಟ ವಿನೋದ್ ಪ್ರಭಾಕರ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದೀಗ ಚಿಕಿತ್ಸೆ ಪಡೆದು, ಆರೋಗ್ಯವಾಗಿರುವ ವಿನೋದ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ. ನನಗೆ ಹೃದಯಾಘಾತವಾಗಿರಲಿಲ್ಲ....
- Advertisement -spot_img