Spiritual: ಆದಿದೇವ ಶಂಕರನ ವಾಹನವಾಗಿರುವ ನಂದಿ, ಕಲಿಯುಗ ಮುಗಿಯುವ ಬಗ್ಗೆ ಮುನ್ಸೂಚನೆ ಕೊಡುತ್ತಿದ್ದಾನೆ. ಇದು ನಿಮಗೆ ಆಶ್ಚರ್ಯ ತರುವ ವಿಷಯವಾಗಿದ್ದರೂ ಕೂಡ, ಸತ್ಯ. ಭಾರತದಲ್ಲಿರುವ ಒಂದು ದೇವಸ್ಥಾನದ ನಂದಿ ಮೂರ್ತಿ, ಬೃಹದಾಕಾರವಾಗಿ ಬೆಳೆಯುತ್ತಿದೆ. ಇದು ಯಾವಾಗ ಬೆಳೆಯುವುದು ನಿಲ್ಲಿಸುತ್ತದೆಯೋ, ಅಂದೇ ಕಲಿಯುಗದ ಅಂತ್ಯವಾಗುತ್ತದೆ ಎಂದು ನಂಬಿಕೆ ಕೂಡ ಇದೆ. ಹಾಗಾದ್ರೆ ಹೀಗೆ ಬೆಳೆಯುತ್ತಿರುವ ನಂದಿಯ ವಿಗ್ರಹ ಇರುವುದಾದರೂ ಎಲ್ಲಿ..? ಇದರ ಹಿಂದಿರುವ ಸತ್ಯವೇನು ಅಂತಾ ತಿಳಿಯೋಣ ಬನ್ನಿ..
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಉಮಾಮಹೇಶ್ವರ ದೇವಸ್ಥಾನದಲ್ಲಿ ಈ ನಂದಿ ವಿಗ್ರಹವಿದೆ. ಈ ವಿಗ್ರಹ ಮೊದ ಮೊದಲು ಚಿಕ್ಕದಾಗಿತ್ತು. ಆದರೆ ಈಗ ನಂದಿ ಮೂರ್ತಿ ಅದೆಷ್ಟು ದೊಡ್ಡದಾಗಿದೆ ಎಂದರೆ, ದೇವಸ್ಥಾನದಲ್ಲಿ ನಂದಿಯ ಸುತ್ತಮುತ್ತ ಓಡಾಡಲೂ ಜಾಗವಿಲ್ಲದಂತೆ ಆಗಿದೆ. ನಂದಿಯ ವಿಗ್ರಹ ಬೆಳೆಯುವ ಕಾರಣಕ್ಕೆ, ಅಲ್ಲಿನ ಆಡಳಿತ ಮಂಡಳಿ, ಜಾಗವನ್ನು ಪಸರಿಸುತ್ತ ಹೋಗುತ್ತಿದೆ.
ಮೊದಲೆಲ್ಲ ನಂದಿ ದೇವನನ್ನು ಭಕ್ತಾದಿಗಳು ಆರಾಮವಾಗಿ ಪ್ರದಕ್ಷಿಣೆ ಹಾಕಿ, ಪೂಜಿಸುತ್ತಿದ್ದರು. ಆದರೆ ಈಗ ಪ್ರದಕ್ಷಿಣೆ ಹಾಕಲು ತುಂಬ ನಡೆಯಬೇಕು. ಅಲ್ಲದೇ, ನಂದಿಯ ಆಕಾರ ಹೇಗೆ ದೊಡ್ಡದಾಗುತ್ತಿದೆಯೋ, ಅದೇ ರೀತಿ, ಇಲ್ಲಿರುವ ದೇವಸ್ಥಾನದ ಕಂಬಗಳು ಕೂಡ ಖಂಡಿತವಾಗುತ್ತಿದೆ. ಇನ್ನು ಇಲ್ಲಿನ ನಂಬಿಕೆಯ ಮೂಲಕ, ಕಲಿಯುಗ ಅಂತ್ಯವಾಗುವ ಸಮಯಕ್ಕೆ ಈ ನಂದಿಗೆ ಜೀವ ಬರುತ್ತದೆ. ಮತ್ತು ಯಾವಾಗ ನಂದಿಗೆ ಜೀವ ಬರುತ್ತದೆಯೋ, ಆಗ ಕಲಿಯುಗ ಅಂತ್ಯವಾಗುತ್ತದೆ ಎಂದು ಹೇಳುತ್ತಾರೆ.
ಪ್ರತೀ 20 ವರ್ಷಕ್ಕೊಮ್ಮೆ ಈ ನಂದಿ ವಿಗ್ರಹ ಕೊಂಚ ಕೊಂಚ ದೊಡ್ಡದಾಗುತ್ತದೆ. ವಿಜ್ಞಾನಿಗಳು ಕೂಡ, ಇದರ ಬಗ್ಗೆ ವೈಜ್ಞಾನಿಕ ಕಾರ್ಯಾಚರಣೆ ನಡೆಸಿದಾಗ, ಅವರಿಗೆ ಈ ನಂದಿ ವಿಗ್ರಹವನ್ನು ಒಂದು ವಿಭಿನ್ನ ಕಲ್ಲಿನಿಂದ ಮಾಡಲಾಗಿದೆ. ಮತ್ತು ಈ ಕಲ್ಲು ಬೆಳೆಯುತ್ತದೆ ಎಂಬುದಷ್ಟೇ ಗೊತ್ತಾಗಿದೆ. ಇನ್ನು ಇಲ್ಲೊಂದು ಪುಷ್ಕರಣಿ ಕೊಳವಿದ್ದು, ಇಲ್ಲಿ ಒಂದು ನಂದಿ ವಿಗ್ರಹದ ಮೂಲಕ ನೀರು ಬರುತ್ತದೆ. ವಿಜ್ಞಾನಿಗಳು ಪರೀಕ್ಷೆ ನಡೆಸಿದರೂ ಕೂಡ, ಅವರಿಗೆ ಈ ನೀರು ಹೇಗೆ ಬರುತ್ತಿದೆ ಎಂಬುದು ಇನ್ನೂವರೆಗೂ ಗೊತ್ತಾಗಲಿಲ್ಲ.
ಜರ್ಮನಿಯ ಬರ್ಲಿನ್ನಲ್ಲಿರುವ ಗಣೇಶ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?
ನೀವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ, ಭಗವದ್ಗೀತೆಯಲ್ಲಿ ಹೇಳಿದ ಈ ಮಾತುಗಳನ್ನು ಕೇಳಿ..