Thursday, June 19, 2025

Latest Posts

ತಿರುಪತಿ ತಿರುಮಲನಿಗೆ ಯಾವ ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಮಾಡಲಾಗುತ್ತದೆ..?

- Advertisement -

Spiritual: ತಿರುಪತಿ ಎಂದ ತಕ್ಷಣ ನಮಗೆ ನೆನಪಾಗುವುದು ದೀಪದ ಬೆಳಕಲ್ಲಿ ಕಂಗೊಳಿಸುವ ಬಾಲಾಜಿ ಮತ್ತು ತಿರುಪತಿ ಲಾಡು. ಆದರೆ ತಿರುಮಲನಿಗೆ ಲಾಡುವಿನ ಜೊತೆ ಇನ್ನೂ ಹಲವರು ಪದಾರ್ಥಗಳನ್ನು ನೈವೇದ್ಯ ಮಾಡಲಾಗುತ್ತದೆ. ಹಾಗಾದರೆ ತಿರುಮಲನಿಗೆ ಏನೇನು ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಯಾವ ಸೇವೆ ಮಾಡಲಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಗುರುವಾರ ಮತ್ತು ಶುಕ್ರವಾರ ಬಿಟ್ಟು ಉಳಿದೆಲ್ಲ ದಿನ ಬಾಲಾಜಿಗೆ ತ್ರಿಕಾಲ ನೈವೇದ್ಯ ನಡೆಯುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ, ಮಧ್ಯಾಹ್ನದ ವೇಳೆ ಮತ್ತು ರಾತ್ರಿ ಪೂಜೆಯ ವೇಳೆ ನೈವೇದ್ಯ ಮಾಡಲಾಗುತ್ತದೆ. ಬೆಳಿಗ್ಗೆ ಹಸುವಿನ ಹಾಲು, ಬೆಣ್ಣೆ ಮತ್ತು ಸಕ್ಕರೆಯನ್ನು ನೈವೇದ್ಯ ಮಾಡಲಾಗುತ್ತದೆ. ಇದಾದ ಬಳಿಕ ಮೊಸರು, ಕೆನೆಯಿಂದ ಮಾಡಿದ ಖಾದ್ಯವನ್ನು ನೈವೇದ್ಯ ಮಾಡಲಾಗುತ್ತದೆ.

ಮಧ್ಯಾಹ್ನ ಪೂಜೆಯ ವೇಳೆ ಅನ್ನ, ಶೀರಾ, ಪಾಯಸವನ್ನು ನೈವೇದ್ಯ ಮಾಡಲಾಗುತ್ತದೆ. ಬಳಿಕ, ಅನ್ನಪ್ರಸಾದವಾಗಿ ಭಕ್ತರಿಗೆ ನೀಡಲಾಗುತ್ತದೆ. ರಾತ್ರಿ ಪೊಂಗಲ್, ಕದಂಬಂ, ಮುಲಾಹೋರವನ್ನು ನೈವೇದ್ಯವಾಗಿ ನೀಡಲಾಗುತ್ತದೆ. ಕೊನೆಯದಾಗಿ ಹಾಲು, ಹಣ್ಣು, ಪಂಚಾಮೃತ ಮತ್ತು ಪಂಚಕಜ್ಜಾಯವನ್ನು ನೈವೇದ್ಯ ಮಾಡಲಾಗುತ್ತದೆ.

ಇದರ ಮಧ್ಯೆ ಮಧ್ಯೆ ನಡೆಯುವ ಪೂಜೆಯಲ್ಲಿ ಲಾಡು, ಪುಳಿಹೋರ, ಪೊಂಗಲ್, ಖಾರಾ ಪೊಂಗಲ್‌ ಇತ್ಯಾದಿಯನ್ನು ನೈವೇದ್ಯಕ್ಕಿಡಲಾಗುತ್ತದೆ. ಬೆಳಿಗ್ಗೆ ಬಾಲಾಜಿಯ ದರ್ಶನ ಮಾಡುವ ಭಕ್ತರಿಗೆ ಈ ಲಾಡು, ಪುಳಿಹೋರ, ಪೊಂಗಲ್‌ನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇಲ್ಲಿ ಬರೀ ಬಾಲಾಜಿಗಷ್ಟೇ ಅಲ್ಲದೇ, ಆಂಜನೇಯಸ್ವಾಮಿ, ಭೂವರಾವ ಸ್ವಾಮಿ ಸೇರಿ ಹಲವು ದೇವರುಗಳಿಗೆ ನೈವೇದ್ಯ ಮಾಡಲಾಗುತ್ತದೆ.

ಮೊದಲಿನ ಪದ್ಧತಿಯಂತೆ ಇಲ್ಲಿ ಸೌದೆ ಬಳಸಿ ಒಲೆ ಉರಿಸಿ ನೈವೇದ್ಯ ತಯಾರಿಸಲಾಗುತ್ತದೆ. ಈ ನೈವೇದ್ಯವನ್ನು ಮೊದಲು ಭೂವರಾಹ ಸ್ವಾಮಿಗೆ ನೀಡಿ, ಬಳಿಕ ಬಾಲಾಜಿಗೆ ನೀಡಲಾಗುತ್ತದೆ. ಇಷ್ಟೇ ಅಲ್ಲದೇ, ಇನ್ನೂ ವಿವಿಧ ಭಕ್ಷ್ಯಗಳನ್ನು ತಯಾರಿಸಿ, ತಿರುಪತಿ ತಿಮ್ಮಪ್ಪನಿಗೆ ನೈವೇದ್ಯ ಮಾಡಲಾಗುತ್ತದೆ. ವೈಕುಂಠ ಏಕಾದಶಿಯಂದು ವಿಶೇಷ ನೈವೇದ್ಯಗಳನ್ನು ತಯಾರಿಸಲಾಗುತ್ತದೆ.

ಅಮರನಾಥ ಯಾತ್ರೆಗೆ ಹೋಗುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿರಿಸಿ..

ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನದ ಹಿನ್ನೆಲೆ ಏನು..?

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಇತಿಹಾಸವೇನು..?

- Advertisement -

Latest Posts

Don't Miss