ಈ ಕಥೆಗೆ ಸಂಬಂಧಿಸಿದಂತೆ ನಾವು ಈ ಹಿಂದಿನ ಭಾಗದಲ್ಲಿ ಯುವಕ ಮಂತ್ರವನ್ನು ಹೇಳಿಸಿಕೊಂಡು ಹೇಗೆ ಮಾವಿನ ಹಣ್ಣು ಮಾಡಿ, ಮಾರುತ್ತಾನೆ. ಅವನ ಮಾವಿನ ಹಣ್ಣನ್ನು ಇಷ್ಟಪಟ್ಟ ರಾಜ ಪ್ರತಿದಿನ ತನಗೊಂದು ಬುಟ್ಟಿ ಮಾವಿನ ಹಣ್ಣು ಬೇಕೆಂದು ಕೇಳುತ್ತಾನೆ ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದೇನಾಯಿತು ಅೞತಾ ತಿಳಿಯೋಣ ಬನ್ನಿ..
ಯುವಕನಿಗೆ ಖುಷಿಯಾಗುತ್ತದೆ. ಪ್ರತಿದಿನ ಅರಮನೆಗೆ ಒಂದು ಬುಟ್ಟಿ ಮಾವಿನ ಹಣ್ಣು ಹೋಗುತ್ತದೆ. ಜೊತೆಗೆ ಯುವಕನಿಗೆ ರಾಶಿ ರಾಶಿ ಹಣವೂ ಸಿಗುತ್ತದೆ. ಒಮ್ಮೆ ರಾಜ ಆ ಯುವಕನನ್ನು ಭೇಟಿಯಾಗಬೇಕು ಎನ್ನುತ್ತಾನೆ. ಹಾಗೆ ಭೇಟಿಯಾದಾಗ, ನೀನು ನನಗೆ ಪ್ರತಿದಿನ ಮಾವಿನ ಹಣ್ಣು ಕೊಡುತ್ತಿಯಾ. ಅದು ತುಂಬ ಸ್ವಾದಿಷ್ಟವಾಗಿದೆ. ಆದರೆ ಇದು ಮಾವಿನ ಹಣ್ಣಾಗುವ ಸಮಯವಲ್ಲ. ಹಾಗಾದ್ರೆ ನೀನು ಮಾವಿನ ಹಣ್ಣನ್ನು ಎಲ್ಲಿಂದ ತರುತ್ತೀ ಎಂದು ಕೇಳುತ್ತಾರೆ.
ನೀವು ಇದನ್ನು ಸ್ವೀಕಾರ ಮಾಡಿದ್ದಲ್ಲಿ, ಜೀವನದಲ್ಲಿ ಖುಷಿಯಿಂದ ಇರುತ್ತೀರಿ.. ಭಾಗ 2
ಅದಕ್ಕೆ ಯುವಕ ನನ್ನ ಬಳಿ ಮಂತ್ರ ಶಕ್ತಿ ಇದೆ. ಅದನ್ನು ಬಳಸಿ ನಾನು ಮಾವಿನ ಹಣ್ಣನ್ನು ತರುತ್ತೇನೆ ಎನ್ನುತ್ತಾನೆ. ಯುವಕ ಮತ್ತು ರಾಜ ಕಾಡಿಗೆ ಹೋಗುತ್ತಾರೆ. ರಾಜನ ಎದುರೆ ಖಾಲಿ ಇದ್ದ ಮಾವಿನ ಮರದಲ್ಲಿ ಮಂತ್ರೋಚ್ಛಾರಣೆ ಮೂಲಕ ಮಾವಿನ ಹಣ್ಣಾಗುವಂತೆ ಮಾಡುತ್ತಾನೆ. ಅದನ್ನು ನೋಡಿದ ರಾಜ ಖುಷಿಯಾಗುತ್ತಾನೆ. ನಂತರ ಈ ಮಂತ್ರ ನಿನಗೆ ಹೇಳಿಕೊಟ್ಟವರು ಯಾರು ಎಂದು ಕೇಳುತ್ತಾನೆ.
ಯುವಕ ಪರಮ ಗುರೂಜಿಯ ಹೆಸರನ್ನು ಹೇಳಿದರೆ, ತನಗೆ ಅವಮಾನವಾಗುತ್ತದೆ ಎಂದು ತಿಳಿದು, ತಾನು ಇದನ್ನು ತನ್ನ ಗುರುಕುಲದ ಗುರುವಿನಿಂದ ಕಲಿತಿದ್ದೇನೆ ಎಂದು ಹೇಳುತ್ತಾನೆ. ಪರಮ ಗುರೂಜಿಯ ಹೆಸರು ಹೇಳುವುದಿಲ್ಲ. ರಾಜ ಯುವಕನನ್ನು ಹೊಗಳಿ, ಒಂದಿಷ್ಟು ಉಡುಗೊರೆ ಕೊಟ್ಟು ಹೊರಡುತ್ತಾನೆ. ಮರುದಿನ ರಾಜನಿಗೆ ಒಂದು ಬುಟ್ಟಿ ಮಾವಿನ ಹಣ್ಣು ಕೊಡಬೇಕೆಂದು ಮತ್ತೆ ಕಾಡಿಗೆ ಹೊರಡುತ್ತಾನೆ. ಆದ್ರೆ ಯುವಕ ಮಂತ್ರೋಚ್ಛಾರಣೆ ಮಾಡಿದಾಗ, ಮಾವಿನ ಹಣ್ಣಾಗುವುದಿಲ್ಲ. ಎಷ್ಟೇ ಬಾರಿ ಮಂತ್ರೋಚ್ಛಾರಣೆ ಮಾಡಿದರೂ ಮಾವಿನ ಹಣ್ಣು ಆಗುವುದೇ ಇಲ್ಲ.
ನೀವು ಇದನ್ನು ಸ್ವೀಕಾರ ಮಾಡಿದ್ದಲ್ಲಿ, ಜೀವನದಲ್ಲಿ ಖುಷಿಯಿಂದ ಇರುತ್ತೀರಿ.. ಭಾಗ 1
ಆಗ ಅವನಿಗೆ ಈ ಮಂತ್ರೋಚ್ಛಾರಣೆ ಮಾಡಿದ ಗುರುಗಳು, ಯಾರಾದರೂ ಇದ್ನನು ಹೇಳಿಕೊಟ್ಟಿದ್ದು ಯಾರೆಂದು ಕೇಳಿದಾಗ ನನ್ನ ಹೆಸರೇ ಹೇಳಬೇಕು. ನೀನು ಸುಳ್ಳು ಹೇಳಿದ್ದಲ್ಲಿ, ಅದರ ಶಕ್ತಿ ಹೊರಟು ಹೋಗುತ್ತದೆ ಅಂತಾ ಹೇಳಿದ್ದು ನೆನಪಾಯಿತು. ಅವನು ತನ್ನ ತಪ್ಪನ್ನು ಒಪ್ಪಿಕೊಂಡು ರಾಜನ ಬಳಿ ಮತ್ತು ಪರಮ ಗುರುಗಳ ಬಳಿ ಕ್ಷಮೆ ಕೇಳುತ್ತಾನೆ. ಆದ್ರೆ ಅವನಿಗೆ ಗುರುಗಳು ಮತ್ತೆ ಆ ಮಂತ್ರವನ್ನ ಉಪದೇಶ ಮಾಡುವುದಿಲ್ಲ. ಒಂದು ಸುಳ್ಳಿನಿಂದ ಆ ಯುವಕ ತನ್ನನ್ನು ಶ್ರೀಮಂತವಾಗಿಸಿದ್ದ ಕೆಲಸವನ್ನೇ ಕಳೆದುಕೊಳ್ಳುತ್ತಾನೆ.