Sunday, September 8, 2024

Latest Posts

ದೊಡ್ಮನೆಯ ಕುಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ- ಯುವ ದಾಂಪತ್ಯದಲ್ಲಿ ಬಿರುಗಾಳಿ!

- Advertisement -

Sandalwood News: ಸ್ಯಾಂಡಲ್​ವುಡ್​ನ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್​ ಪ್ರಕರಣದ ಸುದ್ದಿ ಕೇಳಿಬಂದಿದೆ. ನಟ ರಾಘವೇಂದ್ರ ರಾಜ್​ಕುಮಾರ್ ಅವರ ಎರಡನೇ ಪುತ್ರ ಗುರು ರಾಜ್​ಕುಮಾರ್ ಅಲಿಯಾಸ್ ಯುವ ರಾಜ್​ಕುಮಾರ್ ಅವರು ತಮ್ಮ ಪತ್ನಿಗೆ ವಿಚ್ಛೇದನಕ್ಕಾಗಿ ಫ್ಯಾಮಿಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಇದೇ ತಿಂಗಳ 6ನೇ ತಾರೀಖು ಯುವ ರಾಜ್​ಕುಮಾರ್ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಛೇದನ ಕೋರಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಂಸಿ ಆ್ಯಕ್ಟ್​ ಸೆಕ್ಷನ್ 13(1) ಅಡಿಯಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಶ್ರೀದೇವಿ ಅವರಿಗೆ ಕೋರ್ಟ್​ನಿಂದ ನೋಟಿಸ್ ಜಾರಿಗೊಳಿಸಲಾಗಿದೆ.

ಜುಲೈ ತಿಂಗಳ 4ನೇ ತಾರೀಖು ವಿಚಾರಣೆ ಹಾಕರಾಗುವಂತೆ ಕೋರ್ಟ್ ನೋಟಿಸ್ ನೀಡಿದೆ. ಪತ್ನಿ ವಿರುದ್ಧ ಕ್ರೌರ್ಯ ಹಾಗೂ ಅಗೌರವದಿಂದ ನೋಡಿಕೊಂಡ ಆರೋಪವನ್ನು ಯುವ ರಾಜ್​ಕುಮಾರ್ ಮಾಡಿದ್ದಾರೆ. ಅಲ್ಲದೇ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂದೂ ಕೂಡ ಯುವ ತಿಳಿಸಿದ್ದಾರೆ.

ಹಾಲು- ಜೇನಿನಂತಹ ದೊಡ್ಮನೆ ಕುಟುಂಬದಲ್ಲಿ ಇದೀಗ ವಿಚ್ಛೇದನ ಬಿರುಗಾಳಿ ಎದ್ದಿದೆ. ರಾಘವೇಂದ್ರ ರಾಜ್​ಕುಮಾರ್ ಕುಮಾರ್ ಪುತ್ರ ಯುವ ರಾಜ್​ಕುಮಾರ್ ತಮ್ಮ ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಛೇದನ ನೀಡಿದ್ದಾರೆ. ಇದು ನಿಜಕ್ಕೂ ರಾಜ್ ಫ್ಯಾಮಿಲಿ ಮತ್ತು ರಾಜ್ಯದ ಜನರಿಗೆ ಅಚ್ಚರಿ ಮೂಡಿಸಿದೆ.

2019ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಇದ್ದಕ್ಕಿದ್ದಂತೆ ಬೇರೆಯಾಗುತ್ತಿರುವುದು ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಪತ್ನಿ ವಿರುದ್ಧ ಮಾನಸಿಕ ಕಿರುಕುಳ, ಕ್ರೌರ್ಯ ಹಾಗೂ ಅಗೌರವದಿಂದ ನೋಡಿಕೊಂಡ ಆರೋಪವನ್ನು ಯುವ ರಾಜ್​ಕುಮಾರ್ ಮಾಡಿದ್ದಾರೆ. ನಿಜಕ್ಕೂ ಸಣ್ಣ-ಪುಟ್ಟ ಸಮಸ್ಯೆಯಾಗಿದ್ರೆ ರಾಜ್ ಫ್ಯಾಮಿಲಿಯೇ ಒಂದಾಗಿ ಸಮಸ್ಯೆಯನ್ನು ಬಗೆಹರಿಸಬಹುದಾಗಿತ್ತು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಕಳೆದ ತಿಂಗಳು 6ನೇ ತಾರೀಖು ಯುವರಾಜ್​ಕುಮಾರ್ ಅವರು ಪತ್ನಿ ಶ್ರೀದೇವಿಗೆ ವಿಚ್ಛೇದನ ನೀಡಿದ್ದಾರೆ. ಎಂಸಿ ಆ್ಯಕ್ಟ್​ ಸೆಕ್ಷನ್ 13(1) ಅಡಿಯಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಕೆಯಾಗಿದ್ದು, ಶ್ರೀದೇವಿ ಅವರಿಗೆ ಕೋರ್ಟ್​ನಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಜುಲೈ 4ರಂದು ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗುವಂತೆ ಶ್ರೀದೇವಿಗೆ ಕೋರ್ಟ್ ನೋಟಿಸ್ ನೀಡಿದೆ.

ದೆಹಲಿಯಲ್ಲಿ ಇಬ್ಬರು ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಈ ಸುಂದರ ಜೋಡಿ ಸಪ್ತಪದಿ ತುಳಿದಿತ್ತು. ದೊಡ್ಮೆನಯ ಮದುವೆಗೆ ಸಿನಿಮಾ ಸ್ಟಾರ್​ಗಳು ಸೇರಿದಂತೆ ರಾಜಕಾರಣಿಗಳು ಸಾಕ್ಷಿಯಾಗಿದ್ದರು. ಆದರೀಗ, ನಾಲ್ಕೇ ವರ್ಷಕ್ಕೆ ಯುವ ಸಂಸಾರದಲ್ಲಿ ಮನಸ್ತಾನ ಉಂಟಾಗಿರುವುದು ರಾಜ್ ಫ್ಯಾಮಿಲಿಗೆ ಬೇಸರ ತರಿಸಿದೆ.

ಮದುವೆಯ ಬಳಿಕ ಬೆಂಗಳೂರಿನ ಚಂದ್ರಲೇಔಟ್​ನಲ್ಲಿರುವ ರಾಜ್​ಕುಮಾರ್ ಅಕಾಡೆಮಿಯನ್ನು ಶ್ರೀದೇವಿ ನಡೆಸಿಕೊಂಡು ಹೋಗುತ್ತಿದ್ದರು. ಈಗ ತಾನೇ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಳ್ಳುತ್ತಿರುವ ಯುವ ರಾಜ್​ಕುಮಾರ್​ಗೆ ವಿಚ್ಛೇದನ ದೊಡ್ಡ ಶಾಕ್ ನೀಡಿದೆ. ಇದು ನಿಜಕ್ಕೂ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಮೋದಿ ಪ್ರಮಾಣವಚನ: ಧಾರವಾಡ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಸಂಭ್ರಮ

ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ

ನರೇಂದ್ರ ದಾಮೋದರ್ ದಾಸ್ ಮೋದಿಯಾದ ನಾನು.. : ಸತತ 3ನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ

- Advertisement -

Latest Posts

Don't Miss