Thursday, June 19, 2025

Latest Posts

ಲಂಕಾಪತಿ ರಾವಣನ ಪೂರ್ಣವಾಗದ ಆಸೆಗಳಿದು.. ಭಾಗ 1

- Advertisement -

ಲಂಕಾಪತಿ ರಾವಣ ರಾಕ್ಷಸನಾದರೂ, ಬ್ರಾಹ್ಮಣನಾಗಿದ್ದ. ಜ್ಞಾನ ಭಂಡಾರಗಳನ್ನೇ ಹೊತ್ತಿದ್ದ ರಾವಣ, ಸಕಲ ಕಲಾ ವಲ್ಲಭನಾಗಿದ್ದ. ಅವನು ಕಲಿಯದ ವಿದ್ಯೆಗಳಿರಲಿಲ್ಲ. ಶಸ್ತ್ರಾಭ್ಯಾಸದಿಂದ ಶಾಸ್ತ್ರಾಭ್ಯಾಸದವರೆಗೂ ಅವನು ಪಾರಂಗತನಾಗಿದ್ದ. ಆಯುರ್ವೇದ ವಿದ್ಯೆಗಳಲ್ಲಿ ಪಂಡಿತನಾಗಿದ್ದ. ಇಂಥ ರಾವಣ, ಮಾಡಿದ್ದು ಒಂದೇ ಒಂದು ತಪ್ಪು. ಸೀತೆಯನ್ನ ಅಪಹರಿಸಿದ್ದು. ಇದರಿಂದಲೇ ಅವನ ಮೃತ್ಯು ಸಂಭವಿಸಿದ್ದು. ಆದ್ರೆ ಲಂಕಾಪತಿ ರಾವಣನಿಗೆ ಕೆಲವು ಆಸೆಗಳಿದ್ದವು. ಆದ್ರೆ ಅದು ಪೂರ್ಣವಾಗಲಿಲ್ಲ. ಯಾಕಂದ್ರೆ ಅವು ಲೋಕದ ವಿರುದ್ಧವಾಗಿದ್ದವು. ಹಾಗಾದ್ರೆ ಯಾವುದು ಆ ಲಂಕಾಪತಿ ರಾವಣನ ಅಪೂರ್ಣ ಆಸೆಗಳು ಅಂತಾ ತಿಳಿಯೋಣ ಬನ್ನಿ..

ಭೀಷ್ಮ ಪಿತಾಮಹರ ಈ 5 ತಪ್ಪಿನಿಂದಾಗಿಯೇ ಮಹಾಭಾರತ ಯುದ್ಧವಾಗಿತ್ತು..

ಮೊದಲನೇಯ ಆಸೆ, ಎಲ್ಲರ ಮೈ ಬಣ್ಣವೂ ಬೆಳ್ಳಗಿರಲಿ ಅನ್ನೋದು ರಾವಣನ ಆಸೆಯಾಗಿತ್ತು. ರಾವಣ ಕಪ್ಪು ಬಣ್ಣದವನಾಗಿದ್ದ ಅಂತಾ ಹೇಳಲಾಗತ್ತೆ. ಯಾಕಂದ್ರೆ ಪುರಾಣ ಕಥೆಗಳಲ್ಲಿ ರಾಕ್ಷಸರು ಕಪ್ಪು ಮೈ ಬಣ್ಣದವರಾಗಿದ್ದರು. ಮತ್ತು ದೇವತೆಗಳು ಬಿಳಿ ಮೈಬಣ್ಣದವರಾಗಿದ್ದರು ಅಂತಾ ಹೇಳಲಾಗಿದೆ. ಹಾಗಾಗಿ ಎಲ್ಲರ ಮೈ ಬಣ್ಣವೂ ಬಿಳಿಯಾಗಿರಬೇಕು. ಯಾರಲ್ಲಿಯೂ ಬೇಧ ಭಾವಿರಬಾರದು. ದೇವತೆಗಳಿಗೆ ಸಿಗುವ ಮರ್ಯಾದೆ ತಮಗೂ ಸಿಗಬೇಕು ಅನ್ನೋದು ರಾವಣನ ಆಸೆಯಾಗಿತ್ತು.

ಎರಡನೇಯ ಆಸೆ, ಬಾಲಿಯನ್ನು ಸೋಲಿಸುವುದು ರಾವಣನ ಆಸೆಯಾಗಿತ್ತು. ಶ್ರೀರಾಮನ ಹಿಂಬಾಲಕನಾಗಿದ್ದ ಬಾಲಿ, ರಾವಣನನ್ನು ಅವಮಾನಿಸಿದ್ದ. ಸೋಲಿಸಿದ್ದ. ರಾವಣನ ಕುತ್ತಿಗೆಯನ್ನು ಹಿಡಿದು, ಸಮುದ್ರವನ್ನು ಸುತ್ತಿದ್ದ. ಹೀಗಾಗಿ ಬಾಲಿಯ ವಿರುದ್ಧ ರಾವಣನಿಗೆ ದ್ವೇಷವಿತ್ತು. ಆದ್ರೆ ಬಾಲಿಯನ್ನು ಸೋಲಿಸಲು ರಾವಣನಿಗೆ ಆಗಲಿಲ್ಲ. ಯಾಕಂದ್ರೆ ಲಂಕೆಯಲ್ಲಿ ನಡೆದ ಯುದ್ಧದಲ್ಲಿ ಬಾಲಿ ಬೇರೆಯವರಿಂದ ಮರಣ ಹೊಂದಿದ. ಮತ್ತು ನಾಲ್ಕು ದಿನದ ಬಳಿಕ ರಾವಣನೂ ಮರಣ ಹೊಂದಿದ.

ಚಾಣಕ್ಯನ ಈ 5 ಮಾತನ್ನ ಜೀವನದಲ್ಲಿ ಅಳವಡಿಸಿಕೊಂಡರೆ, ನೆಮ್ಮದಿಯ ಜೀವನ ನಿಮ್ಮದಾಗುತ್ತದೆ..

ಮೂರನೇಯ ಆಸೆ, ಚಿನ್ನವನ್ನ ಪರಿಮಳಭರಿತವಾಗಿ ಮಾಡುವುದು ರಾವಣನ ಆಸೆಯಾಗಿತ್ತು. ಅವನು ಪ್ರಪಂಚದಲ್ಲಿ ಸಿಗುವ ಚಿನ್ನವನ್ನೆಲ್ಲ ಲಂಕೆಗೆ ತರಿಸಿಕೊಂಡಿದ್ದ. ಕುಬೇರನನ್ನು ಲೂಟಿ ಮಾಡಿದ್ದ. ಹಾಗಾಗಿ ಅದನ್ನ ಸ್ವರ್ಣ ಲಂಕೆ ಎಂದು ಕರೆಲಾಗುತ್ತಿತ್ತು. ಶ್ರೀಮಂತ ದೇಶವಾಗಿತ್ತು. ಅವನು ತನಗೆ ಚಿನ್ನ ಹುಡುಕಲು ಸುಲಭವಾಗಬೇಕು ಅನ್ನೋ ಕಾರಣ, ಚಿನ್ನವನ್ನು ಸುಗಂಧಭರಿತವಾಗಿ ಮಾಡಬೇಕು ಅಂತಾ ಆಸೆ ಪಟ್ಟಿದ್ದನು.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss