National News: ಜೈಲು ಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಾಲ್, ತಮ್ಮ ಶುಗರ್ ಲೇವಲ್ ಹೆಚ್ಚಾಗಬೇಕು ಎಂದು, ಬರೀ ಮಾವಿನ ಹಣ್ಣು ಮತ್ತು ಆಲುಪೂರಿಯನ್ನೇ ತಿನ್ನುತ್ತಿದ್ದಾರೆಂದು ಇಡಿ ಆರೋಪಿಸಿದೆ.
ದೇಹದಲ್ಲಿ ಶುಗರ್ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾಗಿ ಅನಾರೋಗ್ಯ ನಿಮಿತ್ತ ಜಾಮೀನು ಬೇರು ಎಂದು ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದು, ಈ ವಿರುದ್ಧ ಇಡಿ, ಕೇಜ್ರಿವಾಲ್ ಬೇಕಂತಲೇ ಈ ರೀತಿ ಮಾಡುತ್ತಿದ್ದಾರೆಂದು ಆರೋಪಿಸಿದೆ.
ಈ ಮೊದಲು ಕೇಜ್ರಿವಾಲ್ಗೆ ಶುಗರ್ ಇದೆ ಎಂಬ ಕಾರಣಕ್ಕೆ, ಅವರಿಗೆ ಮನೆ ಊಟವನ್ನು ಅನುಮತಿಸಲಾಗಿತ್ತು. ಆದರೆ ಕೇಜ್ರಿವಾಲ್ ಜಾಮೀನು ಬೇಕು ಎಂಬ ಕಾರಣಕ್ಕೆ, ಮನೆಯಿಂದ ಮಾವಿನ ಹಣ್ಣು, ಆಲೂಪೂರಿ, ಸಿಹಿ ತಿಂಡಿ ಮತ್ತು ಸಕ್ಕರೆ ಬಳಸಿದ ಚಹಾ ತರಿಸಿಕೊಂಡು ಸೇವಿಸುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ. ಆದರೆ ಕೇಜ್ರಿವಾಲ್ ಪರ ಇರುವ ವಕೀಲರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ತನ್ನ ಮಗು ಸೂರ್ಯನ ಕಿರಣವನ್ನಷ್ಟೇ ಸೇವಿಸಬೇಕೆಂದು ತಂದೆಯ ಹಠ: ಮಗು ಸಾವು
ಕೆಮ್ಮು-ಶೀತ ಬಂತೆಂದು ಕೈಗೆ ಸಿಕ್ಕ ಮಾತ್ರೆ ಸೇವಿಸಿದ ಮಹಿಳೆ, ಕಣ್ಣಿಂದ ಬಂತು ರಕ್ತ..!
ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಪಲ್ಲವಿ ಡೆಂಪೋ.. ಈಕೆಯ ಆಸ್ತಿಯೇ 1,400 ಕೋಟಿ..