Saturday, June 21, 2025

Latest Posts

‘ದೇವೇಗೌಡರು ದೊಡ್ಡ ಆಲದ ಮರ ಇದ್ದಂತೆ, ಅವರ ನೆರಳಲ್ಲಿ ನಾನು ಕೆಲಸ ಮಾಡಿದ್ದೀನಿ’

- Advertisement -

Political News: ಹಾಸನ : ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರ ಕಟ್ಡೆಯಲ್ಲಿ ನಡೆಯುತ್ತಿರುವ ಜೆಡಿಎಸ್ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿದ್ದು, ದೇವೇಗೌಡರು ನಮ್ಮ ಕ್ಷೇತ್ರಕ್ಕೆ ಬಂದರೆ 24 ಗಂಟೆ ದುಡಿಯುತ್ತೇನೆ ಎಂದಿದ್ದಾರೆ.

ದೇವೇಗೌಡರ ಆಶೀರ್ವಾದದ ಮೇಲೆ ನಾನು ರಾಜಕೀಯ ಮಾಡಿದ್ದೇನೆ. ದೇವೇಗೌಡರು ಮತ್ತೆ ಈ ಜಿಲ್ಲೆಗೆ ಬರುವುದಾದರೆ ನಾನು ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುತ್ತೇನೆ. ಅವರು ದೊಡ್ಡ ಆಲದ ಮರ ಇದ್ದಂತೆ, ಅವರ ನೆರಳಲ್ಲಿ ನಾನು ಕೆಲಸ ಮಾಡಿದ್ದೀನಿ. ದೇವೇಗೌಡರು ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾದರೆ ಸ್ಥಾನ ಬಿಟ್ಟು ಕೊಡಲು ಸಿದ್ದ ಎಂದಿದ್ದಾರೆ.

ದೇವೇಗೌಡರು ಬಂದರೆ ದಿನದ 24 ಗಂಟೆ ಕೆಲಸ ಮಾಡ್ತೇನೆ, ಅವರನ್ನು ಗೆಲ್ಲಿಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಲು ಎಲ್ಲರು ಒಂದಾಗಿ ಕೆಲಸ ಮಾಡೋಣ. ನಾವು ಮನಸ್ಸು ಮಾಡಿದ್ರೆ ರಾಜ್ಯದ 28 ಸ್ಥಾನ ಗೆಲ್ಲಬಹುದು. ನಾನು ನಾಲ್ಕುವರೆ ವರ್ಷ ಜನರೊಟ್ಟಿಗೆ ಕೆಲಸ ಮಾಡಿದ್ದೇನೆ. ನಾನು ಸಣ್ಣಪುಟ್ಟ ತಪ್ಪುಗಳನ್ನು ಮಾಡಿದ್ದರೆ ಕ್ಷಮಿಸಿ. ಮುಂದೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ ಪಕ್ಷ ಬಲಪಡಿಸೋಣ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಪ್ರಜ್ವಲ್ ಸ್ಪರ್ಧೆ ಫಿಕ್ಸ್ : ಮೊಮ್ಮಗನ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ಹೆಚ್.ಡಿ. ದೇವೇಗೌಡ

ಶಾಲಾ ಕಾಲೇಜುಗಳಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಗಂಭೀರ ವಿಚಾರ: ಪ್ರಮೋದ್ ಮುತಾಲಿಕ್

ಜಗದೀಶ್ ಶೆಟ್ಟರ್‌ ಮೈಯಲ್ಲಿರೋದು ಜನಸಂಘದಿಂದ ಬಂದ ಬಿಜೆಪಿ ರಕ್ತ, ಕಾಂಗ್ರೆಸ್‌ನದ್ದಲ್ಲ: ಸಿಟಿ ರವಿ

- Advertisement -

Latest Posts

Don't Miss