Spiritual: ಭಾರತದಲ್ಲಿ ಹಲವು ಪವಾಡಗಳು ನಡೆಯುವ ದೇವಸ್ಥಾನಗಳಿದೆ. ಕೆಲವು ಕೊಳಗಳಲ್ಲಿ ಸ್ನಾನ ಮಾಡಿದರೆ, ಹಲವು ರೋಗಗಳು ವಾಸಿಯಾಗುತ್ತದೆ. ಇನ್ನು ಕೆಲವು ಕಡೆ ಸಿಗು ವಿಭೂತಿ ಹಚ್ಚಿದರೆ, ವಿದ್ಯೆ ಚೆನ್ನಾಗಿ ತಲೆಗೆ ಹತ್ತುತ್ತದೆ. ಹೀಗೆ ಹಲವು ದೇವಸ್ಥಾನಗಳಿದೆ. ಅದೇ ರೀತಿ ಮನುಷ್ಯನಿಗೆ ಪ್ರೇತ ಕಾಟವಿದ್ದಲ್ಲಿ, ದೆವ್ವಗಳು ಮೈ ಸೇರುತ್ತಿದ್ದಲ್ಲಿ, ಅದನ್ನು ಬಿಡಿಸುವ ಮಂದಿರವೂ ಇದೆ. ಅದರಲ್ಲಿ ರಾಜಸ್ತಾನದ ಬಾಲಾಜಿ ಮಂದಿರವೂ ಒಂದು, ಇಂದು ನಾವು ಈ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ರಾಜಸ್ಥಾನದ ದೌಸಾ ಜಿಲ್ಲೆಯ ಮೆಹಂದಿಪುರದಲ್ಲಿ ಹನುಮನ ದೇವಸ್ಥಾನವಿದೆ. ಇಲ್ಲಿ ಹನುಮನನ್ನು ಬಾಲಾಜಿ ಎಂದು ಕರೆಯುತ್ತಾರೆ. ಇಲ್ಲಿ ಬಾಲಾಜಿಯೊಂದಿಗೆ, ಘಂಟರಾಜ ಮತ್ತು ಭೈರವನನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಪ್ರೇತ ಮೆಟ್ಟಿಕೊಂಡವರು, ದೆವ್ವದ ಕಾಟವಿರುವವರು ಬರುತ್ತಾರೆ. ಇಲ್ಲಿನ ಬಾಲಾಜಿಗೆ ಲಾಡುಗಳನ್ನು ಪ್ರಸಾದದ ರೂಪದಲ್ಲಿ ನೈವೇದ್ಯ ಮಾಡಲಾಗುತ್ತದೆ. ಮತ್ತು ನೈವೇದ್ಯ ಮಾಡಿದ ಲಾಡುವಿನಲ್ಲಿ ಎರಡು ಲಾಡುವನ್ನು ಪ್ರೇತ ಮೆಟ್ಟಿದವರಿಗೆ ತಿನ್ನಲು ಕೊಡಲಾಗುತ್ತದೆ. ಅವರನ್ನು ಯಾರು ಕರೆದುಕೊಂಡು ಬಂದಿರುತ್ತಾರೋ, ಅವರು ಈ ಲಾಡುವನ್ನು ಸಮಸ್ಯೆ ಇರುವವರಿಗೆ ತಿನ್ನಿಸಬೇಕು. ಇದರಿಂದ ಪ್ರೇತಭಾದೆ ನಿವಾರಣೆಯಾಗುತ್ತದೆ ಅನ್ನೋ ನಂಬಿಕೆ ಇದೆ.
ಈ ದೇವಸ್ಥಾನದಲ್ಲಿ ಪ್ರೇತಗಳನ್ನು ಆಹ್ವಾನ ಮಾಡಿ, ಅವುಗಳನ್ನು ಉಚ್ಛಾಟನೆ ಮಾಡಲಾಗುತ್ತದೆ. ಈ ವೇಳೆ ಅವರಿಗೆ ಹೊಡೆಯಲಾಗುತ್ತದೆ. ಇಷ್ಟೇ ಅಲ್ಲದೇ, ಈ ದೇವಸ್ಥಾನದ ಒಳಗಡೆ ಬಂದಾಗ ಯಾರೊಂದಿಗೂ ಮಾತನಾಡಬಾರದು. ತಮ್ಮಷ್ಟಕ್ಕೆ ತಾವಿರಬೇಕು. ಯಾರನ್ನೂ ಮುಟ್ಟಬಾರದು. ಈ ದೇವಸ್ಥಾನಕ್ಕೆ ಬರುವ ಒಂದು ವಾರ ಮುಂಚೆ ಬೆಳ್ಳುಳ್ಳಿ, ಈರುಳ್ಳಿ, ಮಾಂಸ, ಮೊಟ್ಟೆ, ಮದ್ಯ ಇದ್ಯಾವುದನ್ನೂ ಸೇವಿಸಬಾರದು. ಈ ದೇವಸ್ಥಾನದಿಂದ ಮರಳಿ ಹೋಗುವಾಗ ನಿಮ್ಮ ಡಬ್ಬದಲ್ಲಿರುವ ತಿಂಡಿ, ಬಾಟಲಿಯಲ್ಲಿರುವ ನೀರೆಲ್ಲ ಖಾಲಿ ಮಾಡಿಕೊಂಡು ಹೋಗಬೇಕು. ಅಷ್ಟೇ ಅಲ್ಲದೇ, ಈ ಹಳ್ಳಿಯಿಂದಲೂ ನೀವು ಏನನ್ನೂ ಖರೀದಿಸಿಕೊಂಡು ಮನೆಗೆ ಕೊಂಡೊಯ್ಯಬಾರದು. ಇಷ್ಟೆಲ್ಲ ನಿಯಮಗಳನ್ನು ಹೊಂದಿದೆ ಈ ಬಾಲಾಜಿ ದೇವಸ್ಥಾನ.