Saturday, June 21, 2025

Latest Posts

ನೆಮ್ಮದಿಯಿಂದ ಇರಬೇಕು ಎಂದರೆ, ಇಂಥ ಸ್ಥಳಗಳಲ್ಲಿರಬೇಡಿ..

- Advertisement -

Spiritual: ನಾವು ನಮ್ಮ ಮನೆಯಲ್ಲಿ ಅಥವಾ ನಾವು ಕಟ್ಟಿಸಿದ ಮನೆಯಲ್ಲಿ, ಅಥವಾ ನಾವು ದುಡ್ಡು ಕೊಟ್ಟು ಉಳಿಯಬಹದಾದ ಮನೆಯಲ್ಲಿ ಮಾತ್ರ ಉಳಿದುಕೊಳ್ಳಬೇಕು. ಇದನ್ನು ಬಿಟ್ಟು ನೀವು ಎಲ್ಲಿ ಉಳಿದರೂ, ಅಲ್ಲಿ ಅವಮಾನ ಕಟ್ಟಿಟ್ಟ ಬುತ್ತಿ. ಇದು ಹಲವರ ಗಮನಕ್ಕೆ ಬಂದಿರುತ್ತದೆ. ಇದೇ ಮಾತನ್ನು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಹಾಗಾದ್ರೆ ಯಾವ ಸ್ಥಳದಲ್ಲಿ ನಾವು ಇರಬಾರದು ಅಂತಾ ತಿಳಿಯೋಣ ಬನ್ನಿ..

ಹೀಯಾಳಿಸುವ ಸಂಬಂಧಿಕರ ಮನೆ. ನೀವು ನಿಮ್ಮ ಮನೆಯಲ್ಲೇ ಇದ್ದರೂ, ನೀವು ಮನೆಗೆಲಸ ಮಾಡದಿದ್ದಲ್ಲಿ, ಅಥವಾ ಸಂಪಾದನೆ ಮಾಡದಿದ್ದಲ್ಲಿ, ನಿಮ್ಮ ಮನೆಯವರೇ ನಿಮ್ಮನ್ನು ಕೀಳಾಗಿ ನೋಡುತ್ತಾರೆ. ಅಥವಾ ಬೇರೆ ಊರಿಗೆ ನೀವು ಸಂಬಂಧಿಕರ ಮನೆಯಲ್ಲಿ ಉಳಿದು, ವಿದ್ಯಾಭ್ಯಾಸ ಮಾಡುತ್ತಿದ್ದರೆ. ಅವರಿಗೆ ನಿಮ್ಮಿಂದ ಯಾವುದೇ ಆರ್ಥಿಕ ಲಾಭವಿಲ್ಲದಿದ್ದರೆ, ಅಂಥವರು ಕೂಡ ನಿಮ್ಮನ್ನು ಕೀಳಾಗಿ ನೋಡುತ್ತಾರೆ. ಹಾಗಾಗಿ ವಿದ್ಯಾಭ್ಯಾಸ ಮುಗಿದ ಬಳಿಕ, ಬೇಗ ಉತ್ತಮ ಕೆಲಸ ಹುಡುಕಿ, ನೀವು ಸ್ವಾಭಿಮಾನಿಯಾಗಿ ಬದುಕಬೇಕು. ಏಕೆಂದರೆ, ಇಂಥ ಸ್ಥಳದಲ್ಲಿದ್ದರೆ, ನಿಮಗೆ ನೆಮ್ಮದಿ ಇರುವುದಿಲ್ಲ.

ವಿದ್ಯೆ ಇಲ್ಲದ ಸ್ಥಳ. ನೀವು ಯಾವ ಸ್ಥಳದಲ್ಲಿರುತ್ತೀರೋ, ಆ ಸ್ಥಳದಲ್ಲಿ ನಿಮಗೆ ಉತ್ತಮ ವಿದ್ಯಾಭ್ಯಾಸ ಪಡೆಯಲು ಸಾಧ್ಯವಿಲ್ಲವೆಂದಲ್ಲಿ, ಅಥವಾ ವಿದ್ಯಾವಂತರು ಆ ಸ್ಥಳದಲ್ಲಿ ಇಲ್ಲವೆಂದಲ್ಲಿ, ಆ ಸ್ಥಳದಿಂದ ನೀವು ಹೊರಡುವುದೇ ಲೇಸು. ಅಂಥ ಸ್ಥಳ ಕೊಚ್ಚೆಗಿಂತಲೂ ಕೆಟ್ಟದ್ದಾಗಿರುತ್ತದೆ.

ಉತ್ತಮ ಕೆಲಸ ಸಿಗದ ಸ್ಥಳ. ನೀವು ಯಾವ ಸ್ಥಳದಲ್ಲಿರುತ್ತೀರೋ, ಆ ಸ್ಥಳದಲ್ಲಿ ನೀವು ಮಾಡಲು ಅರ್ಹವಾದ ಕೆಲಸ ಸಿಗುತ್ತಿಲ್ಲವೆಂದಲ್ಲಿ, ನೀವು ಆ ಜಾಗದಿಂದ ಹೋಗುವುದೇ ಲೇಸು. ನಿಮಗೆ ಅರ್ಹತೆ ಇರುವ ಕೆಲಸ ಯಾವ ಸ್ಥಳದಲ್ಲಿ ಸಿಗುತ್ತದೆಯೋ, ಅಂಥ ಸ್ಥಳದಲ್ಲೇ ನೀವು ಜೀವಿಸಬೇಕು. ನೀವು ಉತ್ತಮ ಕೆಲಸವಿಲ್ಲದ ಜಾಗದಲ್ಲಿದ್ದರೆ, ನಿಮಗೆ ಯಾರೂ ಬೆಲೆ ಕೊಡುವುದಿಲ್ಲ.

ಉತ್ತಮ ವೈದ್ಯರಿಲ್ಲದ ಸ್ಥಳ. ಯಾವ ಸ್ಥಳದಲ್ಲಿ ಬದುಕಿಸಬಹುದಾದ, ರೋಗ ನಿವಾರಣೆ ಮಾಡಬಹುದಾದ ಚಿಕಿತ್ಸೆ ನೀಡುವ ವೈದ್ಯನಿರುವುದಿಲ್ಲವೋ, ಅಂಥ ಸ್ಥಳದಲ್ಲಿ ಇರುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅದೊಂದು ನಿಶ್ಪ್ರಯೋಜಕ ಸ್ಥಳವಾಗುತ್ತದೆ.

ಉತ್ತಮ ರಾಜನಿಲ್ಲದ ಸ್ಥಳ. ಯಾವ ಸ್ಥಳದಲ್ಲಿ ಉತ್ತಮ ರಾಜನಿರುವುದಿಲ್ಲವೋ, ಆ ಸ್ಥಳದಲ್ಲಿ ಯಾವಾಗ ಬೇಕಾದರೂ ಯುದ್ಧವಾಗಬಹುದು. ಜನರ ಮಾರಣಹೋಮವಾಗಬಹುದು. ಅಂಥ ಸ್ಥಳ ಪ್ರಜೆಗಳಿಗೆ ಇರಲು ಅರ್ಹವಿರುವುದಿಲ್ಲ. ಹಾಗಾಗಿ ಅಂಥ ಸ್ಥಳದಲ್ಲಿ ಇರುವುದು ಒಳಿತಲ್ಲ.

ಶ್ರೀಮಂತಿಕೆ ಇದ್ದಾಗ ನಾವು ಯಾವ ಕೆಲಸ ಮಾಡಬೇಕು ಅಂತಾರೆ ಚಾಣಕ್ಯರು..

ಮಹಿಳೆಯರು ಕುಂಬಳಕಾಯಿ ಕತ್ತರಿಸಬಾರದಂತೆ.. ಯಾಕೆ ಗೊತ್ತಾ..?

ಜೀವನದಲ್ಲಿ ಈ 4 ಜನರ ಮಾತನ್ನು ಎಂದಿಗೂ ಕಡೆಗಣಿಸಬೇಡಿ.

- Advertisement -

Latest Posts

Don't Miss