Health tips: ಕೆಲವು ಬಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯನ್ನು ಕರೆದುಕೊಂಡು ಹೋಗಿ, ಮನೋವೈದ್ಯರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ಕೆಲವೊಮ್ಮೆ ಹುಚ್ಚರಂತಾಡುವವರನ್ನು ಕರೆದೊಯ್ಯಲಾಗುತ್ತದೆ. ಹಾಗಾದ್ರೆ ಮನೋವೈದ್ಯರಲ್ಲಿ ಯಾಕೆ ಇಂಥವರನ್ನು ಕರೆದೊಯ್ಯಲಾಗುತ್ತದೆ ಎಂಬ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಮಾತನಾಡಿದ್ದಾರೆ.
ಯಾರಾದರೂ ಬಾಯಿಗೆ ಬಂದಂತೆ ಮಾತನಾಡಿದರೆ, ಅಥವಾ ತಪ್ಪು ತಪ್ಪಾಗಿ ಬಿಹೇವ್ ಮಾಡಿದರೆ ಅಂಥವರನ್ನು ಹುಚ್ಚಾ ಎಂದು ಕರೆಯುತ್ತಾರೆ. ಆಗ ಆ ವ್ಯಕ್ತಿಗೆ ಕೋಪ ಬರುತ್ತದೆ. ಯಾಕಂದ್ರೆ ಹುಚ್ಚ ಅನ್ನೋದು ಒಂದು ಕಳಂಕಿತ ಪದ. ಆದರೆ ನೀವು ಚಿಕಿತ್ಸೆಗೆಂದು ಆ ವ್ಯಕ್ತಿಯನ್ನು ಮನೋವೈದ್ಯರಲ್ಲಿ ಕರೆದುಕೊಂಡು ಹೋದರೆ, ಅವರು ಆ ವ್ಯಕ್ತಿಯನ್ನು ಮಗುವಿನಂತೆ ಮಾತನಾಡಿಸುತ್ತಾರೆ. ಮತ್ತು ಅವರೆಂದು ಹುಚ್ಚ ಎನ್ನುವ ಪದ ಬಳಸುವುದಿಲ್ಲ. ಈ ಮೂಲಕ ಅವರು ಮನಸ್ಸಿನ ರೋಗವನ್ನು ಗುಣಪಡಿಸುತ್ತಾರೆ.
ಮನೋರೋಗಕ್ಕೆ ಮನೋಚಿಕಿತ್ಸೆ ಇದೆ. ಇಂಥವರನ್ನು ಔಷಧಿ ಮತ್ತು ಮಾತಿನ ಮೂಲಕ ಸರಿ ಮಾಡಲಾಗುತ್ತದೆ. ತಜ್ಞರು ಮಾತನಾಡುವ ಮೂಲಕವೇ ಇಂಥ ಮನೋರೋಗವನ್ನು ವಾಸಿ ಮಾಡಿ, ಮನಸ್ಸನ್ನು ಹತೋಟಿಯಲ್ಲಿಡುವಂತೆ ಮಾಡುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..
ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?