ತಮ್ಮ ಚಾಣಕ್ಯ ನೀತಿಯ ಮೂಲಕ ಜೀವನ ಜೀವಿಸುವ ರೀತಿಯನ್ನ ಕಲಿಸಿರುವ ಚಾಣಕ್ಯರು, ಸಕಲ ವಿಷಯಗಳ ಬಗ್ಗೆಯೂ ತಿಳಿದಿರುವ ಪರಿಣಿತರಾಗಿದ್ದರು. ಹಾಗಾಗಿ ಅವರ ನೀತಿಯನ್ನು ಯಾರು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ, ಅವರು ಸದಾ ಸುಖಿಗಳಾಗಿರುತ್ತಾರೆ ಎನ್ನುತ್ತಾರೆ ಹಿರಿಯರು. ಇಂಥ ಚಾಣಕ್ಯರು ಯುವಜನತೆ ಯಾವ ವಿಷಯಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ವಿಮಾನ ಪ್ರಯಾಣಿಕರಿಗೆ ಮಾಸ್ಕ್ – ಡಿಜಿಸಿಎ ಆದೇಶ
ಮೊದಲನೇಯದಾಗಿ ಸೋಂಬೇರಿತನ. ಯಾರಿಗೆ ಸೋಮಾರಿತನವಿರುತ್ತದೆಯೋ, ಅವನು ದರಿದ್ರನಾಗಿಯೇ ಇರುತ್ತಾನೆಂದು ಹಿರಿಯರು ಹೇಳಿದ್ದಾರೆ. ಇದು ನಿಜವೂ ಹೌದು. ನೀವು ಸೋಮಾರಿತನ ಬಿಟ್ಟು ಯಾವಾಗ ಕೆಲಸ ಮಾಡುತ್ತೀರೋ, ಆಗಲೇ ನೀವು ಯಶಸ್ವಿಯಾಗೋಕ್ಕೆ ಸಾಧ್ಯ. ಹಾಗಾಗಿ ಸೋಮಾರಿತನ ಬಿಟ್ಟು, ಓದಲು, ದುಡಿಯಲು ಶುರು ಮಾಡಿ. ವಿದ್ಯಾರ್ಥಿಗಳಲ್ಲಂತೂ ಸೋಮಾರಿತನ ಇರಲೇಬಾರದು. ಯಾಕಂದ್ರೆ ಯಾರಿಗೆ ಉತ್ತಮ ವಿದ್ಯಾಭ್ಯಾಸವಿರುತ್ತದೆಯೋ, ಅವನಿಗೆ ಗೌರವ ಸಿಗುತ್ತದೆ. ಉತ್ತಮ ಕೆಲಸವೂ ಸಿಗುತ್ತದೆ. ಹೀಗೆ ಗೌರವ ಗಳಿಸಲಾದಲೂ ನೀವು ಸೋಮಾರಿತನ ಬಿಡಬೇಕು.
ಎರಡನೇಯದಾಗಿ ನಿರ್ಲಕ್ಷ್ಯ. ಯುವಜನತೆಯಲ್ಲಿ ಹಲವು ವಿಷಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯತೆ ಇದೆ. ವಿದ್ಯಾರ್ಥಿಯಾಗಿದ್ದಾಗ, ಓದುವುದರ ಬಗ್ಗೆ ನಿರ್ಲಕ್ಷ್ಯತೆ. ದುಡಿಯುವಾಗ ಕೆಲಸದ ಬಗ್ಗೆ ನಿರ್ಲಕ್ಷ್ಯತೆ. ಸಂಸಾರ ಮಾಡುವಾಗ, ದುಡ್ಡು ಕುಡಿಡುವ ಬಗ್ಗೆ ನಿರ್ಲಕ್ಷ್ಯಕತೆ. ಹೀಗೆ ಪ್ರತೀ ಹಂತದಲ್ಲೂ ಮಾಡುವ ನಿರ್ಲಕ್ಷ್ಯತನವೇ ನೀವು ಇಳಿ ವಯಸ್ಸಿಗೆ ಬಂದಾಗ, ಅಳುವಂತೆ ಮಾಡುತ್ತದೆ. ಹಾಗಾಗಿ ಚೆನ್ನಾಗಿ ಓದಿ, ಉತ್ತಮವಾಗಿ ಕೆಲಸ ನಿರ್ವಹಿಸಿ, ಜಾಣ್ಮೆಯಿಂದ ದುಡ್ಡು ಉಳಿಸಿ, ನೆಮ್ಮದಿಯಿಂದ ನಿಮ್ಮ ವೃದ್ಧಾಪ್ಯ ಕಳೆಯಿರಿ.
ನೀವು ಶ್ರೀಮಂತರಾಗಬೇಕು ಅಂದ್ರೆ, ಚಾಣಕ್ಯ ಹೇಳಿರುವ ಈ ನಿಯಮಗಳನ್ನು ಫಾಲೋ ಮಾಡಿ..
ಮೂರನೇಯದಾಗಿ ಕೆಟ್ಟಜನರ ಸಹವಾಸ ಮಾಡಬೇಡಿ, ಕೆಟ್ಟ ಚಟ ಕಲಿಯಬೇಡಿ. ಕೆಟ್ಟ ಚಟ ಕಲಿಯಲು, ಸಂಗವೇ ಸಂಗತಿಯಾಗಿರುತ್ತದೆ. ಹಾಗಾಗಿ ಕೆಟ್ಟ ಜನರ ಸಹವಾಸ ಮಾಡಬೇಡಿ. ನಿಮ್ಮ ಗೆಳೆಯರು ಉತ್ತಮರಾಗಿದ್ದರೆ ಮಾತ್ರ ಅವರ ಸಹವಾಸ ಮುಂದುವರಿಸಿ. ಅವರಿಗೆ ದುಶ್ಚಟವಿದ್ದಲ್ಲಿ, ಅವರಿಂದ ದೂರವಿರಿ. ಯಾಕಂದ್ರೆ ಒಂದು ಹಣ್ಣು ಕೊಳೆತಾಗ, ಅದರ ಜೊತೆ ಒಳ್ಳೆ ಹಣ್ಣು ಸ್ವಲ್ಪ ಹೊತ್ತಿದ್ದರೂ ಸಾಕು. ಆ ಹಣ್ಣು ಕೊಳೆಯಲಾರಂಭಿಸುತ್ತದೆ. ಅಂತೆಯೇ, ಚಟವಿರುವ ವ್ಯಕ್ತಿ ಜೊತೆ ನೀವಿದ್ದರೆ, ನಿಮಗೂ ದುಷ್ಚಟ ಬರುತ್ತದೆ.
ಡಿಬಾಸ್ ಗೆ ಬಾಲನಟಿ ಅಂಕಿತಾ ಪ್ರೀತಿಯ ಅಪ್ಪುಗೆ
ನಾಲ್ಕನೇಯದಾಗಿ ಮತ್ತು ಕೊನೆಯದಾಗಿ ಯಾವ ಮನುಷ್ಯ ತನ್ನ ಇಂದ್ರಿಯವನ್ನು ನಿಗ್ರಹಿಸುತ್ತಾನೋ, ಅವನು ಜೀವನವನ್ನೇ ಗೆದ್ದಂತೆ ಅನ್ನೋ ಮಾತಿದೆ. ಹಾಗಾಗಿ ಇಂದ್ರಿಯವನ್ನು ಹಿಡಿತದಲ್ಲಿಟ್ಟುಕೊಳ್ಳಿ. ಕಾಮದಿಂದ ದೂರವಿರಿ. ನೀವು ವಿವಾಹವಾಗಿ, ಸಂಸಾರ ನಡೆಸುವವರೆಗೂ ಈ ವಿಷಯದಲ್ಲಿ ದುಡುಕಬೇಡಿ. ಹೀಗೆ ದುಡುಕಿದ್ದೇ ಆದಲ್ಲಿ, ನಿಮ್ಮ ಅವನತಿಯನ್ನು ಯಾರೂ ತಡೆಯಲೂ ಸಾಧ್ಯವಿಲ್ಲ.
ಊಟ ಮಾಡುವಾಗ ಇದನ್ನು ಗಮನದಲ್ಲಿಡಿ, ಇಲ್ಲವಾದರೆ ಆರೋಗ್ಯ, ಅದೃಷ್ಟ ನಿಮ್ಮ ಕೈ ತಪ್ಪುತ್ತದೆ..