Saturday, July 27, 2024

Latest Posts

ವೆಂಕಟರಮಣಸ್ವಾಮಿ ಮೋದಿ, ನಾಮ ಜೆಡಿಎಸ್ ಪಕ್ಷ ಇದ್ದ ಹಾಗೆ: ಶಾಸಕ ಸಮೃದ್ಧಿ ಮಂಜುನಾಥ್

- Advertisement -

Kolar News: ಕೋಲಾರ: ಜೆಡಿಎಸ್ ಗೆ ಮೂರು ನಾಮ ಎಂಬ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆಗೆ ಸಮೃದ್ಧಿ ಮಂಜುನಾಥ್ ಪ್ರತಿಕ್ರಿಯಿಸಿದ್ದು, ಮೂರು ನಾಮ ಎಂದು ಜೆಡಿಎಸ್ ಪಕ್ಷದ ಬಗ್ಗೆ ತಿರಸ್ಕಾರದ ಮಾತನ್ನಾಡಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಹೇಳಿರುವುದು ನೂರಕ್ಕೆ ನೂರು ಸತ್ಯ. ಮೋದಿ  ಅನ್ನೋದು ವೆಂಕಟರಮಣಸ್ವಾಮಿ ದೇವರು ಇದ್ದಹಾಗೆ ಎಂದಿದ್ದಾರೆ.

ಬಿಜೆಪಿ ಜೊತೆ ಜೆಡಿಎಸ್ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ . ಈ ಮೂರು ಸ್ಥಾನಗಳು ಮೂರು ನಾಮ ಇದ್ದಂತೆ , ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇರಲ್ಲ.ಜೆಡಿಎಸ್ ಪಕ್ಷಕ್ಕೆ ಎರಡು ಬಿಳಿ ನಾಮ ಒಂದು ಕೆಂಪುನಾಮ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಮೂರು ನಾಮ ಗೋವಿಂದಾ ಗೋವಿಂದಾ ಎಂದು ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಜೆಡಿಎಸ್ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ತಮಾಷೆ ಮಾಡಿದ್ದರು.

ಇದಕ್ಕೆ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಮೂರು ನಾಮ ಎಂದು ಜೆಡಿಎಸ್ ಪಕ್ಷದ ಬಗ್ಗೆ ತಿರಸ್ಕಾರದ ಮಾತನ್ನಾಡಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಹೇಳಿರುವುದು ನೂರಕ್ಕೆ ನೂರು ಸತ್ಯ. ಮೋದಿ ಅನ್ನೋದು ವೆಂಕಟರಮಣಸ್ವಾಮಿ ದೇವರು ಇದ್ದಹಾಗೆ. ಮೂರು ನಾಮ ಇಟ್ಟುಕೊಂಡು ಹೋದ್ರೆ ವೆಂಕಟರಮಣಸ್ವಾಮಿ ದರ್ಶನ ಆಗುತ್ತೆ. ಮೋದಿ ದೇವರಿದ್ದ ಹಾಗೆ, ನಾವು ನಾಮ ಇದ್ದ ಹಾಗೆ. ಆಗಾಗಾ ಕಾಂಗ್ರೆಸ್ ಪಕ್ಷದವರು ಸತ್ಯ ಹೇಳ್ತಾರೆ. ಕಾಂಗ್ರೆಸ್ ಪಕ್ಷದವರು ನಾಮ ಹಾಕಿಕೊಂಡು ವೆಂಕಟರಮಣ ಸ್ವಾಮಿ ದರ್ಶನಕ್ಕೆ ಹೋಗ್ತಾರೆ. ವೆಂಕಟರಮಣಸ್ವಾಮಿ ಮೋದಿ, ನಾಮ ಜೆಡಿಎಸ್ ಪಕ್ಷ ಇದ್ದಾಗೆ. ನಾವು ದರ್ಶನಕ್ಕೆ ಹೋಗುತ್ತಿದ್ದೇವೆ ಎಂದು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ, ಮೋದಿಗೆ ಬೆಂಬಲಿಸುತ್ತೇನೆ: ಸಂಸದೆ ಸುಮಲತಾ ಅಂಬರೀಷ್

ಅವರ ಮನಸ್ಸು ಒಂದು ಕಡೆ, ದೇಹ ಒಂದು‌ ಕಡೆ ಇದೆ: ಎಸ್‌.ಟಿ.ಸೋಮಶೇಖರ್ ಬಗ್ಗೆ ಕರಂದ್ಲಾಜೆ ಮಾತು

ಬರೀ ಪ್ರಚಾರಕ್ಕೆಂದೇ ಸಮಯ ಕಳೆಯುವವರು ಏನು ಅಭಿವೃದ್ಧಿ ಮಾಡುತ್ತಾರೆ..?: ಸಂತೋಷ್ ಲಾಡ್ ಪ್ರಶ್ನೆ..

- Advertisement -

Latest Posts

Don't Miss