Saturday, June 21, 2025

Latest Posts

ಗಣೇಶ ಕುಬೇರನನ್ನೇ ತಿನ್ನಲು ಹೋಗಿದ್ದೇಕೆ..? ಕುಬೇರ ಅಂಥಾದ್ದೇನು ಮಾಡಿದ್ದ..?

- Advertisement -

ದೇವರ ದೇವ, ಅಗ್ರ ಪೂಜಿತ ಗಣೇಶ ಎಲ್ಲರ ಇಷ್ಟದೈವ ಎಂದರೆ ತಪ್ಪಾಗುವುದಿಲ್ಲ. ಅಂಥ ಗಣೇಶ ಕುಬೇರನನ್ನೇ ತಿನ್ನಲು ಹೋಗಿದ್ದನಂತೆ. ಹಾಗಾದ್ರೆ ಗಣೇಶನೇಕೆ ಕುಬೇರನನ್ನು ತಿನ್ನಲು ಹೋದ..? ಕುಬೇರ ಅಂಥಾದ್ದೇನು ಮಾಡಿದ್ದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಸ್ವರ್ಣ ಭಂಡಾರವನ್ನು ಹೊಂದಿದ್ದ ಕುಬೇರನಿಗೆ, ತಾನು ಶ್ರೀಮಂತನೆಂಬ ಅಹಂಕಾರವಿತ್ತು. ಸ್ವರ್ಣಲಂಕೆಯನ್ನು ಕುಬೇರನೇ ಆಳುತ್ತಿದ್ದ ಕಾರಣ, ಕುಬೇರನಿಗೆ ತನ್ನ ಶ್ರೀಮಂತಿಯನ್ನು ಇತರರಲ್ಲಿ ತೋರಿಸಬೇಕೆಂಬ ಆಸೆಯುಂಟಾಯಿತು. ಹಾಗಾಗಿ ಕುಬೇರ ಕೈಲಾಸಕ್ಕೆ ಹೋಗಿ, ಶಿವನಲ್ಲಿ ತನ್ನ ಮನೆಗೆ ಭೋಜನಕ್ಕೆ ಆಗಮಿಸುವಂತೆ ಕೇಳಿಕೊಂಡ.

ಈ ದೇವಸ್ಥಾನದಲ್ಲಿ ಶಿವನಿಗಿಂತ ಮುಂಚೆ ರಾವಣನಿಗೆ ಪೂಜೆ ಸಲ್ಲುತ್ತದೆ..

ಆಗ ಶಿವ, ತನ್ನ ಪುತ್ರ ಗಮೇಶನನ್ನು ಕರೆದು, ಇವನು ನನ್ನ ಪುತ್ರ ಗಣೇಶ, ನನ್ನ ಬದಲು ಇವನು ಮತ್ತು ಇವನ ವಾಹನವಾದ ಮೂಷಿಕ ನಿಮ್ಮ ಮನೆಯ ಭೋಜನಕ್ಕೆ ಆಗಮಿಸುತ್ತಾರೆ ಎಂದು ಹೇಳಿದ. ಕುಬೇರ ಖುಷಿಯಿಂದಲೇ ಗಣೇಶನನ್ನು ಕರೆದೊಯ್ಯಲು ತಯಾರಾದ. ಆದರೆ ಗಣೇಶ, ನಾನು ನಿಮ್ಮ ಮನೆಗೆ ಬಂದರೆ, ನನಗೆ ಹೊಟ್ಟೆ ತುಂಬುವವರೆಗೂ ಭೋಜನ ಹಾಕಬೇಕಾಗುತ್ತದೆ. ಇಲ್ಲವಾದಲ್ಲಿ ನಾನು ನಿಮ್ಮನ್ನೇ ತಿಂದು ಬಿಡುತ್ತೇನೆಂದು ಹೇಳಿದ.

ಇದನ್ನು ಕೇಳಿ ಹಾಸ್ಯವೆಂದು ತಿಳಿದು, ಕುಬೇರ ನಕ್ಕ. ಅದಕ್ಕೇನಂತೆ, ನಿನಗೆ ಹೊಟ್ಟೆ ತುಂಬಿದ ಬಳಿಕವೂ ಊಟ ಮಾಡುವಷ್ಟು ಊಟ ನಮ್ಮಲ್ಲಿದೆ, ತೃಪ್ತಿಯಾಗಿ ತಿನ್ನುವಂತೆ ಬಾ ಎಂದು ಕರೆದೊಯ್ಯುತ್ತಾನೆ. ಗಣೇಶನಿಗೆ ಕುಬೇರನ ಅಹಂಕಾರ ಎದ್ದು ಕಾಣುತ್ತಿದ್ದ ಕಾರಣ, ಕುಬೇರನಿಗೆ ಬುದ್ಧಿ ಕಲಿಸಬೇಕೆಂದು ಗಣೇಶ ನಿರ್ಧರಿಸಿರುತ್ತಾನೆ. ಕುಬೇರನ ಮನೆಗೆ ಗಣೇಶ ಮತ್ತು ಮೂಷಿಕ ಹೋಗಿ, ಊಟಕ್ಕೆ ಕುಳಿತುಕೊಳ್ಳುತ್ತಾರೆ.

ರಾವಣನಲ್ಲಿದ್ದ ಈ 5 ಗುಣಗಳನ್ನು ನಾವೂ ಕೂಡ ಅಳವಡಿಸಿಕೊಂಡರೆ, ನಮ್ಮ ಯಶಸ್ಸು ಖಚಿತ..

ಅವರ ಮುಂದೆ ವಿವಿಧ ರೀತಿಯ ಸಿಹಿ ತಿಂಡಿ, ಖಾದ್ಯ, ಹಣ್ಣು ಹಂಪಲೆಲ್ಲ ಬರುತ್ತದೆ. ಇದನ್ನು ಕಂಡು ಗಣೇಶ ಖುಷಿಯಾಗುತ್ತಾನೆ. ಆದರೆ ಕುಬೇರನ ಮುಖದಲ್ಲಿ ಗಣೇಶನಿಗೆ ಭೋಜನ ನೀಡುತ್ತಿದ್ದೆನೆನ್ನುವುದನ್ನು ಬಿಟ್ಟು, ತನ್ನ ಆಡಂಬರ ತೋರಿಸುವ ಅಹಂಕಾರ ಕಾಣಿಸುತ್ತಿತ್ತು. ಇದಾದ ಬಳಿಕ, ಗಣೇಶ ಊಟ ಮಾಡಲು ಶುರು ಮಾಡುತ್ತಾನೆ. ಹೀಗೆ ಊಟ ಮಾಡುತ್ತ ಮಾಡುತ್ತ, ಮಾಡಿದ ಅಷ್ಟೂ ಅಡುಗೆ ಖಾಲಿ ಮಾಡುತ್ತಾನೆ.

ಕುಬೇರ ಮತ್ತೊಮ್ಮೆ ಅಷ್ಟೇ ಅಡಿಗೆ ಮಾಡಿಸುತ್ತಾನೆ. ಗಣೇಶ ಅಷ್ಟನ್ನೂ ತಿಂದು ಮುಗಿಸುತ್ತಾನೆ. ಎರಡು ಬಾರಿ ಮಾಡಿದ, ಭೋಜನ ಉಂಡರೂ ಕೂಡ, ಗಣೇಶನಿಗೆ ತೃಪ್ತಿಯಾಗುವುದಿಲ್ಲ. ಮತ್ತೂ ಬೇಕು ಎನ್ನುತ್ತಾನೆ. ಕಂಗಾಲಾದ ಕುಬೇರ, ಮೂರನೇ ಬಾರಿ ಅಡುಗೆ ಮಾಡಿಸಿ ಬಡಿಸುತ್ತಾನೆ. ಇದನ್ನೂ ಉಂಡು, ಮತ್ತೂ ಬೇಕೆಂದು ಗಣೇಶ ಕೇಳುತ್ತಾನೆ. ನಮ್ಮ ಸಾಮ್ರಾಜ್ಯದಲ್ಲಿರುವ ಧಾನ್ಯವೆಲ್ಲ ಖಾಲಿಯಾಗಿದೆ. ಈಗೆಲ್ಲಿಂದ ಊಟ ತರುವುದೆಂದು ಕುಬೇರ ಚಿಂತೆಗೀಡಾಗುತ್ತಾನೆ.

ಅಪ್ಪ ಅಮ್ಮನ ಈ ತಪ್ಪಿನಿಂದ ಮಕ್ಕಳು ಇಂಥ ಶಿಕ್ಷೆ ಅನುಭವಿಸಬೇಕಾಗುತ್ತದೆ…

ಆಗ ಗಣೇಶ, ನನ್ನ ಹಸಿವಿನ್ನೂ ನೀಗಿಲ್ಲ. ನಾನೀಗ ನಿಮ್ಮನ್ನೇ ತಿನ್ನುತ್ತೇನೆಂದು ಹೇಳಿ, ಕುಬೇರನನ್ನು ಅಟ್ಟಿಸಿಕೊಂಡು ಬರುತ್ತಾನೆ. ಆಗ ಕುಬೇರನಿಗೆ ತನ್ನ ತಪ್ಪಿನ ಅರಿವಾಗಿ, ಗಣೇಶನಲ್ಲಿ ಕ್ಷಮೆ ಕೇಳುತ್ತಾನೆ. ಹೀಗೆ ಗಣೇಶ ಕುಬೇರನ ಅಹಂಕಾರ ಇಳಿಸುತ್ತಾನೆ. ಹೀಗೆ ಕಾಲ ಕಳೆದಂತೆ, ಕುಬೇರನಿಂದ ಸ್ವರ್ಣ ಲಂಕೆ ರಾವಣನ ಪಾಲಾಗುತ್ತದೆ.

- Advertisement -

Latest Posts

Don't Miss