Sandalwood News: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.
ಇನ್ನು ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಕಾರಣ, ರೇಣುಕಾಸ್ವಾಮಿಯನ್ನು ದರ್ಶನ್ ಕೊಲೆ ಮಾಡಿದ್ದಾರೆಂಬ ಆರೋಪವಿದೆ. ಹಾಗಾಗಿ ಪವಿತ್ರ ಗೌಡರನ್ನು ಆರ್ಆರ್ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೇಣುಕಾಸ್ವಾಮಿ ದರ್ಶನ್ ತುಗೂದೀಪ ಅವರ ಅಪ್ಪಟ ಅಭಿಮಾನಿಯಾಗಿದ್ದ. ಆದರೆ ಕೆಲ ದಿನಗಳ ಹಿಂದೆ ವಿಜಯಲಕ್ಷ್ಮೀ ಇನ್ಸ್ಟಾಗ್ರಾಮ್ನಲ್ಲಿ ಪವಿತ್ರಾ ವಿರುದ್ಧ ಪೋಸ್ಟ್ ಹಾಕಿದ್ದರು. ಆಗ ಎಲ್ಲರಿಗೂ ಪವಿತ್ರ ದರ್ಶನ್ ಫ್ಯಾಮಿಲಿಯಲ್ಲಿ ತಲೆತೂರಿಸುತ್ತಿದ್ದಾರೆಂಬ ವಿಷಯ ಗೊತ್ತಾಗಿದೆ. ನೆಚ್ಚಿನ ನಟನ ಸಂಸಾರದಲ್ಲಿ ಮೂರನೇಯವರು ಬಂದಿದ್ದನ್ನು ಸಹಿಸದ ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ದರ್ಶನ್ ಫ್ಯಾಮಿಲಿಯಿಂದ ದೂರವಿರುವಂತೆ ತಾಕೀತು ಮಾಡಿದ್ದಾನೆ.
ಅಷ್ಟೇ ಅಲ್ಲದೇ, ಆಕೆಗೆ ಅಶ್ಲೀಲ ಫೋಟೋ ಕಳಿಸುವುದು. ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ. ಈ ಕಾರಣಕ್ಕೆ ದರ್ಶನ್ ಆಪ್ತ ರೇಣುಕಾಸ್ವಾಮಿಗೆ ಕಾಲ್ ಮಾಡಿ, ಬೆಂಗಳೂರಿಗೆ ಕರೆಸಿದ್ದಾನೆ. ಬಳಿಕ ಆತನಿಗೆ ವಾರ್ನ್ ಮಾಡಲು ಹೋಗಿ, ಕೊಲೆಯಾಗಿರಬಹುದು ಎಂದು ಹೇಳಲಾಗುತ್ತಿದೆ.
ರೇಣುಕಾಸ್ವಾಮಿ ಚಿತ್ರದುರ್ಗದ ಅಪೋಲೋ ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಸಹನಾ ಈಗ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. ತಂದೆ ಬೆಸ್ಕಾಂನಲ್ಲಿ ನೌಕರಿ ಮಾಡುತ್ತಿದ್ದರು. ಇದೀಗ ನಿವೃತ್ತರಾಗಿದ್ದಾರೆ. ಒಟ್ಟಾರೆ ನಟನ ಮೇಲಿನ ಅಭಿಮಾನ ಹೆಚ್ಚಾಗಿ, ನಟನಿಂದಲೇ ರೇಣುಕಾಸ್ವಾಮಿ ಜೀವ ಬಿಡುವಂತಾಯ್ತು ಎಂಬ ಆರೋಪ ಕೇಳಿಬಂದಿದೆ.
ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಕಾರಣ, ರೇಣುಕಾಸ್ವಾಮಿಯ ಕೊ*ಲೆ..?