Friday, June 20, 2025

Latest Posts

ಹಿಂದೂ ಧರ್ಮದ ಪವಿತ್ರ ಕಾರ್ಯಗಳಲ್ಲಿ ಮಹತ್ತರ ಸ್ಥಾನ ಪಡೆದ ಎಲೆಗಳಿವು..

- Advertisement -

ಪೂಜೆಯ ಸಮಯದಲ್ಲಿ ಆರತಿಯನ್ನು ಯಾಕೆ ಮತ್ತು ಹೇಗೆ ಮಾಡಬೇಕು..?

ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರ ಮಾಡುವಾಗ, ನಾವು ಹೂವು, ಹಣ್ಣು, ಅಡಿಕೆ, ಎಲೆ, ಕೆಲವು ಜಲ, ಖಾದ್ಯಗಳನ್ನೆಲ್ಲ ಬಳಸುತ್ತೇವೆ. ಇವೆಲ್ಲದಕ್ಕೂ ಪ್ರಮುಖ ಸ್ಥಾನಗಳಲ್ಲಿ ನೀಡಿದ್ದೇವೆ. ಇದೇ ರೀತಿ ಕೆಲವು ಎಲೆಗಳು ಪೂಜೆಯಲ್ಲಿ ಮಹತ್ತರ ಸ್ಥಾನ ಪಡೆದಿದೆ. ಅದು ಯಾವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನೀವು ಶ್ರೀಮಂತರಾಗಬೇಕು ಅಂದ್ರೆ, ಚಾಣಕ್ಯ ಹೇಳಿರುವ ಈ ನಿಯಮಗಳನ್ನು ಫಾಲೋ ಮಾಡಿ..

ತುಳಸಿ: ಎಲ್ಲ ಸಾಧನವಿದ್ದು, ತುಳಸಿ ಇಲ್ಲದ ಪೂಜೆ ಒಲ್ಲನೋ, ಹರಿ ಕೊಳ್ಳನೋ ಎಂಬಂತೆ. ಪೂಜೆಗಳಲ್ಲಿ ತುಳಸಿಯನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಗಣಪತಿಯ ಪೂಜೆಯಲ್ಲಿ ಬಿಟ್ಟು, ಉಳಿದೆಲ್ಲರ ಪೂಜೆಯಲ್ಲಿ ತುಳಸಿಯನ್ನ ಬಳಸಲಾಗುತ್ತದೆ. ಅದರಲ್ಲೂ ವಿಷ್ಣು ಮತ್ತು ಕೃಷ್ಣನ ಪೂಜೆ ಮಾಡುವಾಗ ತುಳಸಿ ಅತ್ಯಗತ್ಯ. ನೈವೇದ್ಯ ಮಾಡಿದಾಗ, ಅಲ್ಲಿ ತುಳಸಿ ಬಳಸಲೇಬೇಕು. ಇನ್ನು ತುಳಸಿ ಹಬ್ಬದಂದು ತುಳಸಿ ಪೂಜೆ ಮಾಡಲಾಗುತ್ತದೆ. ಅಷ್ಟೇ ಯಾಕೆ ಹಿಂದೂ ಧರ್ಮದಲ್ಲಿ ಪ್ರತಿದಿನ ದೇವರಿಗೆ ದೀಪ ಹಚ್ಚಿದ ಬಳಿಕ, ತುಳಸಿ ಕಟ್ಟೆಗೂ ದೀಪವಿಡಬೇಕು ಅನ್ನೋ ನಿಯಮವಿದೆ.

ವೀಳ್ಯದೆಲೆ: ಊಟವಾದ ಮೇಲೆ ಹಾಯಾಗಿ ಕೂತು ಮೆಲ್ಲುವ ವೀಳ್ಯದೆಲೆಯನ್ನು ದೇವರ ಪೂಜೆಗೆ ಬಳಸಲಾಗುತ್ತದೆ. ಪೂಜೆಗೆ ತೆಂಗಿನಕಾಯಿ, ಬಾಳೆಹಣ್ಣು, ಹೂವು, ಕರ್ಪೂರವೆಷ್ಟು ಮುಖ್ಯವೋ, ಅಷ್ಟೇ ಪ್ರಾಮುಖ್ಯತೆ ಎಲೆ ಮತ್ತು ಅಡಿಕೆಗೆ ನೀಡಲಾಗಿದೆ. ಮುತ್ತೈದೆಗೆ ಬಾಗೀನ ನೀಡುವಾಗ, ಉಡಿ ತುಂಬುವಾಗ ವೀಳ್ಯದೆಲೆ ಕೊಡುವುದು ತುಂಬಾ ಮುಖ್ಯ. ಅಲ್ಲದೇ, ಪೂಜೆಯ ಬಳಿಕ, ಪುರೋಹಿತರಿಗೆ ವೀಳ್ಯದೆಲೆಯ ಜೊತೆಗೆ ದಕ್ಷಿಣೆಯನ್ನು ಕೊಡಲಾಗುತ್ತದೆ.

ಊಟ ಮಾಡುವಾಗ ಇದನ್ನು ಗಮನದಲ್ಲಿಡಿ, ಇಲ್ಲವಾದರೆ ಆರೋಗ್ಯ, ಅದೃಷ್ಟ ನಿಮ್ಮ ಕೈ ತಪ್ಪುತ್ತದೆ..

ಬಾಳೆ ಎಲೆ: ಬಾಳೆ ಎಲೆಯಲ್ಲಿ ಊಟ ಮಾಡಿದ್ರೆ, ಆರೋಗ್ಯ ಉತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಅದರಂತೆ, ಪೂಜೆ ವೇಳೆಯೂ ನೈವೇದ್ಯವನ್ನು ಬಾಳೆ ಎಲೆಯಲ್ಲೇ ಇಡಲಾಗುತ್ತದೆ. ಬಾಳೆ ಎಲೆಯಲ್ಲಿ ಪ್ರಸಾದ ನೀಡಲಾಗುತ್ತದೆ. ಅದೇ ರೀತಿ ಕೆಲವು ಪೂಜೆಗಳಿಗೆ ದೇವರನ್ನು ಬಾಳೆ ಎಲೆಯಿಂದಲೇ ಅಲಂಕಾರ ಮಾಡಲಾಗುತ್ತದೆ. ಅಷ್ಟೇ ಯಾಕೆ ಶ್ರಾದ್ಧ ಕಾರ್ಯಗಳಲ್ಲಿ ಬಾಳೆಎಲೆಯನ್ನ ಬಳಸಲೇಬೇಕೆಂಬ ನಿಯಮವಿದೆ.

ಯುವ ಜನತೆ ಈ ವಿಷಯಗಳಿಂದ ದೂರವಿದ್ದರೆ ಉತ್ತಮ ಅಂತಾರೆ ಚಾಣಕ್ಯರು..

ಮಾವಿನ ಎಲೆ: ಹಬ್ಬ ಹರಿದಿನ, ಮನೆಯಲ್ಲಿ ಪೂಜೆ ಇರುವಾಗ ಮಾವಿನ ಎಲೆಯಿಂದ ಮನೆಗೆ ತೋರಣ ಕಟ್ಟಲಾಗುತ್ತದೆ. ಕಲಶ ರೆಡಿ ಮಾಡುವಾಗ ಮಾವಿನ ಎಲೆ ಬಳಸಲಾಗತ್ತೆ. ಮಾವಿನ ಎಲೆ ಬರೀ ಸೌಂದರ್ಯಕ್ಕಲ್ಲ. ಬದಲಾಗಿ ಮಾವಿನ ಎಲೆ ತೋರಣ ಕಟ್ಟುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚುತ್ತದೆ. ಮಾವಿನ ಗಿಡವಿದ್ದಲ್ಲಿ, ಸ್ವಚ್ಛ ಗಾಳಿ ಬೀಸುತ್ತದೆ.

ರಾವಣ ಹಲವು ವರ್ಷಗಳವರೆಗೆ ಇವರನ್ನು ತನ್ನ ಕಾಲ ಕೆಳಗೆ ಇರಿಸಿಕೊಂಡಿದ್ದನಂತೆ.. ಯಾರವರು..?

ಬಿಲ್ವ ಪತ್ರೆ: ಬಿಲ್ವ ಪತ್ರೆ ಶಿವನಿಗೆ ಇಷ್ಟವಾದ ಎಲೆ. ಹಾಗಾಗಿ ಪ್ರತೀ ಸೋಮವಾರ, ಅಥವಾ ಶ್ರಾವಣ ಸೋಮವಾರ ಅಥವಾ ಶಿವರಾತ್ರಿಯಂದು ಶಿವಲಿಂಗಕ್ಕೆ ಬಿಲ್ವಪತ್ರೆಯನ್ನೇರಿಸಿ, ಪೂಜೆ ಮಾಡಲಾಗುತ್ತದೆ.

- Advertisement -

Latest Posts

Don't Miss