Friday, June 20, 2025

Latest Posts

ಈ 5 ಜನರನ್ನು ಎಂದಿಗೂ ದ್ವೇಷಿಸಬೇಡಿ ಎನ್ನುತ್ತಾರೆ ಚಾಣಕ್ಯರು..

- Advertisement -

ಮನುಷ್ಯ ಅಂದ ಮೇಲೆ ಅವನಿಗೆ ಸಿಟ್ಟು, ಅಳು, ನಗು, ದುಃಖ, ಸಂತೋಷ, ನೋವು ಎಲ್ಲ ಆಗುವುದು ಸಾಮಾನ್ಯ. ಕೆಲವೊಮ್ಮೆ ನಮಗಾಗುವ ನೋವಿಗೆ ಕಾರಣರಾದವರನ್ನು ನಾವು ದ್ವೇಷಿಸಲು ಶುರು ಮಾಡುತ್ತೇವೆ. ಆದ್ರೆ ಚಾಾಣಕ್ಯರ ಪ್ರಕಾರ ನಾವು ಕೆಲವರನ್ನು ದ್ವೇಷಿಸಬಾರದಂತೆ. ಹಾಗಾದ್ರೆ ನಾವು ಯಾವ 5 ಜನರನ್ನು ದ್ವೇಷಿಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯವರು ಜನ್ಮದಾತರು. ನಮಗೆ ಜನ್ಮ ನೀಡಿದ ತಂದೆ ತಾಯಿಯನ್ನು ನಾವು ಎಂದಿಗೂ ದ್ವೇಷಿಸಬಾರದಂತೆ. ತಾಯಿಯಾದವಳು 9 ತಿಂಗಳು ಹೊತ್ತು ಹೆತ್ತು, ಸಾಕಿ ಸಲುಹಿದರೆ, ಅಪ್ಪನಾದವನು ಮಕ್ಕಳಿಗಾಗಿ ತನ್ನ ಜೀವನದ ಎಲ್ಲ ಆಸೆ ಆಕಾಂಕ್ಷೆಗಳನ್ನೇ ತ್ಯಾಗ ಮಾಡುತ್ತಾನೆ. ಹೀಗೆ ನಮಗಾಗಿ ಕಷ್ಟ ಅನುಭವಿಸಿ, ತ್ಯಾಗ ಮಾಡಿ, ಪ್ರೀತಿ ತೋರುವ ಅಪ್ಪ- ಅಮ್ಮನನ್ನು ನಾವೆಂದೂ ದ್ವೇಷಿಸಬಾರದು ಅಂತಾರೆ ಚಾಣಕ್ಯರು.

ಯಾರೊಂದಿಗಾದರೂ ನೀವು ಸ್ನೇಹ ಮಾಡುವುದಿದ್ದಲ್ಲಿ, ಈ ಪರೀಕ್ಷೆ ಮಾಡಿನೋಡಿ..

ಎರಡನೇಯವರು ಮೂರ್ಖರು. ಮೂರ್ಖರೊಂದಿಗೆ ಸ್ನೇಹ ಮಾಡಬೇಡಿ. ಮೂರ್ಖರೊಂದಿಗೆ ವಾದ ಮಾಡಬೇಡಿ ಎನ್ನುತ್ತಾರೆ. ಅದೇ ರೀತಿ ಮೂರ್ಖರೊಂದಿಗೆ, ದ್ವೇಷವನ್ನೂ ಸಾಧಿಸಬಾರದು. ಮೂರ್ಖರಿಂದ ದೂರವಿರುವುದೇ ಒಳಿತು.

ಮೂರನೇಯವರು ಬಲಶಾಲಿ ವ್ಯಕ್ತಿಗಳು. ದ್ವೇಷ ಸಾದಿಸುವ ಮೊದಲು ಎದುರಿಗಿರುವವರು ಎಷ್ಟು ಬಲಶಾಲಿಗಳೆಂದು ತಿಳಿಯಬೇಕಂತೆ. ನೀವು ಬಲಶಾಲಿಗಳೊಂದಿಗೆ ಅಥವಾ ಕೆಟ್ಟ ಜನರೊಂದಿಗೆ ದ್ವೇಷ ಸಾಧಿಸಿದರೆ, ನಿಮ್ಮನ್ನು ಅವರು ನಾಶಗೊಳಿಸುತ್ತಾರೆ.

ಹೆಣ್ಣು ಮಕ್ಕಳಿಗೆ ಇಂಥ ಪುರುಷರು ಇಷ್ಟವಾಗ್ತಾರಂತೆ..!

ನಾಲ್ಕನೇಯವರು ಸ್ನೇಹಿತರು ಸಂಬಂಧಿಕರು. ಕಂಡ ಕಂಡ ವಿಷಯದಲ್ಲಿ ಮೂಗು ತೂರಿಸುವ ಕೆಲ ಸಂಬಂಧಿಕರು ಮತ್ತು ಅನಗತ್ಯ ಮಾತನಾಡುವ, ಕಾಲೆಳೆಯುವ ಸ್ನೇಹಿತರನ್ನು ಕಂಡರೆ ಯಾರಿಗೂ ಆಗುವುದಿಲ್ಲ. ಅಂಥವರೊಂದಿಗೆ ಹೆಚ್ಚು ಮಾತನಾಡದಿದ್ದರೂ ಆದೀತು, ಆದ್ರೆ ದ್ವೇಷವನ್ನ ಮಾತ್ರ ಸಾಧಿಸಲು ಹೋಗಬೇಡಿ. ಯಾಕಂದ್ರೆ ಎಂಥ ಅಧಿಕಪ್ರಸಂಗಿ ಸ್ನೇಹಿತರೇ ಆಗಲಿ, ಸಂಬಂಧಿಕರೇ ಆಗಲಿ ಕೆಲವು ಸಂಕಷ್ಟಗಳು ಬಂದಾಗ, ನೆರವಿಗೆ ಬರುತ್ತಾರೆ. ಹಾಗಾಗಿ ಅಂಥವರ ಬಳಿ ದ್ವೇಷ ಸಾಧಿಸಬೇಡಿ.

ಕೊನೆಯವರು ನೀವೇ. ನೀವು ಕೋಪ ಮಾಡಿಕೊಳ್ಳುವುದು ಒಂದೇ, ನಿಮ್ಮನ್ನು ನೀವು ದ್ವೇಷಿಸುವುದು ಒಂದೇ. ಕೋಪ ಮಾಡಿಕೊಂಡರೆ, ಅದರಿಂದ ನಿಮಗೇ ಹಾನಿಯಾಗುತ್ತದೆ ಹೊರತು, ಬೇರೆಯವರಿಗೇನೂ ನಷ್ಟವಾಗುವುದಿಲ್ಲ. ಹಾಗಾಗಿ ಕೋಪ ಮಾಡಿಕೊಂಡು ನಿಮ್ಮ ಆರೋಗ್ಯ, ಮೂಡನ್ನ ನೀವೇ ಹಾಳು ಮಾಡಿಕೊಳ್ಳುವ ಬದಲು, ತಾಳ್ಮೆಯಿಂದಿರಿ.

ಒಟ್ಟಾರೆಯಾಗಿ ಇದರ ಅರ್ಥವೇನೆಂದರೆ, ಯಾರೊಂದಿಗೂ ದ್ವೇಷವನ್ನು ಸಾಧಿಸಬೇಡಿ. ನಿಮ್ಮ ಕೋಪ ತಾಪವೇನಿದ್ದರೂ ನಿಮ್ಮ ಮನಸ್ಸಿನಲ್ಲೇ ಇರಲಿ ಹೊರತು, ಅದು ಪ್ರತಿಭಟನೆಯಾಗಿ ಹೊರಗೆ ಬಾರದಿರಲಿ. ಇದರಿಂದ ನಿಮಗೇ ನಷ್ಟವಾಗುತ್ತದೆ.

- Advertisement -

Latest Posts

Don't Miss