ಒಬ್ಬಂಟಿಯಾಗಿದ್ರೆ ಮನಸ್ಸಿಗೆ ನೆಮ್ಮದಿ ಅನ್ನೋದು ಹಲವರ ಮಾತು. ಆದ್ರೆ ಒಬ್ಬಂಟಿತನ ಅನ್ನೋದು ಶಾಪವಿದ್ದಂತೆ. ನೀವು ಏಕಾಂಗಿಯಾಗಿದ್ದಾಗ, ನಿಮಗೆ ಯಾವುದೇ ಕಿರಿ ಕಿರಿಯಾಗುವುದಿಲ್ಲ ಸರಿ. ಆದ್ರೆ ನಿಮಗೆ ತೊಂದರೆಯಾದಾಗ, ನಿಮ್ಮ ಬಳಿ ಸಹಾಯಕ್ಕೆ ಬರಲಾದರೂ ಯಾರಾದರೂ ನಿಮ್ಮವರೆಂದು ಇರಬೇಕು. ಅಲ್ಲದೇ ನೀವು ಯಾರೊಂದಿಗಾದರೂ ಪ್ರತಿದಿನ ಕಾಲ್ ಮಾಡಿ ಮಾತನಾಡುವಷ್ಟು ಹತ್ತಿರವಾಗಿರಬೇಕು. ಅದು ನಿಮ್ಮ ಸಂಬಂಧಿಕರೇ ಆಗಿರಬಹುದು, ಗೆಳೆಯರೇ ಆಗಿರಬಹುದು. ಹಾಗಾದ್ರೆ ಯಾಕೆ ಒಬ್ಬಂಟಿಯಾಗಿರಬಾರದು..? ಒಬ್ಬಂಟಿತನದಿಂದ ಮುಕ್ತಿ ಪಡೆಯಲು ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ..
ವಿದೇಶಿ ಮಹಿಳೆಯೊಬ್ಬಳು ತನ್ನ ಬಾಡಿಗೆ ಮನೆಯಲ್ಲಿ ಟಿವಿ ನೋಡುತ್ತ, ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದಳು. ಆಕೆಯ ಬ್ಯಾಂಕ್ ಅಕೌಂಟ್ನಿಂದ ಬಾಡಿಗೆ ಹಣ ಕಟ್ ಆಗುತ್ತ ಹೋಗುತ್ತಿತ್ತು. ಒಂದುವರೆ ವರ್ಷ ಹೀಗೆ ಬಾಡಿಗೆ ಹಣ, ಮನೆ ಓನರ್ ಬಳಿ ಹೋಗುತ್ತಿತ್ತು. ಆದ್ರೆ ಹಣ ಬರುವುದು ನಿಂತ ಮೇಲೆ, ಓನರ್ ನೋಟಿಸ್ ಕಳುಹಿಸಿದ. ನೋಟಿಸ್ಗೆ ಉತ್ತರ ಬರದ ಕಾರಣ, ಆಕೆಯನ್ನು ಮನೆಯಿಂದ ಓಡಿಸಬೇಕೆಂದು ಯೋಚಿಸಿದ.
ಯಮನನ್ನೇ ಗೊಂದಲಕ್ಕೆ ತಳ್ಳಲು ಹೋದ ಅಹಂಕಾರಿ ಕಲಾಕಾರನಿಗೆ ಸಾವು ಸಂಭವಿಸಿದ ಕಥೆ..
ಎರಡು ವರ್ಷ ಬಿಟ್ಟು, ಅವನು ಪೊಲೀಸರನ್ನು ಕರೆದುಕೊಂಡು ಆ ಮನೆಗೆ ಬಂದು ಕದ ತೆಗೆದು ನೋಡಿದ್ರೆ, ಆ ಮಹಿಳೆಯ ಅಸ್ತಿಪಂಜರ ಬೆಡ್ ಮೇಲಿತ್ತು, ಮನೆತುಂಬ ಉಸಿರುಗಟ್ಟಿಸುವ ವಾಸನೆ ಬರತೊಡಗಿತ್ತು. ಮತ್ತು ಟಿವಿ ಆನ್ ಇತ್ತು. ಈ ಬಗ್ಗೆ ಸುತ್ತಮುತ್ತಲಿನ ಮನೆಯವರ ಬಳಿ ವಿಚಾರಿಸಿದಾಗ, ಹೌದು ನಮಗೆ ಕೆಟ್ಟ ವಾಸನೆ ಬರುತ್ತಿತ್ತು. ಆದ್ರೆ ಅದು ಮನೆಪಕ್ಕದಲ್ಲಿರುವ ಕಸದ ಗುಂಡಿಯಿಂದ ಅಂತಾ ನಾವು ತಿಳಿದಿದ್ದೆವು ಎಂದು ಹೇಳಿದರು.
ಯಾಕೆ ಆ ಮಹಿಳೆಯ ಮೃತದೇಹ ಅಲ್ಲೋ ಇತ್ತು ಅಂದರೆ, ಆಕೆಯನ್ನ ಯಾರೂ ನೆನಪಿನಲ್ಲಿರಿಸಿಕೊಂಡಿರಲಿಲ್ಲ. ಆಕೆಯ ಕಾಂಟ್ಯಾಕ್ಟ್ನಲ್ಲಿ ಯಾರೂ ಇರಲಿಲ್ಲ. ಆಕೆ ಸತ್ತರೂ ಬದುಕಿದರೂ ಅದರಿಂದ ಯಾರಿಗೂ ವ್ಯತ್ಯಾಸವಾಗುತ್ತಿರಲಿಲ್ಲ. ಯಾಕಂದ್ರೆ ಆಕೆ ಎಲ್ಲರಿಂದ ದೂರವಾಗಿ, ಒಬ್ಬಂಟಿಯಾಗಿದ್ಲು. ಹಾಗಾಗಿ ಒಬ್ಬಂಟಿತನ ಅನ್ನೋದು ನೆಮ್ಮದಿಯಲ್ಲಿ ಶಾಪ ಅಂತಾ ನಾವು ಹೇಳಿದ್ದು.
ಹಾಗಾದ್ರೆ ಒಬ್ಬಂಟಿತನದಿಂದ ಹೇಗೆ ಮುಕ್ತಿ ಹೊಂದಬೇಕು ಅಂದ್ರೆ, ಪ್ರತಿದಿನ ಅಥವಾ ವಾರಕ್ಕೊಮ್ಮೆಯಾದ್ರೂ ನಿಮ್ಮ ಪ್ರೀತಿ ಪಾತ್ರರ ಬಳಿ ಮಾತನಾಡಿ. ನೀವು ತುಂಬಾ ದಿನವಾದ್ರೂ ಕಾಲ್ ಮಾಡದಿದ್ದಾಗ, ಅವರಾಗಿಯೇ ಕಾಲ್ ಮಾಡಬೇಕು. ಏನಾಯಿತು, ಯಾಕೆ ಕಾಲ್ ಮಾಡಿಲ್ಲ ಅಂತಾ ಯೋಚಿಸಬೇಕು. ಅಂಥವರು ನಿಮ್ಮ ಕಾಂಟ್ಯಾಕ್ಟನಲ್ಲಿರಬೇಕು. ಅಪ್ಪ, ಅಮ್ಮ, ಅಣ್ಣ, ತಮ್ಮ ಯಾರಾದರೂ ಸರಿ.
ನಿಮ್ಮ ಮನೆಯಲ್ಲಿ ಹೀಗೆ ಪೂಜೆ ಮಾಡಿದರೆ…ನಿಮ್ಮ ಪೂಜೆ ದೇವರಿಗೆ ತಲುಪುತ್ತದೆ..!
ಒಬ್ಬಂಟಿಯಾಗಿರುವವರು ಹೆಚ್ಚಾಗಿ ಕೊರಗುತ್ತಿರುತ್ತಾರೆಂದು ಹೇಳಲಾಗುತ್ತದೆ. ಬಾಳ ಸಂಗಾತಿಯಿಂದ ದೂರವಾದವರು, ಅವಿವಾಹಿತರು, ಅನಾಥರು, ಹೀಗೆ ಒಬ್ಬಂಟಿಯಾದವರು ಹೆಚ್ಚು ಕೊರಗುತ್ತಾರೆ. ಹಾಗಾಗಿ ಅಂಥವರಿಗೆ ಹೃದಯಕ್ಕೆ ಸಂಬಂಧಿಸಿದ ಖಾಯಿಲೆ ಹೆಚ್ಚು ಬರುತ್ತದೆ ಅಂತಾ ಹೇಳಲಾಗಿದೆ. ಹಾಗಾಗಿ ನಿಮ್ಮ ಏಕಾಂಗಿತನವನ್ನು ಹೋಗಲಾಡಿಸಲು ಒಂದು ನಾಯಿಯನ್ನು ಸಾಕಿ. ಅದು ನಿಮ್ಮ ಗೆಳೆಯನಂತಿರುತ್ತದೆ. ನಿಮಗೆ ಸಮಸ್ಯೆಯಾದರೂ, ಅದು ನಿಮಗೆ ಸಹಾಯ ಮಾಡಬಲ್ಲದು.
ನಿಮಗಿಷ್ಟವಾದ ಆಟಗಳನ್ನ ಆಡಿ. ಸ್ಪೋರ್ಟ್ಸ್ ಕ್ಲಬ್ಗಳಿಗೆ ಹೋದ್ರೆ, ನಿಮ್ಮ ಏಕಾಂಗಿತನ ಹೋಗುತ್ತದೆ. ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಆದ್ರೆ ನಿಮ್ಮ ಸೆಫ್ಟಿ ಮುಖ್ಯವಾಗಿರಲಿ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅನಾಮಿಕನ ಹತ್ತಿರ ಸ್ನೇಹ ಮಾಡುವುದು ಅಷ್ಟು ಸರಿಯಲ್ಲ. ಹಾಗಾಗಿ ಅಂಥವರ ಮೇಲೆಲ್ಲ ವಿಶ್ವಾಸವಿಡಬೇಡಿ.