Saturday, July 27, 2024

Latest Posts

ಗಣೇಶನನ್ನು ಏಕದಂತ ಎಂದು ಏಕೆ ಕರೆಯುತ್ತಾರೆ..? ಹಲ್ಲು ತುಂಡಾಗಲು ಕಾರಣವೇನು..?

- Advertisement -

ಯಾವುದೇ ಕಾರ್ಯಕ್ರಮವಿರಲಿ, ಮೊದಲು ವಿಘ್ನ ನಿವಾರಕನನ್ನು ನೆನೆದೇ, ನಂತರ ಉಳಿದವರ ಪೂಜೆ ಮಾಡಲಾಗತ್ತೆ. ಇಂಥ ಮಹಾ ಗಣಪತಿಯ ಒಂದು ಹಲ್ಲು ಅರ್ಧ ತುಂಡಾಗಿತ್ತು. ಹಾಗಾಗಿಯೇ ಅವನನ್ನು ಏಕದಂತ ಎಂದು ಕರೆಯಲಾಗುತ್ತಿತ್ತು. ಹಾಗಾದ್ರೆ ಯಾಕೆ ಗಣೇಶನನ್ನು ಏಕದಂತ ಎಂದು ಕರೆಯಲಾಗತ್ತೆ..? ಅರ್ಧ ಹಲ್ಲು ಮುರಿಯಲು ಕಾರಣವೇನು..?

ಒಮ್ಮೆ ಶಿವ ಧ್ಯಾನ ಮಾಡುವಾಗ, ಅವನ ಧ್ಯಾನವನ್ನು ಯಾರೂ ಭಂಗ ಮಾಡಬಾರದು ಎಂದು ಗಣೇಶನನ್ನು ಕರೆಯುತ್ತಾನೆ. ಕರೆದು, ಪುತ್ರ ಗಣೇಶ, ನಾನು ಕೊಂಚ ಹೊತ್ತು ಧ್ಯಾನ ಮಾಡಬೇಕೆಂದಿದ್ದೇನೆ. ನನ್ನ ಧ್ಯಾನವನ್ನು ಯಾರೂ ಭಂಗ ಮಾಡದಂತೆ ನೀನು ತಡೆಯಬೇಕು. ನನ್ನನ್ನು ಯಾರೇ ಭೇಟಿಯಾಗಲು ಬಂದರೂ, ಅವರನ್ನು ಬಾಗಿಲಲ್ಲೇ ಹಿಡಿದಿಡಬೇಕು. ಅವರು ನನ್ನ ಧ್ಯಾನ ಮುಗಿದ ಬಳಿಕವೇ, ಭೇಟಿಯಾಗಬೇಕು ವಿನಃ ನನ್ನ ಧ್ಯಾನಕ್ಕೆ ಅವರ್ಯಾರೂ ಭಂಗ ತರಬಾರದು. ಹಾಗೆ ಮಾಡದಂತೆ ನೀನು ಅವರನ್ನು ತಡೆಯಬೇಕು ಎಂದು ಆದೇಶಿಸುತ್ತಾರೆ.

ಎರಡು ರೀತಿ ಶೇಂಗಾ ಚಟ್ನಿ ರೆಸಿಪಿ..

ಶಿವ ಧ್ಯಾನದಲ್ಲಿ ಮಗ್ನನಾದ ಮೇಲೆ, ಗಣೇಶ ಬಾಗಿಲ ಬಳಿ ನಿಂತು, ಯಾರೂ ಧ್ಯಾನ ಭಂಗ ಮಾಡದಂತೆ ಕಾಯುತ್ತಿರುತ್ತಾನೆ. ಅಷ್ಟೊತ್ತಿಗೆ, ಅಲ್ಲಿಗೆ ಪರಶುರಾಮನ ಆಗಮನವಾಗುತ್ತದೆ. ಶಿವನನ್ನು ಭೇಟಿಯಾಗಲು, ಕೈಲಾಸಕ್ಕೆ ಧಾವಿಸಿ ಬರುತ್ತಿದ್ದ ಪರಶುರಾಮನನ್ನು ಗಣೇಶ ತಡೆ ಹಿಡಿಯುತ್ತಾನೆ. ಆಗ ಕೋಪಗೊಂಡ ಪರಶುರಾಮ ಯಾಕೆ ನನ್ನನ್ನು ತಡೆಯುತ್ತಿರುವೆ ಎಂದು ಕೇಳುತ್ತಾನೆ.

ಆಗ ಗಣೇಶ, ನಾನು ಶಿವನ ಪುತ್ರ ಗಣೇಶ. ಅವರು ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಅವರ ಧ್ಯಾನವನ್ನು ಯಾರೂ ಭಂಗ ಮಾಡದಂತೆ ನೋಡಿಕೋ ಎಂದು ನನ್ನಲ್ಲಿ ಹೇಳಿದ್ದಾರೆ. ಹಾಗಾಗಿ ನಾನು ಇಲ್ಲಿ ಬಾಗಿಲು ಕಾಯುತ್ತಿರುವೆ. ನಿಮ್ಮನ್ನು ಒಳಗೆ ಬಿಡಲಾಗುವುದಿಲ್ಲ ಎಂದು ಹೇಳುತ್ತಾನೆ. ಅಲ್ಲಿ ಪರಶುರಾಮ ಮತ್ತು ಗಣೇಶನ ಮಧ್ಯೆ ಯುದ್ಧವಾಗುತ್ತದೆ. ಪರಶುರಾಮ ತನ್ನ ಪರಶುವನ್ನು ಗಣೇಶನ ಬಳಿ ಎಸೆಯುತ್ತಾರೆ. ಗಣೇಶನ ಒಂದು ಹಲ್ಲು ಮುರಿಯುತ್ತದೆ.

ಕೊಂಕಣಿ ಶೈಲಿಯ ಖಾರಾ ದೋಸೆ (ಸಾನ್ನಾ ಪೋಳೊ)ರೆಸಿಪಿ..

ಗಣೇಶ ಹಲ್ಲು ಮುರಿದುಕೊಂಡು ಒದ್ದಾಡುವುದನ್ನು ನೋಡಿದ ಪಾರ್ವತಿಗೆ ಕೋಪ ಬರುತ್ತದೆ. ಆಕೆ ಉಗಹ್ರಸ್ವರೂಪಿಯಾಗುತ್ತಾಳೆ. ಆಗ ಪ್ರತ್ಯಕ್ಷನಾದ ಶಿವ, ಪರಶುರಾಮನ ಅವತಾರಿಯಾದ ಶ್ರೀವಿಷ್ಣು, ಗಣೇಶನ ಹಲ್ಲನ್ನು ಕಡಿದು, ಅವನ ಸಾಮರ್ಥ್ಯ, ಧೈರ್ಯವನ್ನ ಲೋಕಕ್ಕೆ ತೋರಿಸಿದ್ದಾರೆ. ಇಂದಿನಿಂದ ಗಣೇಶ ಏಕದಂತನೆಂದು ಕರೆಯಲ್ಪಡುವನು ಎಂದು ಹೇಳುತ್ತಾರೆ. ಹೀಗೆ ಗಣೇಶನಿಗೆ ಏಕದಂತ ಎಂಬ ಹೆಸರು ಬರುತ್ತದೆ.

- Advertisement -

Latest Posts

Don't Miss