Sunday, May 19, 2024

Latest Posts

ಕಾಂಗ್ರೆಸ್‌ ಒಂದು ಪಕ್ಷ ಮಾತ್ರ ಅಲ್ಲ, ಬದಲಾಗಿ ಅದು ಕನ್ನಡ ನಾಡಿನ ವಿಶ್ವಾಸ: ಡಿಸಿಎಂ ಡಿ.ಕೆ.ಶಿವಕುಮಾರ್

- Advertisement -

Political News: ಇಂದು ಬಿಜೆಪಿ ಹಿರಿಯ ನಾಯಕರಾಾದ ಸಂಗಣ್ಣ ಕರಡಿ ಅವರು ಸಿಎಂ, ಡಿಸಿಎಂ ಮತ್ತು ಕೆಲ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗಣ್ಣ ಕಾಂಗ್ರೆಸ್ ಸೇರಿದ್ದು, ಇವರೊಂದಿಗೆ ಹಲವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್‌ ತತ್ವ, ಸಿದ್ಧಾಂತಗಳ ಮೇಲೆ ವಿಶ್ವಾಸವಿಟ್ಟು ಮಾಜಿ ಸಂಸದರಾದ ಶ್ರೀ ಕರಡಿ ಸಂಗಣ್ಣ, ದಾಸರಹಳ್ಳಿ ನಾಯಕರಾದ ಶ್ರೀ ಕೃಷ್ಣಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಎ.ಎಸ್ ಪುಟ್ಟಸ್ವಾಮಿ, ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಮತ್ತಿತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಇನ್ನು ಈ ವೇಳೆ ಡಿಸಿಎಂ ಡಿಕೆಶಿ, ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡು ಶುಭ ಹಾರೈಸಿದ್ದು, ಕಾಂಗ್ರೆಸ್‌ ಒಂದು ಪಕ್ಷ ಮಾತ್ರ ಅಲ್ಲ, ಬದಲಾಗಿ ಅದು ಕನ್ನಡ ನಾಡಿನ ವಿಶ್ವಾಸ. 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ‘ಕೈ’ ಬಲಗೊಳ್ಳುತ್ತಿದ್ದು, ಹೊಸ ಹರಿವುಗಳೊಂದಿಗೆ ಪಕ್ಷವು ಮತ್ತಷ್ಟು ಗಟ್ಟಿಯಾಗುತ್ತಿದೆ ಎಂದಿದ್ದಾರೆ.

ಮತದಾರರಿಗೆ ಹಂಚಲು ತಂದಿದ್ದ 18 ಕೋಟಿ ರೂಪಾಯಿ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು

ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ: ರಾಹುಲ್ ರಾಜ್ಯ ಪ್ರವಾಸದ ಬಗ್ಗೆ ಪ್ರಜ್ವಲ್ ಮಾತು

ಬರ್ತ್‌ಡೇ ಪಾರ್ಟಿಗಾಗಿ ಜೋಮೆಟೋ ಪರಿಚಯಿಸಿದೆ ಹೊಸ ಆರ್ಡರ್ ಫ್ಲೀಟ್

- Advertisement -

Latest Posts

Don't Miss