Saturday, July 27, 2024

Latest Posts

ಈ 3 ಗುಣಗಳಿಂದಲೇ ಕೆಲವರು ಯಶಸ್ವಿಯಾಗದೇ ಇರೋದು..

- Advertisement -

ನೀವು ಯಾವುದಾದರೂ ಉದ್ಯಮದಲ್ಲಿ ಸಫಲತೆ ಸಿಗದವರನ್ನು, ಯಾವುದಾದರೂ ಕೆಲಸದಲ್ಲಿ ಯಶಸ್ಸು ಸಾಧಿಸದೇ, ಅರ್ಧಕ್ಕೆ ಕೆಲಸ ಬಿಟ್ಟವರನ್ನು ಒಮ್ಮೆ ಮಾತನಾಡಿಸಿ, ಅವರ ಬಳಿ, ಅವರ ಸೋಲಿಗೆ ಕಾರಣವೇನು ಎಂದು ಕೇಳಿ. ಆಗ ಅವರು ನನ್ನ ಕುಟುಂಬದಲ್ಲಿ ಯಾರಿಗೂ ಉದ್ಯಮದ ಬಗ್ಗೆ ಗೊತ್ತಿರಲಿಲ್ಲ. ನನ್ನ ಬಳಿ ಕೆಲಸ ಮಾಡುತ್ತಿದ್ದವರು, ಅರ್ಧಕ್ಕೆ ಕೆಲಸಬಿಟ್ಟು ಹೋದರು. ಇತ್ಯಾದಿ ಕಾರಣಗಳನ್ನು ಹೇಳಿ, ಇನ್ನೊಬ್ಬರ ಮೇಲೆ ತಪ್ಪು ಹೊರಿಸುತ್ತಾರೆ.

ಬುದ್ಧಿವಂತರಿಗಿರುವ ಮೂರು ಲಕ್ಷಣಗಳಿವು..

ಇದಾದ ಬಳಿಕ ಅವರ ಬಾಯಲ್ಲಿ ಬರುವ ಕೊನೆಯ ಮಾತು, ನನ್ನ ಹಣೆ ಬರಹವೇ ಸರಿ ಇಲ್ಲ. ಆದ್ರೆ ಇದಕ್ಕೆಲ್ಲ ಮುಖ್ಯವಾದ ಕಾರಣ ಅವರೇ ಆಗಿರುತ್ತಾರೆ. ಇದೇ ಜಾಗದಲ್ಲಿ ಅವರು ಗೆಲುವು ಸಾಧಿಸಿದ್ದರೆ, ಎಲ್ಲ ಕ್ರೆಡಿಟ್ಸ್ ಅವರೇ ತೆಗೆದುಕೊಳ್ಳುತ್ತಿದ್ದರು. ಆದ್ರೆ ಸೋಲೆಂಬ ಕಾರಣಕ್ಕೆ, ತಪ್ಪನ್ನು ಇತರರ ಮೇಲೆ ಹಾಕುತ್ತಾರೆ. ಹಾಗಾಗಿ ಇಂದು ನಾವು ಯಾವ 3 ಗುಣ ಇದ್ರೆ, ಅಂಥವರು ಯಶಸ್ವಿಯಾಗೋದಕ್ಕೆ ಆಗೋದಿಲ್ಲಾ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..

ನಮಗೆ ಪೂರ್ವ ಜನ್ಮದ ನೆನಪು ಯಾಕೆ ಇರೋದಿಲ್ಲಾ ಅಂತಾ ಗೊತ್ತಾ..?

ಮೊದಲನೇಯ ಗುಣ, ನಿಮ್ಮ ತಪ್ಪನ್ನು ನೀವು ಅರಿಯದೇ ಇರೋದು. ಈಗಾಗಲೇ ಹೇಳಿದಂತೆ, ನೀವು ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೆ, ಅದರಲ್ಲಿ ಲಾಭವಾದರೂ, ನಷ್ಟವಾದರೂ ನೀವೇ ಕಾರಣ. ಹಾಗಾಗಿ ಬುದ್ಧಿವಂತಿಕೆಯಿಂದ ನಡೆದರೆ ಮಾತ್ರ, ಯಶಸ್ಸು ಕಾಣೋದು. ಆದ್ರೆ ಅಪ್ಪಿ ತಪ್ಪಿ ನಿಮ್ಮ ಕೆಲಸದಲ್ಲಿ ನಷ್ಟವಾದ್ರೆ, ಆ ನಷ್ಟವನ್ನು ಲಾಭಕ್ಕೆ ತಿರುಗಿಸೋದು ಹೇಗೆ ಅನ್ನೋ ಬಗ್ಗೆ ಯೋಚಿಸಿ. ಅದನ್ನು ಬಿಟ್ಟು, ನಷ್ಟವಾಗಿದ್ದರ ತಪ್ಪನ್ನ ಇತರರ ಮೇಲೆ ಹಾಕುತ್ತ, ನಿಮ್ಮ ಸಮಯ ವ್ಯರ್ಥ ಮಾಡಬೇಡಿ.

ನವರಾತ್ರಿಯಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ

ಎರಡನೇಯ ಗುಣ, ಲಾಭ ಮಾಡುವ ಸಲುವಾಗಿ ಸಣ್ಣದಾಗಿ ಯೋಚಿಸುವುದು. ಓರ್ವ ವ್ಯಕ್ತಿ ಬಟ್ಟೆ ಅಂಗಡಿಯಲ್ಲಿ 50 ರೂಪಾಯಿ ಕಡಿಮೆ ಮಾಡಲು ಮುಕ್ಕಾಲು ಗಂಟೆ ವ್ಯರ್ಥ ಮಾಡಿದರೆ, ಅವನು ದಡ್ಡ ಎಂದರ್ಥ. 5 ನಿಮಿಷ ನೀವು 50 ರೂಪಾಯಿ ಕಡಿಮೆ ಮಾಡುವಲ್ಲಿ ಯಶಸ್ವಿಯಾದ್ರೆ, ಉತ್ತಮ. ಆದ್ರೆ ನೀವು 45 ನಿಮಿಷ ವೇಸ್ಟ್ ಮಾಡಿದ್ರೆ, ನೀವು ಲೈಫ್ ಲಾಂಗ್ ಹೀಗೆ ಸಮಯ ವ್ಯರ್ಥ ಮಾಡುತ್ತಲೇ ಇರುತ್ತೀರಿ. ಆದ್ರೆ ಜಾಣ ವ್ಯಕ್ತಿ ಹಾಗೆ ಮಾಡೋದಿಲ್ಲಾ. ಬದಲಾಗಿ ಕೆಲ ನಿಮಿಷಗಳ ಕಾಲ ವಿನಂತಿಸಿ. ನಂತರ ಅಲ್ಲಿಂದ ಹೊರಟು ಬಿಡುತ್ತಾನೆ. ಯಾಕಂದ್ರೆ ಅವನಿಗೆ ಸಮಯದ ಮಹತ್ವ ಗೊತ್ತಿರುತ್ತೆ.

ನವರಾತ್ರಿಯ ಮೊದಲ ದಿನಕ್ಕೆ ಈ ಪ್ರಸಾದ ಮಾಡಿ..

ಮೂರನೇಯ ಗುಣ, ಏನು ಯೋಚಿಸುತ್ತೀರೋ, ಅದೇ ಆಗುತ್ತೀರಿ. ಹಾಗಾಗಿ ಒಳ್ಳೆಯದನ್ನೇ ಯೋಚಿಸಿ. ಮನುಷ್ಯ ಎಂದಿಗೂ ತಲೆ ಮೇಲೆ ಕೈ ಹೊತ್ತು, ಕಷ್ಟ- ನಷ್ಟದ ಬಗ್ಗೆಯೇ ಯೋಚಿಸಿದ್ರೆ, ಅವನು ಗೆಲ್ಲೋಕ್ಕೆ ಸಾಧ್ಯಾನೇ ಇಲ್ಲಾ. ಅದರ ಬದಲು, ಏನೇ ಕಷ್ಟ ಬಂದರೂ, ನಾನು ಅಂದುಕೊಂಡಿದ್ದನ್ನ ಸಾಧಿಸಿಯೇ, ಸಾಧಿಸುತ್ತೇನೆ ಎಂದರೆ, ಖಂಡಿತ ನೀವು ಅಂದುಕೊಂಡಿದ್ದನ್ನ ಸಾಧಿಸುತ್ತೀರಿ.

- Advertisement -

Latest Posts

Don't Miss