ಲಕ್ಷ್ಮೀ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಆಕೆ ಸದಾ ನಮ್ಮ ಮನೆಯಲ್ಲೇ ಇರಲಿ, ಶ್ರೀಮಂತಿಕೆ ಬರಲಿ ಅಂತಾ ಬಯಸುವರೇ ಹೆಚ್ಚು. ಆದರೆ, ನೀವು ಕೆಲವು ಕೆಟ್ಟ ಅಭ್ಯಾಸಗಳಿಗೆ ದಾಸರಾಗಿದ್ದರೆ, ನಿಮ್ಮ ಮನೆಗೆ ಲಕ್ಷ್ಮೀ ಬರಲು ಸಾಧ್ಯವೇ ಇಲ್ಲ. ಹಾಗಾಗಿ ನಾವಿಂದು ಯಾವ ಕೆಟ್ಟ ಅಭ್ಯಾಸಗಳಿದ್ದರೆ, ಲಕ್ಷ್ಮೀ ಒಲಿಯುವುದಿಲ್ಲಅಂತಾ ಹೇಳಲಿದ್ದೇವೆ..
ಮೊದಲನೇಯ ಅಭ್ಯಾಸ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ನಿಮ್ಮ ಮನೆ, ಮನೆಯಂಗಳವನ್ನ ಪ್ರತಿದಿನ ಗುಡಿಸಿ, ಒರೆಸಿ ಕ್ಲೀನ್ ಆಗಿದ್ದರೆ, ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಆಗ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಬೇಕಿದ್ದರೆ, ಗಮನಿಸಬಹುದು. ಯಾವಾಗಲೂ ಜೇಡ ಗೂಡು ಕಟ್ಟಿದ ಮನೆ, ಧೂಳಿನಿಂದ ಕೂಡಿದ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇರುವುದಿಲ್ಲ. ಅಂಥವರು ಶ್ರೀಮಂತರಾಗಲು ಸಾಧ್ಯವೇ ಇಲ್ಲ.
ಎರಡನೇಯ ಅಭ್ಯಾಸ ಅಲ್ಲಲ್ಲಿ ಉಗುಳುವ ಅಭ್ಯಾಸ. ಇದೊಂದು ದರಿದ್ರ ಅಭ್ಯಾಸ. ಕೆಲವರು ರಸ್ತೆಯಲ್ಲಿ ಹೋಗುವಾಗ, ಸುಮ್ಮ ಸುಮ್ಮನೆ ಉಗುಳುತ್ತಾರೆ. ಇನ್ನು ಕೆಲವರು ಮನೆಯಲ್ಲೇ ಅಲ್ಲಲ್ಲಿ ಉಗುಳುತ್ತಾರೆ. ಅಂಥ ಅಭ್ಯಾಸ ಇದ್ದವರ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಎಂದಿಗೂ ಉತ್ತಮವಾಗಿರುವುದಿಲ್ಲ. ಹಾಗಾಗಿ ಅಲ್ಲಲ್ಲಿ ಉಗುಳುವ ಅಭ್ಯಾಸವಿದ್ದರೆ, ಅದನ್ನು ಇಂದೇ ಬಿಡಿ.
ಮೂರನೇಯ ಅಭ್ಯಾಸ ಮನೆಯಲ್ಲೇ ಉಗುರು ತೆಗೆದು ಹಾಕುವ ಅಭ್ಯಾಸ. ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ಉಗುರು ತೆಗೆಯಬಾರದು ಅಂತಾ ಹೇಳಲಾಗತ್ತೆ. ಈ ದಿನ ಉಗುರು ತೆಗೆದರೆ, ಮನೆಗೆ ಒಳ್ಳೆಯದಲ್ಲ ಅಂತಾ ಹೇಳಲಾಗಿದೆ. ಸೋಮವಾರ, ರವಿವಾರ, ಬುಧವಾರದ ದಿನ ಉಗುರು ತೆಗೆಯಬಹುದು. ಆದರೆ ಉಗುರು ತೆಗೆದು ಹೊರಗೆ ಹಾಕಬೇಕು. ಮನೆಯಲ್ಲಿ ಹಾಕಬಾರದು.
ನಾಲ್ಕನೇಯ ಅಭ್ಯಾಸ ಚಪ್ಪಲಿಯನ್ನು ಎಲ್ಲಿ ಬೇಕೆಂದರಲ್ಲಿ ಎಸೆಯುವ ಅಭ್ಯಾಸ. ಚಪ್ಪಲಿಯನ್ನು ನೀಟಾಗಿ ಜೋಡಿಸಿ, ಒಂದೆಡೆ ಇಡಬೇಕು. ಎಲ್ಲೆಂದರಲ್ಲಿ ಚಪ್ಪಲಿಯನ್ನ ಬಿಸಾಕಿದರೆ, ಅದರಿಂದಲೂ ಮನೆಯಲ್ಲಿ ಹಣದ ಸಮಸ್ಯೆ ಬರುತ್ತದೆ. ಚಪ್ಪಲಿ ಅಡ್ಡಬಿದ್ದಲ್ಲಿ, ಮನೆಯಲ್ಲಿ ಜಗಳವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಚಪ್ಪಲಿಯನ್ನ ನೀಟಾಗಿ ಜೋಡಿಸಿಡಿ. ಇನ್ನು ಎರಡು ಜೊತೆ ಚಪ್ಪಲಿ ಇದ್ದರೆ ಸಾಕು. ಅದಕ್ಕಿಂತ ಹೆಚ್ಚು ಚಪ್ಪಲಿಗಳಿದ್ದರೆ, ಮನೆಗೆ ಒಳ್ಳೆಯದಲ್ಲ.
ಐದನೇಯ ಅಭ್ಯಾಸ ಎಂಜಿಲು ತಟ್ಟೆಯನ್ನು ತೊಳೆಯದೇ, ಹಾಗೆ ಒಣಗಿಸುವ ಅಭ್ಯಾಸ. ಕೆಲವರು ರಾತ್ರಿ ಉಂಡ ತಟ್ಟೆಯನ್ನ ತೊಳೆಯದೇ, ಹಾಗೆ ಇಡುತ್ತಾರೆ. ಅದನ್ನ ಮರುದಿನ ಬೆಳಿಗ್ಗೆ ತೊಳೆಯುತ್ತಾರೆ. ಆದ್ರೆ ಹಾಗೆ ಮಾಡುವುದು ತಪ್ಪು. ಉಂಡ ತಕ್ಷಣವೇ ತಟ್ಟೆಯನ್ನು ತೊಳೆದಿಡಬೇಕು. ಹಿರಿಯರ ಪ್ರಕಾರ, ಆ ತಟ್ಟೆ ಒಣಗಿದಂತೆ, ಅದರಿಂದ ಬರುವ ನಕಾರಾತ್ಮಕ ಪರಿಣಾಮ, ಆರ್ಥಿಕ ಸಮಸ್ಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಆರನೇಯ ಅಭ್ಯಾಸ ಒಣಗಿದ ಗಿಡವನ್ನು ಮನೆಯಲ್ಲೇ ಇರಿಸಿಕೊಳ್ಳುವುದು. ನಿಮ್ಮ ಮನೆಯಲ್ಲಿ ಯಾವುದಾದರೂ ಒಣಗಿದ ಗಿಡವಿದ್ದರೆ, ಮೊದಲು ಅದನ್ನು ಮನೆಯಿಂದ ತೆಗೆದುಹಾಕಿ. ಏಕೆಂದರೆ, ಒಣಗಿದ ಗಿಡ, ಮರಗಳಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ. ಹಾಗಾಗಿ ಅದನ್ನು ಕಿತ್ತೆಸೆದು, ಪುನಃ ಉತ್ತಮವಾದ ಗಿಡವನ್ನು ನೆಟ್ಟು, ಅದಕ್ಕೆ ಪ್ರತಿದಿನ ನೀರುಣಿಸಿ, ಚೆನ್ನಾಗಿ ಬೆಳೆಸಿ.
ಪತಿ ತನ್ನ ಪತ್ನಿಯ ಬಳಿ ಈ ವಿಚಾರಗಳನ್ನ ಹೇಳದಿರುವುದೇ ಉತ್ತಮ ಎನ್ನುತ್ತಾರೆ ಚಾಣಕ್ಯರು..
ವಿದ್ಯಾರ್ಥಿಗಳು ಈ 4 ವಿಚಾರಗಳನ್ನ ತಿಳಿಯಲೇಬೇಕು ಎನ್ನುತ್ತಾನೆ ಶ್ರೀಕೃಷ್ಣ..