ಶ್ರೀಕೃಷ್ಣ ಎಲ್ಲವನ್ನೂ ಬಲ್ಲವನಾಗಿದ್ದರೂ, ಎಲ್ಲಿಯೂ ಮೌನ ಮುರಿಯದೇ, ಆಗಬೇಕಾದ್ದೆಲ್ಲ ಆಗಲಿ ಎಂದು ಕುಳಿತಿದ್ದ ಜಾಣ. ಹಾಗಾಗಿ ಅವನನ್ನು ಲೀಲಾಮಯ ಎಂದು ಕರೆಯುತ್ತಿದ್ದರು. ಪಾಂಡವರು ಕೌರವರೊಂದಿಗೆ ಜೂಜಾಡಿದರೆ, ಮಹಾಭಾರತ ಯುದ್ಧವಾಗುತ್ತದೆ ಎಂದು ಶ್ರೀಕೃಷ್ಣನಿಗೆ ಗೊತ್ತಿತ್ತು. ಆದರೂ ಶ್ರೀಕೃಷ್ಣ ಪಾಂಡವರನ್ನ ತಡೆಯಲಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಉದ್ಧವ ಎಂಬ ಬಾಲಕ, ಕೃಷ್ಣನಲ್ಲಿ ಈ ಬಗ್ಗೆ ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸಿದ ಕೃಷ್ಣ, ದುಡ್ಡಿನ ಮದದಲ್ಲಿದ್ದ ಯುಧಿಷ್ಠಿರನಿಗೆ ವಿವೇಕವಿರಲಿಲ್ಲ. ದುರ್ಯೋಧನನ ಬಳಿ ಜೂಜಾಡಲು ಸಾಕಷ್ಟು ದುಡ್ಡಿದ್ದರೂ, ಜೂಜಾಡುವ ಅನುಭವವಿರಲಿಲ್ಲ. ಹಾಗಾಗಿ ಅವನು ಶಕುನಿಯ ಸಹಾಯ ಪಡೆದ. ಅದೇ ರೀತಿ ಯುಧಿಷ್ಠಿರನೂ ಕೂಡ, ನನ್ನನ್ನು ನೆನಪಿಸಿಕೊಂಡಿದ್ದರೆ, ನಾನು ಅವನ ಸಹಾಯಕ್ಕೆ ಹೋಗುತ್ತಿದೆ. ದ್ರೌಪದಿ ನನ್ನನ್ನು ಕರೆದಾಗ, ಆಕೆಯ ಸಹಾಯಕ್ಕಾಗಿ ಓಡಿದ ಹಾಗೆ, ಯುಧಿಷ್ಠಿರನ ಸಹಾಯಕ್ಕೂ ಹೋಗುತ್ತಿದೆ ಎನ್ನುತ್ತಾನೆ.
ಅಲ್ಲದೇ, ಯುಧಿಷ್ಠಿರ ನನ್ನನ್ನು ಅರಮನೆಯ ಹೊರಗೆ ಇರಿಸಿದ್ದ. ನಾನು ಕರೆಯದೇ, ನೀವು ಒಳಬರುವ ಹಾಗಿಲ್ಲ ಎಂದು ಹೇಳಿದ್ದ. ಏಕೆಂದರೆ, ಯುಧಿಷ್ಠಿರ ನನ್ನಿಂದ ಕದ್ದು ಮುಚ್ಚಿ, ಜೂಜಾಡಬೇಕೆಂದುಕೊಂಡಿದ್ದ. ಆದರೆ ನನಗೆ ಎಲ್ಲವೂ ತಿಳಿದಿದೆ ಅನ್ನುವುದು ಅವನಿಗೆ ಗೊತ್ತಿರಲಿಲ್ಲ. ಏಕೆಂದರೆ, ದುರಹಂಕಾರ ಅವನ ವಿವೇಕವನ್ನನು ಕೆಡಿಸಿತ್ತು.
ಅರ್ಜುನ, ಭೀಮ, ನಕುಲ, ಸಹದೇವ ಯಾರೂ ನನ್ನನ್ನು ಸಹಾಯಕ್ಕೆ ಕರೆಯಲಿಲ್ಲ. ಆದರೂ ನಾನು ಅರಮನೆಯ ಬಾಗಿಲಲ್ಲೇ ನನ್ನನ್ನು ಕರೆಯಬಹುದೆಂದು ಕಾಯುತ್ತಿದ್ದೆ. ದ್ರೌಪದಿಯನ್ನು ಅವಮಾನಿಸಲು ಆಕೆಯನ್ನು ಸಭೆಗೆ ಕರೆತಂದಾಗ, ಆಕೆ ನನ್ನನ್ನು ಕರೆದಳು. ನಾನು ತಡಮಾಡದೇ ಬಂದು, ಆಕೆಯ ಸಹಾಯ ಮಾಡಿದೆ ಎನ್ನುತ್ತಾನೆ ಶ್ರೀಕೃಷ್ಣ.
ಪುನಃ ಉದ್ಧವ ಕೇಳಿದ. ಶ್ರೀಕೃಷ್ಣ, ನಿನ್ನ ಭಕ್ತರು ಕಷ್ಟದಲ್ಲಿದ್ದಾಗ, ನೀನು ಅವರನ್ನು ಕಾಪಾಡುವುದಿಲ್ಲವೇ..? ಅವರು ನಿನ್ನನ್ನು ನೆನೆದಾಗಷ್ಟೇ ಅವರನ್ನು ನೀನು ಕಾಪಾಡುತ್ತಿಯಾ ಎಂದು ಪ್ರಶ್ನಿಸುತ್ತಾನೆ. ಆಗ ಉತ್ತರಿಸಿದ ಶ್ರೀಕೃಷ್ಣ, ಮನುಷ್ಯನಿಗೆ ಕಷ್ಟ- ಸುಖ ಬರುವುದು ಅವನು ಮಾಡಿದ ಕರ್ಮದಿಂದ. ಅದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಯಾರ ಕಣ್ಣಿಂದ ತಪ್ಪಿಸಿಕೊಂಡರೂ, ದೇವರ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತವನು, ತಪ್ಪು ಮಾಡುವುದಿಲ್ಲ. ಅವನಿಗೆಂದಿಗೂ ಉತ್ತಮ ಫಲವೇ ಸಿಗುತ್ತದೆ. ದೇವರ ಕಣ್ಣು ತಪ್ಪಿಸಿ, ಕೆಟ್ಟ ಕೆಲಸ ಮಾಡೋಣ ಎಂದುಕೊಂಡವನಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಾನೆ.
ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕು ಅನ್ನೋದು ಯಾಕೆ ಗೊತ್ತಾ..?