Tuesday, February 24, 2026

karnatakatv live

ರಬ್ಬರ್ ಫ್ಯಾಕ್ಟರಿಯಲ್ಲಿ ಬೆಂಕಿ- ಮಹಿಳೆಯರು ಸೇರಿ ಮೂವರ ಸಜೀವ ದಹನ..!!

ದೆಹಲಿ: ರಬ್ಬರ್ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈಶಾನ್ಯ ದೆಹಲಿಯ ಝಿಲ್ ಮಿಲ್ ಕೈಗಾರಿಕಾ ಪ್ರದೇಶದಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ರಬ್ಬರ್ ಕಾರ್ಖಾನೆಯಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದ ಬೆಂಕಿ ಕ್ಷಣ ಮಾತ್ರದಲ್ಲಿ ಇಡೀ ಫ್ಯಾಕ್ಟರಿ ಆವರಿಸಿದೆ. ...

ಎಲ್ಲೂ ಜಾಗ ಸಿಗದೆ ಅತಂತ್ರರಾಗ್ತಾರಾ ಈ ಮೂವರು ಅತೃಪ್ತ ಶಾಸಕರು??

ಬೆಂಗಳೂರು: ಅತೃಪ್ತ ಶಾಸಕರಲ್ಲಿ ಮೂವರು ಶಾಸಕರನ್ನು ಮಾತ್ರ ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಬೇಡಿ ಅಂತ ಬಿಜೆಪಿ ಕಾರ್ಯಕರ್ತರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಒತ್ತಾಯ ಹೇರುತ್ತಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಈ 3 ಶಾಸಕರು ಕಾಂಗ್ರೆಸ್ ನಲ್ಲೂ ಇರದೇ ಬಿಜೆಪಿಯಲ್ಲೂ ಸ್ಥಾನ ಸಿಗದೆ ಅತಂತ್ರ ಸ್ಥಿತಿ ತಲುಪಲಿದ್ದಾರಾ ಅನ್ನೋ ಮಾತು ಕೇಳಿ ಬರುತ್ತಿದೆ. ಮೈತ್ರಿ...

ಮೈತ್ರಿ ನಾಯಕರ ಹುಮ್ಮಸ್ಸು ಕಂಡು ಬೆವರುತ್ತಿರುವ ಬಿಜೆಪಿ..!

ಬೆಂಗಳೂರು: ಪತನದಂಚಿನಲ್ಲಿರೋ ಮೈತ್ರಿ ಸರ್ಕಾರ ಇದೀಗ ಸೇಫ್ ಜೋನ್ ಗೆ ಹೋಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ದೋಸ್ತಿಗಳು ಒಬ್ಬೊಬ್ಬರೇ ಅತೃಪ್ತರನ್ನು ಸಂಪರ್ಕ ಮಾಡುತ್ತಿರೋದು ಬಿಜೆಪಿ ನಾಯಕರು ಬೆವರುವಂತೆ ಮಾಡಿದೆ. ಅತೃಪ್ತ ಶಾಸಕರ ಮೇಲೆ ಅನರ್ಹತೆ ಆಸ್ತ್ರ ಪ್ರಯೋಗಿಸಲು ಮುಂದಾಗಿರೋ ದೋಸ್ತಿಗಳ ತಂತ್ರ ವರ್ಕೌಟ್ ಆಗೋ ಲಕ್ಷಣ ಕಾಣ್ತಿದೆ. ರಾಜೀನಾಮೆ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ...

ರಾಜೀನಾಮೆ ವಾಪಸ್ ಪಡೆಯೋ ಸುಳಿವು ನೀಡಿದ ಕೈ ಶಾಸಕರು

ಬೆಂಗಳೂರು: ಸ್ಪೀಕರ್ ಕಚೇರಿಗೆ ಒಟ್ಟಿಗೆ ಬಂದು ರಾಜೀನಾಮೆ ನೀಡಿ ಹೋಗಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ.ಕೆ ಸುಧಾಕರ್ ಮತ್ತು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ರಾಜೀನಾಮೆ ಹಿಂಪಡೆಯೋ ಬಗ್ಗೆ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ನ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ನಾನು ಕೆಲ ಕಾರಣಗಳಿಂದ ರಾಜೀನಾಮೆ ನೀಡಿದ್ದೇನೆ. ನಾನು ಮತ್ತು ಚಿಕ್ಕಬಳ್ಳಾಪುರ...

‘ರಾಮಲಿಂಗಾ ರೆಡ್ಡಿ ಬಂಡೆ ಇದ್ದಹಾಗೆ’- ಬಿಜೆಪಿ ಶಾಸಕ ವಿಶ್ವನಾಥ್

ಬೆಂಗಳೂರು: ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಒಂಥರಾ ಬಂಡೆ ಇದ್ದಹಾಗೆ. ಅವರ ನಿರ್ಧಾರ ಬದಲಿಸೋಕೆ ಸಾಧ್ಯವಿಲ್ಲ ಅಂತ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ನಿವಾಸಕ್ಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ವಿಶ್ವನಾಥ್, ನಾನು ರಾಜಕೀಯದ ಬಗ್ಗೆ ಚರ್ಚೆ ಮಾಡಲು ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿಲ್ಲ. ರೆಡ್ಡಿ ಸಂಘದ ಚುನಾವಣೆಗೆ...

ಪುತ್ರನಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಶಾಸಕನನ್ನು ಸೆಳೆದ ಬಿಜೆಪಿ..!?

ಬೆಂಗಳೂರು: ಪುತ್ರನಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ನ ಪ್ರಭಾವಿ ಶಾಸಕ ಎಂಟಿಬಿ ನಾಗರಾಜ್ ರನ್ನು ಬಿಜೆಪಿ ಸೆಳೆದಿದ್ದು, ಈ ಕಾರಣಕ್ಕಾಗಿಯೇ ಎಂಟಿಬಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ವಿರುದ್ಧ ಆಗ್ಗಾಗ್ಗೆ ತಮ್ಮ ಅಸಮಾಧಾನ ಹೊರಹಾಕುತ್ತಿದ್ದ ಕಾಂಗ್ರೆಸ್ ನ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ರಾಜೀನಾಮೆಗೆ ಕಾರಣ ಇದೀಗ ಬಯಲಾಗಿದೆ. ತಮ್ಮ ಪುತ್ರ...

ಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ದಿ..!

ಎಸ್ ಬಿಐ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಇಂಟರ್ನೆಟ್ ಹಾಗೂ ಮೊಬೈಲ್ ವಹಿವಾಟಿನ ಮೂಲಕ ನಡೆಸೋ ಆರ್ ಟಿ ಜಿಎಸ್, ಎನ್ಇಎಫ್ ಟಿ ವಹಿವಾಟಿಗೆ ವಿಧಿಸುವ ಶುಲ್ಕವನ್ನು ತೆಗೆದು ಹಾಕಲು ಎಸ್ ಬಿಐ ನಿರ್ಧರಿಸಿದೆ. ಡಿಜಿಟಲ್ ವಹಿವಾಟುಗಳನ್ನು ಬೆಂಬಲಿಸುವ ಸಲುವಾಗಿ ನಗದು ವಹಿವಾಟಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಸ್ಟೇಟ್...

ಕುಡಿಯೋ ನೀರಿಗೂ ಹಾಹಾಕಾರ- ಚೆನ್ನೈಗೆ ಬಂತು ನೀರಿನ ರೈಲು..!!

ಚೆನ್ನೈ: ತಮಿಳುನಾಡಿನಾದ್ಯಂತ ಕುಡಿಯೋ ನೀರು ಸಿಗದೆ ಹೈರಾಣಾಗಿದ್ದ ಜನರಿಗೆ ನೀರು ಪೂರೈಸಲು ನಗರಕ್ಕೆ ನೀರು ತುಂಬಿದ ರೈಲು ಬಂದಿದೆ. ತಮಿಳುನಾಡು ಸಿಎಂ ಇಡಪ್ಪಾಡಿ ಪಳನಿಸ್ವಾಮಿ ರಾಜ್ಯದ ಜನರಿಗೆ ಈ ಮೂಲಕ ಕುಡಿಯೋ ನೀರು ಒದಗಿಸಲಿದ್ದಾರೆ. ತಮಿಳುನಾಡಿನಾದ್ಯಂತ ಮಳೆಯ ಕೊರತೆಯಿಂದಾಗಿ ಕುಡಿಯೋ ನೀರಿಗೂ ತತ್ವಾರ ಎದುರಾಗಿದೆ. ಇನ್ನು ಮಹಾನಗರಿ ಚೆನ್ನೈನಲ್ಲಂತೂ ನೀರಿನ ಬವಣೆ ಹೇಳತೀರದಾಗಿದೆ. ದಿನನಿತ್ಯದ...

ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯ- ಶಾಸಕ ಅಶೋಕ್ ಹೇಳಿದ್ದೇನು…?

ಬೆಂಗಳೂರು: ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡ್ತೀನಿ ಅಂತ ಘೋಷಣೆ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರೋ ತನ್ನ ಶಾಸಕರನ್ನು ರೆಸಾರ್ಟ್ ವಾಸ್ತವ್ಯದಲ್ಲಿಡೋಕೆ ಸಿದ್ಧವಾಗಿದೆ. ಆದ್ರೆ ಆರ್.ಅಶೋಕ್ ಇದಕ್ಕೆ ಸಮಜಾಯಿಶಿ ಕೊಟ್ಟಿದ್ದು ಮಾತ್ರ ಭಿನ್ನವಾಗಿತ್ತು. ಸದ್ದಿಲ್ಲದೆ ತನ್ನ ಆಟ ಮುಂದುವರಿಸುತ್ತಿರೋ ಬಿಜೆಪಿಗೆ ಇದೀಗ ಆತಂಕ ಶುರುವಾಗಿದೆ. ಬೆಳಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಸಿಎಂ ವಿಶ್ವಾಸಮತ ಯಾಚನೆ ಬಗ್ಗೆ ಖಡಕ್ ಆಗಿ...

‘ಅತೃಪ್ತರು ವಾಪಸ್ ಬರ್ತಾರೆ- ಪತಿ ಕುಮಾರಸ್ವಾಮಿ ಆರಾಮಾಗಿದ್ದಾರೆ’- ಶಾಸಕಿ ಅನಿತಾ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉಳಿಯುತ್ತೆ, ಯಾವುದೇ ಕಾರಣಕ್ಕೂ ಪತನವಾಗೋದಿಲ್ಲ ಅಂತ ಶಾಸಕಿ ಅನಿತಾಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಧಾನಮಂಡಲ ಅಧಿವೇಶನ ಹಿನ್ನೆಲೆಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ, ರಾಜೀನಾಮೆ ನೀಡಿರುವ ಅತೃಪ್ತ ಶಾಸಕು ವಾಪಸ್ ಬರ್ತಾರೆ. ಶಾಸಕರಾಗಿ ಜನರಿಂದ ಆಯ್ಕೆಯಾದ ಮೇಲೆ ಜನಸೇವೆ ಮಾಡಬೇಕು. ಹಣ, ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಜಿಗಿಯುವುದು ತಪ್ಪು....
- Advertisement -spot_img

Latest News

ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಕೊಲೆ ಅತ್ಯಂತ ಆಘಾತಕಾರಿ ಅಪರಾಧಿಕ ಕೃತ್ಯ: ಬಿ.ವೈ.ವಿಜಯೇಂದ್ರ

Political News: ಶಿವಮೊಗ್ಗದಲ್ಲಿ ಅನ್ಯಕೋಮಿನ ಯುವಕರು SSLC ವಿದ್ಯಾರ್ಥಿಯ ಮೇಲೆ ಸಾಯುವಂತೆ ಹಲ್ಲೆ ಮಾಡಿದ್ದು, ಆತ ಹತ್ಯೆಗೀಡಾಗಿದ್ದಾನೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗದಲ್ಲಿ...
- Advertisement -spot_img