Friday, May 9, 2025

Latest Posts

ಹುಂಡಿ ಕದಿಯುವ ಮುನ್ನ ದೇವಿಯಲ್ಲಿ ಕ್ಷಮೆ ಕೇಳಿದ ಕಳ್ಳ- ವೀಡಿಯೋ ವೈರಲ್..

- Advertisement -

ಮಧ್ಯಪ್ರದೇಶದ ದೇವಸ್ಥಾನವೊಂದರಲ್ಲಿ ಹುಂಡಿ ಕಳ್ಳ, ದೇವಿಗೆ ಕೈ ಮುಗಿದು, ಹುಂಡಿ ಕಳ್ಳತನ ಮಾಡಿ ಹೋದ ಘಟನೆ ನಡೆದಿದೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ.

ಜಬಲ್ಪುರ್‌ನ ಸುಖಾ ಎನ್ನುವ ಊರಿನ ಲಕ್ಷ್ಮೀದೇವಿ ದೇವಸ್ಥಾನವೊಂದರಲ್ಲಿ ಈ ಘಟನೆ ನಡೆದಿದ್ದು, ಕಳ್ಳ ಕಳ್ಳತನಕ್ಕೂ ಮುನ್ನವೇ. ದೇವಿಯಲ್ಲಿ ಕ್ಷಮೆ ಕೇಳಿದ್ದು, ಹುಂಡಿ ಕದ್ದೊಯ್ದಿದ್ದಾನೆ. ಬೆಳಗ್ಗಿನ ಜಾವ 4 ಗಂಟೆಗೆ ಈ ಘಟನೆ ನಡೆದಿದ್ದು,  ಈ ದೇವಸ್ಥಾನ ಬರುವ ಭಕ್ತರು ದೇವಿಗೆ ಲಕ್ಷಾಂತರ ರೂಪಾಯಿ ಕಾಣಿಕೆಯನ್ನು ಹಾಕುತ್ತಾರೆ. ಹಾಗಾಗಿ ಇದು ಈ ಊರಿನ ಶ್ರೀಮಂತ ದೇವಸ್ಥಾನ ಅಂತಲೂ ಹೇಳಬಹುದು.

ಹಾಗಾಗಿ ಈ ಕಳ್ಳ, ಲಕ್ಷ್ಮೀ ದೇವಿಯ ಹುಂಡಿಯ ಮೇಲೆ ಕಣ್ಣು ಹಾಕಿದ್ದು, ಅದನ್ನು ಕದಿಯುವ ಪ್ಲಾನ್ ಮಾಡಿದ್ದಾನೆ. ಆದ್ರೆ ಈತ ಹುಂಡಿ ಕದಿಯುವ ದೃಶ್ಯ ದೇವಸ್ಥಾನದ ಗರ್ಭಗುಡಿಯಲ್ಲೇ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್‌ಯ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest Posts

Don't Miss