Friday, June 20, 2025

Latest Posts

ಹಿಂದೂಗಳು ಪೂಜೆಯಲ್ಲಿ ಬಳಸುವ ಪವಿತ್ರವಾದ ಎಲೆಗಳಿವು..

- Advertisement -

Spiritual: ಹಿಂದೂ ಧರ್ಮದಲ್ಲಿ ಪ್ರಕೃತಿಯನ್ನು ಕೂಡ ಆರಾಧಿಸಲಾಗುತ್ತದೆ. ಹಾಗಾಗಿ ಪೂಜೆಗೆ ಪ್ರಕೃತಿಯಿಂದ ಸಿಕ್ಕ ಕೊಡುಗೆಗಳನ್ನೇ ನಾವು ಉಪಯೋಗಿಸುವುದು. ಎಲೆ, ಹೂವು, ಹಾಲು, ಜೇನು ಇವುಗಳನ್ನೇ ನೈವೇದ್ಯ ಮಾಡುವುದು. ಅದರಲ್ಲೂ ಕೆಲವು ಎಲೆಗಳನ್ನು ಹಿಂದೂ ಧರ್ಮದ ಪೂಜೆಗಳಲ್ಲಿ ಪವಿತ್ರ ಸ್ಥಾನ ಕೊಟ್ಟು, ಬಳಸಲಾಗುತ್ತದೆ. ಅಂಥ ಎಲೆಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ತುಳಸಿ ಎಲೆ: ತುಳಸಿ ಗಿಡವನ್ನು ಹಿಂದೂಗಳು ಪ್ರತೀ ವರ್ಷ, ತುಳಸಿ ಹಬ್ಬಕ್ಕೆ ಪೂಜಿಸುತ್ತಾರೆ. ಅಲ್ಲದೇ, ಮನೆಯ ಗೃಹಿಣಿ, ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕಿ, ಪೂಜಿಸಬೇಕು ಎಂಬ ನಿಯಮವಿದೆ. ಅದೇ ರೀತಿ ಪೂಜೆಗೆ ಬಳಸುವ ನೈವೇದ್ಯಕ್ಕೂ ತುಳಸಿ ಎಲೆ ಹಾಕಲಾಗುತ್ತದೆ. ಕೆಲವು ದೇವರಿಗೆ ತುಳಸಿ ಎಲೆಯಿಂದ, ಮಾಲೆಯಿಂದ ಶೃಂಗಾರ ಮಾಡಲಾಗುತ್ತದೆ.

ವೀಳ್ಯದೆಲೆ: ವೀಳ್ಯದೆಲೆ ತಿನ್ನುವುದಕ್ಕೆ, ಕೆಲವು ಔಷಧಿಗಳ ತಯಾರಿಕೆಗೆ, ಕೆಲವು ಪದಾರ್ಥಗಳನ್ನು ತಯಾರಿಸುವುದಕ್ಕೆ ಬಳಸಲಾಗುತ್ತದೆ. ಆದರೆ, ಅದೆಲ್ಲದಕ್ಕಿಂತ ಮುಖ್ಯವಾಗಿ, ವೀಳ್ಯದೆಲೆಯನ್ನು, ಪೂಜೆಯ ವೇಳೆ, ನೈವೇದ್ಯಕ್ಕೆ ಬಳಸಲಾಗುತ್ತದೆ. ತೆಂಗಿನಕಾಯಿ, ಹಣ್ಣು, ಅಡಿಕೆಯೊಂದಿಗೆ ವೀಳ್ಯದೆಲೆಯನ್ನಿಟ್ಟು ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಏಕೆಂದರೆ ವೀಳ್ಯದೆಲೆ ಪವಿತ್ರ ಮತ್ತು ಮಂಗಳಕರವಾಗಿದೆ.

ಮಾವಿನ ಎಲೆ: ಮಾವಿನ ಎಲೆಯನ್ನು ತೋರಣ ಕಟ್ಟಲು ಬಳಸಲಾಗುತ್ತದೆ. ಮನೆಗೆ ಮಾವಿನ ತೋರಣ ಕಟ್ಟಿದರೆ, ಮನೆಯ ಅಂದ ಹೆಚ್ಚುತ್ತದೆ. ಅಲ್ಲದೇ, ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಆಗಮನವೂ ಆಗುವುದಿಲ್ಲ. ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ.

ಬಿಲ್ವಪತ್ರೆ: ಶಿವನಿಗೆ ಇಷ್ಟವಾಗುವ ಎಲೆ ಅಂದ್ರೆ, ಬಿಲ್ವಪತ್ರೆ. ಹಾಗಾಗಿ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಲು ಮಾತ್ರ ಉಪಯೋಗಿಸಲಾಗುತ್ತದೆ. ಈ ಪವಿತ್ರ ಎಲೆಯ ಅರ್ಪಣೆಯಿಂದ, ಶಿವ ಸಂತುಷ್ಟಗೊಳ್ಳುತ್ತಾನೆಂಬ ನಂಬಿಕೆ ಇದೆ.

ಬಾಳೆ ಎಲೆ: ಬಾಳೆ ಎಲೆಯನ್ನು ಊಟ ಮಾಡಲು, ನೈವೇದ್ಯ ಮಾಡಲು ಬಡಿಸಲಾಗುತ್ತದೆ. ಬಾಳೆಎಲೆಯಲ್ಲಿ ನೈವೇದ್ಯವನ್ನಿಟ್ಟು, ದೇವರಿಗೆ, ಹಸುಗಳಿಗೆ, ಕಾಗೆಗಳಿಗೆ ಅರ್ಪಿಸಲಾಗುತ್ತದೆ. ಬಾಳೆ ಎಲೆಯಲ್ಲಿಟ್ಟು ಅರ್ಪಿಸುವ ನೇವೈದ್ಯ ಶ್ರೇಷ್ಟವೆಂಬ ನಂಬಿಕೆ ಇದೆ. ಅಲ್ಲದೇ, ಬಾಳೆ ಎಲೆಯಲ್ಲಿ ಉಂಡರೆ, ಆ ಎಲೆಯಲ್ಲಿರುವ ಆರೋಗ್ಯಕರ ಅಂಶವು ನಮ್ಮ ದೇಹ ಸೇರಿ, ನಮ್ಮ ಆರೋಗ್ಯದಲ್ಲೂ ಅಭಿವೃದ್ಧಿಯಾಗುತ್ತದೆ. ಹಾಗಾಗಿ ಬಾಳೆಎಲೆ ಊಟ ಪವಿತ್ರವೂ ಹೌದು, ಆರೋಗ್ಯಕರವೂ ಹೌದು.

ಮನೆಯ ಉದ್ಧಾರದ ವಿಷಯದಲ್ಲಿ ಹೆಣ್ಣು ಮಕ್ಕಳು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ನೀವು ಆರ್ಥಿಕವಾಗಿ ಸಬಲರಾಗಿರಬೇಕು ಅಂದ್ರೆ ವಿದುರನ ಈ ಮಾತುಗಳನ್ನು ಕೇಳಿ..

ಬ್ರಾಹ್ಮಿ ಮುಹೂರ್ತದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದು ಗೊತ್ತಾ..?

- Advertisement -

Latest Posts

Don't Miss