ಹಿಂದೂಗಳಲ್ಲಿ ಹಲವು ನಂಬಿಕೆಗಳಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ನಂಬಿಕೆಗಳು. ಆದರೆ ಬ್ರಾಹ್ಮಿ ಮುಹೂರ್ತದ ವಿಷಯಕ್ಕೆ ಬಂದಾಗ ಮಾತ್ರ, ಎಲ್ಲರದ್ದೂ ಒಂದೇ ನಂಬಿಕೆ. ಅದೇನಂದ್ರೆ, ಬ್ರಾಹ್ಮಿ ಮುಹೂರ್ತ ಅನ್ನೋದು ಅತ್ಯುತ್ತಮ ಮುಹೂರ್ತ. ಈ ಸಮಯದಲ್ಲಿ ವಿವಾಹವಾದರೆ, ಅಂಥವರ ವೈವಾಹಿಕ ಜೀವನ ಉತ್ತಮವಾಗಿರತ್ತೆ. ಈ ಸಮಯದಲ್ಲಿ ಯಾವುದೇ ಉತ್ತಮ ಕೆಲಸ ಮಾಡಿದರೂ, ಅದು ಫಲ ಕೊಡತ್ತೆ ಅಂತಾ ಎಲ್ಲರಿಗೂ ಗೊತ್ತು. ಆದ್ರೆ ಇಂದು ನಾವು ಬ್ರಾಹ್ಮಿ ಮುಹೂರ್ತದಲ್ಲಿ ಮಾಡಬಾರದ ಕೆಲ ಕೆಲಸಗಳ ಬಗ್ಗೆ ಹೇಳಲಿದ್ದೇವೆ.
ಮೊದಲನೇಯ ತಪ್ಪು ಬ್ರಾಹ್ಮಿ ಮುಹೂರ್ತದಲ್ಲಿ ಮಲಗುವುದು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಸ್ನಾನಾದಿಗಳನ್ನು ಮಾಡಿ. ಪೂಜೆ ಮಾಡಿ, ಕೆಲಸ ಶುರು ಮಾಡುವುದರಿಂದ, ಆ ಕೆಲಸದಲ್ಲಿ ನಾವು ಉನ್ನತಿ ಹೊಂದುತ್ತೇವೆಂಬ ನಂಬಿಕೆ ಇದೆ. ನೀವಂದುಕೊಂಡ ಕೆಲಸದಲ್ಲಿ ಉನ್ನತಿ ಹೊಂದಬೇಕೆಂದರೆ, ಬ್ರಾಹ್ಮಿ ಮುಹೂರ್ತದಲ್ಲಿ ನಿದ್ದೆ ಮಾಡಬಾರದು.
ಎರಡನೇಯ ತಪ್ಪು ಬ್ರಾಹ್ಮಿ ಮುಹೂರ್ತದಲ್ಲಿ ಆಹಾರ ಸೇವನೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿ, ಪೂಜೆ ಮಾಡಿ ನೀವು ನೀರು ಕುಡಿಯಬಹುದು. ಆದರೆ ಈ ಸಮಯದಲ್ಲಿ ಆಹಾರ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ, ಆರೋಗ್ಯವೂ ಹಾಳಾಗುತ್ತದೆ.
ಮೂರನೇಯ ತಪ್ಪು ಬ್ರಾಹ್ಮಿ ಮುಹೂರ್ತದಲ್ಲಿ ಕಣ್ಣೀರು ಹಾಕುವುದು, ಜಗಳವಾಡುವುದು. ಬ್ರಾಹ್ಮಿ ಮುಹೂರ್ತವೆಂದರೆ, ಉತ್ತಮವಾದ ಮುಹೂರ್ತ. ಇದು ದೇವತೆಗಳು ಪ್ರಸನ್ನವಾಗುವಂಥ ಮುಹೂರ್ತವೂ ಹೌದು. ಹಾಗಾಗಿ ಇಂಥ ಸಮಯದಲ್ಲಿ ಖುಷಿಯಾಗಿರಬೇಕು. ಶಾಂತವಾಗಿರಬೇಕು. ಇಂಥ ಸಮಯದಲ್ಲಿ ಜಗಳವಾಡಿದರೆ, ಸಿಟ್ಟಲ್ಲಿದ್ದರೆ, ಕಣ್ಣೀರು ಹಾಕಿದರೆ, ಆ ಮನೆಗೆ ಎಂದಿಗೂ ಒಳ್ಳೆಯದಾಗುವುದಿಲ್ಲ. ಅಂಥವರು ತಮ್ಮ ಕಾರ್ಯದಲ್ಲಿ ಸಫಲರಾಗಲು ಸಾಧ್ಯವೇ ಇಲ್ಲ.
ವಿದ್ಯಾರ್ಥಿಗಳು ಈ 4 ವಿಚಾರಗಳನ್ನ ತಿಳಿಯಲೇಬೇಕು ಎನ್ನುತ್ತಾನೆ ಶ್ರೀಕೃಷ್ಣ..
ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 2
ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 1