Health Tips: ನಾವು ನಮಗೆ ಜ್ವರ, ನೆಗಡಿ, ಕೆಮ್ಮು ಬಂದಾಗ, ಮನೆ ಮದ್ದು ಮಾಡಿ, ಆರೋಗ್ಯವನ್ನು ಸರಿಪಡಿಸಿಕೊಂಡು ಬಿಡುತ್ತೇವೆ. ಆದರೆ ಮಕ್ಕಳ ವಿಷಯದಲ್ಲಿ ಹಾಗೆ ಎಂದಿಗೂ ಮಾಡಬಾರದು. ಮಗುವಿಗೆ ಕೆಮ್ಮು, ನೆಗಡಿ, ಜ್ವರ ಬಂದ ತಕ್ಷಣವೇ, ತಡಮಾಡದೇ ವೈದ್ಯರ ಬಳಿ ಕರೆದೊಯ್ಯಬೇಕು. ಏಕೆಂದರೆ, ಅದು ನಿಮೋನಿಯಾದ ಲಕ್ಷಣವಿರಬಹುದು. ಹಾಗೆ ನಿಮೋನಿಯಾ ಬಂದಾಗ, ಅದನ್ನು ನಿರ್ಲಕ್ಷಿಸಿದರೆ, ಅದು ಮಗುವಿನ ಜೀವಕ್ಕೇ ಕುತ್ತು ತರಬಹುದು. ಈ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ..
ವೈದ್ಯರಾದ ಡಾ.ಸಹನಾ ದೇವದಾಸ್ ಈ ಬಗ್ಗೆ ವಿವರಿಸಿದ್ದು, ಮಗುವಿಗೆ ಶೀತ, ನೆಗಡಿ, ಜ್ವರ ಬಂದಾಗ, ಉತ್ತಮ ಚಿಕಿತ್ಸೆ ಕೊಡಿಸಬೇಕು. ಇದೇನಾದರೂ ನಿಮೋನಿಯಾ ಲಕ್ಷಣವಿದ್ದಲ್ಲಿ, ಮಗುವಿನ ಉಸಿರಾಟದಲ್ಲಿ ತೊಂದರೆಯಾಗುತ್ತದೆ. ಕೆಲ ದಿನಗಳಲ್ಲೇ ಮಗು ಹಾಲು ಕುಡಿಯುವುದನ್ನು ನಿಲ್ಲಿಸುತ್ತ ಬರುತ್ತದೆ. ಕೆಲವರಿಗೆ ಮಗು ಹಾಲು ನಿಲ್ಲಿಸುವುದು ಉತ್ತಮ ಸೂಚನೆ ಅನನ್ನಿಸುತ್ತದೆ. ಆದರೆ ಇಂಥ ಸಂದರ್ಭದಲ್ಲಿ ಮಗುವಿನ ಆರೋಗ್ಯ ಹಾಳಾಗಿದ್ದರೆ, ಅದು ಮಗುವಿನ ಪ್ರಾಣಕ್ಕೆ ಆಪತ್ತು ತರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಗುವಿಗೆ ಜ್ವರ ಬಂದಾಗ, ನಿರ್ಲಕ್ಷ್ಯ ಮಾಡದೇ, ಚಿಕಿತ್ಸೆ ಕೊಡಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..