Friday, June 20, 2025

Latest Posts

ಜೀವನದಲ್ಲಿ ಕಷ್ಟ ಬಂದಾಗ ಈ 5 ಮಾತುಗಳನ್ನು ಎಂದಿಗೂ ಮರೆಯಬೇಡಿ- ಭಾಗ2

- Advertisement -

ಈ ಹಿಂದೆ ನಾವು ಚಾಣಕ್ಯರು ಕಷ್ಟದ ಸಮಯದಲ್ಲಿ ನಾವು ಯಾವ 5 ಮಾತನ್ನು ಮರೆಯಬಾರದು ಅಂತಾ ಹೇಳಿದ್ದಾರೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 2 ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 3 ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ..

ಮೂರನೇಯದಾಗಿ ಎಲ್ಲರೂ ನಿಮ್ಮ ಹಿತೈಷಿಗಳೇ ಆಗಲು ಸಾಧ್ಯವಿಲ್ಲ. ನೀವು ನಿಮ್ಮ ಗೆಳೆಯ- ಗೆಳತಿಯರು ಅಥವಾ ನಿಮ್ಮೊಂದಿಗೆ ಕೆಲಸ ಮಾಡುವ ಸಹೋದ್ಯೋಗಿಗಳೆಲ್ಲ, ನಿಮ್ಮ ಹಿತೈಷಿಗಳೆಂದು ತಿಳಿದರೆ, ನಿಮ್ಮಷ್ಟು ಮೂರ್ಖರು ಯಾರೂ ಇಲ್ಲ. ನಿಮಗೆ ಕಷ್ಟ ಬಂದಾಗ, ಅಥವಾ ನೀವು ಯಾವುದಾದರೂ ಕೆಲಸದಲ್ಲಿ ಸೋತಾಗ ಮೊದಲು ಮನಸ್ಸಿನಲ್ಲೇ ಖುಷಿ ಪಡುವ ಜನರು ಅವರು. ಅಲ್ಲದೇ, ನಿಮಗೆ ಕಷ್ಟ ಬಂದಾಗ, ನಿಮ್ಮ ಕಷ್ಟ ನಿಮಗೆಂದು ಹೇಳುವವರು ನಿಮ್ಮ ಉತ್ತಮ ಸ್ನೇಹಿತರು, ಹಿತೈಷಿಗಳಾಗಲು ಎಂದಿಗೂ ಸಾಧ್ಯವಿಲ್ಲ. ಹಾಗಾಗಿ ಕಷ್ಟ ಬಂದಾಗ, ಎಲ್ಲರ ಬಳಿ ಅದನ್ನು ಹೇಳಿಕೊಂಡು ತಿರುಗಬೇಡಿ. ಬದಲಾಗಿ ಆ ಕಷ್ಟ ಪರಿಹರಿಸಿಕೊಳ್ಳುವುದು ಹೇಗೆಂದು ಯೋಚಿಸಿ.

ನಾಲ್ಕನೇಯದಾಗಿ ದುಡುಕುತನ ಇದ್ದರೆ, ನೀವೆಂದೂ ಸಫಲರಾಗುವುದಿಲ್ಲ. ಹಲವರು ಥಟ್‌ ಅಂತಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಂಥವರ ಹಣೆಬರಹ ಉತ್ತಮವಾಗಿದ್ದರೆ, ಅವರಿಗೆ ಆ ನಿರ್ಧಾರದಿಂದ ಒಳ್ಳೆಯದಾಗುತ್ತದೆ. ಮತ್ತು ಹಣೆಬರಹ ಕೆಟ್ಟವರಿಗೆ, ಅದು ಕೆಟ್ಟ ಘಳಿಗೆಯಾಗಿರುತ್ತದೆ. ಇಂಥ ದುಡುಕು ನಿರ್ಧಾರಗಳಿಂದಲೇ, ಎಷ್ಟೋ ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಎಷ್ಟೋ ಜನರ ಬಾಳು ಇಂಥ ದುಡುಕುತನದಿಂದಲೇ, ಹಾಳಾಗಿದೆ.  ಹಾಗಾಗಿ ಆವೇಷದಿಂದ ಅಥವಾ ಆತುರದ ನಿರ್ಧಾರ ಎಂದಿಗೂ ಮಾಡದಿರಿ ಎನ್ನುತ್ತಾರೆ ಚಾಣಕ್ಯರು.

ಐದನೇಯದಾಗಿ  ನೀವು ನಿಮ್ಮ ಮೇಲೆ ವಿಶ್ವಾಸವಿಡಿ. ದೇವರ ಮೇಲೆ ನಂಬಿಕೆ ಇಡಿ. ಆಗುವುದೆಲ್ಲ ಒಳ್ಳೆಯದಕ್ಕೆ ಅನ್ನೋದು ನಿಮಗೆ ಗೊತ್ತಿರಲಿ. ಇಂದು ನನಗೆ ಕಷ್ಟ ಬಂದಿದೆ, ಅದನ್ನು ನಾನು ಧೈರ್ಯದಿಂದ ಎದುರಿಸಿದಾಗಲೇ, ಮುಂದೆ ನನಗೆ ಉತ್ತಮ ದಿನಗಳು ಬರುತ್ತದೆ ಅನ್ನೋದು ನಿಮಗೆ ಗೊತ್ತಿರಲಿ. ಕೃಷ್ಣ ಅರ್ಜುನನಿಗೆ ಹೇಳಿದ ಪ್ರಕಾರ, ಈ ಸಮಯ ಕಳೆದುಹೋಗುತ್ತದೆ ಅನ್ನುವ ಮಾತು ನಿಮ್ಮ ಮನದಲ್ಲಿರಲಿ. ಇದರ ಅರ್ಥ ನಿಮಗೆ ಕಷ್ಟದ ಸಮಯವಿದ್ದರೆ, ನಿಮಗೆ ಉತ್ತಮ ಸಮಯ ಬರುತ್ತದೆ. ಮತ್ತು ನಿಮಗೆ ಉತ್ತಮ ಸಮಯವಿದ್ದರೆ, ಮುಂದೆ ಕಷ್ಟದ ಸಮಯ ಬಂದರೂ ಬರಬಹುದು. ಹಾಗಾಗಿ ಎಲ್ಲ ಪರಿಸ್ಥಿತಿ ನಿಭಾಯಿಸುವ ತಾಕತ್ತು ನಿಮಗಿರಬೇಕು ಎನ್ನುತ್ತಾರೆ ಚಾಣಕ್ಯರು.

- Advertisement -

Latest Posts

Don't Miss