Monday, March 16, 2026

Karnataka Tv

ಸಹೋದರನ ಹಾದಿ ಹಿಡಿದ ಸಚಿವ ಎಚ್.ಡಿ.ರೇವಣ್ಣ…!

ಹಾಸನ: ಗ್ರಾಮ ವಾಸ್ತವ್ಯ ಕೈಗೊಂಡು ಸಿಎಂ ಕುಮಾರಸ್ವಾಮಿ ಜನರನ್ನು ತಲುಪಲು ಅನುಸರಿಸುತ್ತಿರುವ ಹಾದಿಯನ್ನೇ ಇದೀಗ ಸಹೋದರ ಎಚ್.ಡಿ ರೇವಣ್ಣ ಅನುಸರಿಸಲಿದ್ದಾರೆ. ಹಾಸನದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ, ನಾನೂ ಕೂಡ ಗ್ರಾಮ ವಾಸ್ತವ್ಯ ಮಾಡಲು ಯೋಚನೆ ಮಾಡಿರುವೆ. ಇದಕ್ಕೆ ಸಂಬಂಧಪಟ್ಟಹಾಗೆ ಅಧಿಕಾರಿಗಳ ಸಭೆ ಕರೆಯುತ್ತೇನೆ. ಹಳ್ಳಿಗಳ ಪಟ್ಟಿ ತೆಗೆದುಕೊಂಡು ಅದರ ವಸ್ತುಸ್ಥಿತಿ ಆಧರಿಸಿ...

ವಿಮಾನಗಳ ದಾರಿಗೆ ಅಡ್ಡಿಯಾದ ಡ್ರೋಣ್- 25 ಫ್ಲೈಟ್ ಗಳಿಗೆ ತೊಂದರೆ..!

ಸಿಂಗಾಪುರ್: ಏರ್ ಪೋರ್ಟ್ ನಲ್ಲಿ ಡ್ರೋಣ್ ಗಳ ಹಾರಾಟದಿಂದಾಗಿ ಹತ್ತಾರು ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿ ಲಕ್ಷಾಂತರ ಮಂದಿ ಪ್ರಯಾಣಿಕರು ತೊಂದರೆಗೀಡಾದ ಘಟನೆ ಸಿಂಗಾಪೂರ್ ನಲ್ಲಿ ನಡೆದಿದೆ. ಇಲ್ಲಿನ ಜಗತ್ರಸಿದ್ಧ ಚಾಂಗಿ ಏರ್ಪೋರ್ಟ್ ನಲ್ಲಿ ಈ ಘಟನೆ ನಡೆದಿದ್ದು, ಅನಧಿಕೃತ ಡ್ರೋಣ್ ಗಳ ಹಾರಾಟ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಸುಮಾರು 25 ಫ್ಲೈಟ್ ಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ....

ಐಟಿ ದಾಳಿ ಪ್ರಕರಣ- ಸಚಿವ ಡಿಕೆಶಿಗೆ ಭಾರೀ ಹಿನ್ನೆಡೆ

ಬೆಂಗಳೂರು: ಸಚಿವ ಡಿ.ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸಿದ್ದ ಪ್ರಕರಣದಲ್ಲಿ ಮತ್ತೆ ಡಿಕೆಶಿಗೆ ಹಿನ್ನಡೆಯಾಗಿದೆ. ಪ್ರಕರಣದಲ್ಲಿ ತಮ್ಮ ಹೆಸರನ್ನು ಬಿಡುವಂತೆ ಮನವಿ ಮಾಡಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ನಡೆದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ....

ಭಾರತದೆದುರು ಪಾಕ್ ಸೋತಿದ್ದಕ್ಕೆ ಆತ್ಮಹತ್ಯೆ ಯೋಚನೆ ಮಾಡಿದ್ದ ಕೋಚ್..!

ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಕ್ರಿಕೆಟ್ ಮ್ಯಾಚ್ ನಡೆದ್ರೆ ಆವತ್ತು ಕ್ರಿಕೆಟ್ ಪ್ರಿಯರಿಗೆ ಟೆನ್ಶನ್. ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲನ್ನು ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಆದ್ರೆ ಇದು ಪಾಕ್ ನ ಕ್ರಿಕೆಟ್ ಪ್ರೇಮಿಗಳಲ್ಲೂ ಇದೇ ರೀತಿ ಫೀಲಿಂಗ್ ಕಾಮನ್. ಆದ್ರೆ ಪಾಕ್ ನ ಮುಖ್ಯ ಕೋಚ್ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ತಂಡ...

ರಾಜೀನಾಮೆ ಎಚ್ಚರಿಕೆಗೆ ಬೆದರಿದ ಸರ್ಕಾರ- ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಗೆ ಗ್ರೀನ್ ಸಿಗ್ನಲ್..!

ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ನಡೆಸಿದ ಪ್ರತಿಭಟನೆ ಫಲ ನೀಡಿದ್ದು, ಸರ್ಕಾರ ಮೀಸಲಾತಿ ಕಲ್ಪಿಸಲು ಗ್ರೀನ್ ಸಿಗ್ನಲ್ ನೀಡಿದೆ. ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇದಿಕೆಗೆ ಬಂದ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ವಾಲ್ಮೀಕಿ ಸಮುದಾಯಕ್ಕೆ ಶೇ.7.5% ಮೀಸಲಾತಿ ಕೊಡಲು ಸಹಮತ ವ್ಯಕ್ತವಾಗಿದೆ. ಇನ್ನೆರಡು ತಿಂಗಳಲ್ಲಿ ಬೇಡಿಕೆ ಈಡೇರಿಸಲಾಗುತ್ತೆ. ಸಂಪುಟದಲ್ಲಿ ಚರ್ಚಿಸಿ...

ಜನೌಷಧಿ ಕೇಂದ್ರದ ನಾಮಫಲಕ ತೆರವು- ಕೇಂದ್ರ ಸಚಿವ ಸದಾನಂದಗೌಡ ಕೆಂಡಾಮಂಡಲ..!!

ಬೆಂಗಳೂರು: ಕಳೆದ ಭಾನುವಾರವಷ್ಟೇ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಉದ್ಘಾಟಿಸಿದ್ದ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ನಾಮಫಲಕವನ್ನು ಬಿಬಿಎಂಪಿ ತೆರವುಗೊಳಿಸಿದೆ. ಇದನ್ನು ಪ್ರಶ್ನಿಸಿರೋ ಕೇಂದ್ರ ಸಚಿವ ಡಿವಿಎಸ್ ಕಿಡಿ ಕಾರಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಕಳೆದ ಭಾನುವಾರ ಜನೌಷಧಿ ಕೇಂದ್ರವನ್ನು ಕೇಂದ್ರ ಸಚಿವ ಸದಾನಂದಗೌಡ ಉದ್ಘಾಟಿಸಿದ್ರು. ಆದ್ರೆ ಈಗ ಜನೌಷಧಿ ಕೇಂದ್ರದ ಬೋರ್ಡನ್ನು ಬಿಬಿಎಂಪಿ ತೆರವುಗೊಳಿಸಿರೋದು ಸದಾನಂದಗೌಡರ...

‘ರಾಜೀನಾಮೆ ಕೊಟ್ರೆ ಸಿಎಂ ಕೂಡ ಮಾತುಕೇಳ್ತಾರೆ, ಅವರಪ್ಪಾನೂ ಕೇಳ್ತಾರೆ’- ಸಿಎಂ ವಿರುದ್ಧ ಸ್ವಾಮೀಜಿ ಕಿಡಿ

ಬೆಂಗಳೂರು: ರಾಜೀನಾಮೆ ಕೊಟ್ಟು ಸರ್ಕಾರವನ್ನ ಉರುಳಿಸಿ ಅಂತ ವಾಲ್ಮೀಕಿ ಸಮಾಜದ ಪ್ರಸನ್ನಾನನಂದ ಪುರಿ  ಸ್ವಾಮೀಜಿ ಹೇಳಿಕೆ ನೀಡೋ ಮೂಲಕ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕುರಿತಾಗಿ ಇಂದು ವಿಧಾನಸೌಧದೆರುರು ನಡೆಯುತ್ತಿರೋ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಪ್ರಸನ್ನಾನಂದಪುರಿ ಸ್ವಾಮೀಜಿ, ಕಾಂಗ್ರೆಸ್ ನ ಶಾಸಕರು ರಾಜೀನಾಮೆ ಕೊಟ್ಟು ಸರ್ಕಾರ ಉರುಳಿಸಿ.ನನ್ನ ಕೈಗೆ...

ಕಾವೇರಿ ನೀರು ಹಂಚಿಕೆ- ಮಳೆ ಬಂದ್ರೆ ಮಾತ್ರ ನೀರು ಬಿಡುಗಡೆ- ರಾಜ್ಯಕ್ಕೆ ರಿಲೀಫ್..!

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಇಂದು ನಡೆದ ಸಭೆಯಲ್ಲಿ ಕರ್ನಾಟಕಕ್ಕೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಉತ್ತಮ ಮಳೆಯಾದ್ರೆ ಮಾತ್ರ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡಿದೆ. ಇಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ, ತಮಿಳುನಾಡಿ, ಪುದುಚೇರಿ, ಕೇರಳ ಮತ್ತು ಕೇಂದ್ರದ ಪ್ರತಿನಿಧಿಗಳು ಭಾಗಿಯಾಗಿದ್ರು. ರಾಜ್ಯದಲ್ಲಿ...

ಸಂಸದೆ ಸುಮಲತಾ ಬಗ್ಗೆ ನಿಖಿಲ್ ಕುಮಾರ್ ವ್ಯಂಗ್ಯ..!

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದ ನಿಖಿಲ್ ಕುಮಾರ್ ಕಾವೇರಿ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಾವೇರಿ ನೀರು ಹಂಚಿಕೆ ವಿಚಾರವಾಗಿ ಚರ್ಚೆ ಮಾಡುತ್ತಿದ್ದ ನಿಖಿಲ್ ಕುಮಾರ್, ಕಾವೇರಿ ನೀರು ವಿಚಾರವಾಗಿ ನೀವು ಆರಿಸಿದ ಸಂಸದರೇ ಹೋರಾಟ ಮಾಡ್ತಾರೆ...

ರೈತರಿಗಾಗಿ ಸಂಸದೆ ಸುಮಲತಾ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ..!

ಬೆಂಗಳೂರು: ದೆಹಲಿಗೆ ಭೇಟಿ ನೀಡಿದ್ದ ಮೊದಲ ದಿನವೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಂಡ್ಯ ರೈತರು ಎದುರಿಸುತ್ತಿರೋ ನೀರಿನ ಸಮಸ್ಯೆ ಬಗ್ಗೆ ಸಂಸದೆ ಸುಮಲತಾ ಚರ್ಚಿಸಿದ್ರು. ಇದೀಗ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯುತ್ತಿದ್ದು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತೆ ಅಂತ ಕೇಂದ್ರ ಸಚಿವ ಸದಾನಂದ ಗೌಡ ಭರವಸೆ ನೀಡಿದ್ದಾರೆ. ಕಾವೇರಿ ನದಿ ನೀರು...

About Me

31530 POSTS
0 COMMENTS
- Advertisement -spot_img

Latest News

Tumakuru: ಚಿನ್ನಕ್ಕಾಗಿ ವೃದ್ಧೆಯನ್ನ ಹ*ತ್ಯೆಗೈದ ತುಮಕೂರಿನ ಜೆಡಿಎಸ್ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ

Tumakuru: ತುಮಕೂರು: ತುಮಕೂರಿನಲ್ಲಿ ಜೆಡಿಎಸ್ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷನಿಂದ ವೃದ್ಧೆಯ ಹತ್ಯೆ ನಡೆದಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಉಜ್ಜಿನಿ ಗ್ರಾಮದಲ್ಲಿ ಈ ಘಟನೆ...
- Advertisement -spot_img