ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಗಣಪತಿಗೆ ಬಲು ಇಷ್ಟವಾಗಿರುವ ಪಂಚಕಜ್ಜಾಯ ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಗಜಮುಖನ ನೈವೇದ್ಯಕ್ಕಾಗಿ ಹಬೆ ಬರಿಸಿದ ಮೋದಕ ರೆಸಿಪಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಕಪ್ಪು ಕಡಲೆ, ಒಂದು ಸ್ಪೂನ್ ಎಳ್ಳು, ಮುಕ್ಕಾಲು ಕಪ್ ಬೆಲ್ಲ, ಒಂದು ಕಪ್ ಕೊಬ್ಬರಿ ತುರಿ, 4 ಏಲಕ್ಕಿ, ಎರಡು ಸ್ಪೂನ್ ತುಪ್ಪ.
ಮಾಡುವ ವಿಧಾನ: ಕಪ್ಪು ಕಡಲೆಯನ್ನು ಚೆನ್ನಾಗಿ ತೊಳೆದು, ಒಂದು ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಕಡ್ಲೆ ಹಾಕಿ, ಡ್ರೈ ರೋಸ್ಟ್ ಮಾಡಿ. ಮಧ್ಯಮ ಉರಿಯಲ್ಲಿ ಕಡ್ಲೆಯನ್ನ 5 ನಿಮಿಷಗಳ ಕಾಲ ಹುರಿಯಬೇಕು. ಇದಾದ ಬಳಿಕ, ಮಿಕ್ಸಿ ಜಾರ್ಗೆ ಹುರಿದ ಕಡಲೆ, ನಾಲ್ಕು ಏಲಕ್ಕಿ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ.
ಈ ಬಾರಿ ಗಣೇಶ ಚತುರ್ಥಿಗೆ ಮೋದಕವನ್ನು ಹೀಗೆ ತಯಾರಿಸಿ..
ಈಗ ಒಂದು ಬೌಲ್ಗೆ ಒಂದು ಕಪ್ ಕೊಬ್ಬರಿ ತುರಿ ಮತ್ತು ಮುಕ್ಕಾಲು ಕಪ್ ಬೆಲ್ಲ ಹಾಕಿ, ಇದಕ್ಕೆ ಪುಡಿ ಮಾಡಿದ ಕಡಲೆ ಮತ್ತು ಒಂದು ಸ್ಪೂನ್ ಹುರಿದ ಎಳ್ಳು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಕಡಲೆ ಪಂಚಕಜ್ಜಾಯ ರೆಡಿ, ನೀವು ಈ ಪಂಚಕಜ್ಜಾಯವನ್ನು ಎರಡರಿಂದ ಮೂರು ದಿನ ಇಟ್ಟು ತಿನ್ನಬೇಕು ಎಂದಲ್ಲಿ, ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ ಮತ್ತು ಬೆಲ್ಲ ಹಾಕಿ, ಪಾಕ ಬರಿಸಿ, ಅದಕ್ಕೆ ಕೊಬ್ಬರಿ, ಎಳ್ಳು, ಕಡ್ಲೆ ಪುಡಿ ಸೇರಿಸಿ ಮಿಕ್ಸ್ ಮಾಡಿಯೂ, ಪಂಚಕಜ್ಜಾಯ ತಯಾರಿಸಬಹುದು.