ಬೆಂಗಳೂರು: ಅತೃಪ್ತ ಶಾಸಕರು ಬಿಜೆಪಿಯ ಮಂಗನ ಟೋಪಿ ಹಾಕಿಸಿಕೊಳ್ಳದೆ ಎಚ್ಚರವಹಿಸಿ ಅನರ್ಹತೆ ಅಸ್ತ್ರಕ್ಕೆ ಬಲಿಯಾಗಬೇಡಿ ಅಂತ ಸಚಿವ ಡಿಕೆಶಿ ಅತೃಪ್ತ ಶಾಸಕರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಸುಪ್ರೀಂಕೋರ್ಟ್ ಸ್ಪೀಕರ್ ಅಧಿಕಾರವನ್ನು ಎತ್ತಿಹಿಡಿದಿದೆ. ಅತೃಪ್ತ ಶಾಸಕರು ಅಧಿವೇಶನಕ್ಕೆ ಬರಬಹುದು, ಬಿಡಬಹುದು ಅದು ಅವರಿಗೆ ಬಿಟ್ಟದ್ದು. ಆದರೆ ಪಕ್ಷದ ಕೈಯಲ್ಲಿ ವಿಪ್ ಇದೆಯಲ್ಲಾ, ಇದರಿಂದ ಶಾಸಕರಿಗೆ ತೊಂದರೆ ಕಟ್ಟಿಟ್ಟಬುತ್ತಿ ಎಂದರು.
ಬಳಿಕ ಮಾತನಾಡಿದ ಅವರು, ನಮ್ಮ ಶಾಸಕರಿಗೆ ನಾನು ಮತ್ತೊಮ್ಮೆ ಮನವಿ ಮಾಡುತ್ತೇನೆ,ಬೇರೆಯವರನ್ನು ನಂಬಿ ಮೋಸಹೋಗಬೇಡಿ, ಬಿಜೆಪಿಯವರು ನಿಮಗೆ ಮಂಗನ ಟೋಪಿ ಹಾಕುತ್ತಾರೆ ಅಂತ ಲೇವಡಿ ಮಾಡಿದ ಡಿಕೆಶಿ, ಒಂದು ವೇಳೆ ನೀವು ಅನರ್ಹಗೊಂಡರೆ ಮತ್ತೆ ಮಂತ್ರಿ ಆಗೋಕೆ ಸಾಧ್ಯವಿಲ್ಲ, ಹೀಗಾಗಿ ನಿಮ್ಮ ಕುಟುಂಬದವರು ಮತ್ತು ನಿಮ್ಮನ್ನು ನಂಬಿ ನಿಮಗೆ ಮತಹಾಕಿ ಗೆಲ್ಲಿಸಿದ ಜನರ ಮುಖ ನೋಡಿ. ಅನರ್ಹತೆಯ ಅಸ್ತ್ರಕ್ಕೆ ಬಲಿಯಾಗಬೇಡಿ ಅಂತ ಸಚಿವ ಡಿ.ಕೆ ಶಿವಕುಮಾರ್ ಇದೇ ವೇಳೆ ಅತೃಪ್ತ ಶಾಸಕರಲ್ಲಿ ಮನವಿ ಮಾಡಿದ್ದಾರೆ.
ವಿಶ್ವಾಸ v/s ಅವಿಶ್ವಾಸ..! ಗೆಲ್ಲೋದ್ಯಾರು..? ಮಿಸ್ ಮಾಡದೇ ಈ ವಿಡಿಯೋ ನೋಡಿ