ಆಂಗ್ಲರಿಗೆ ಹೊಸ ವರ್ಷ ಅಂದ್ರೆ ಜನವರಿ ಒಂದು. ಇಲ್ಲಿ ನೆಪ ಮಾತ್ರಕ್ಕೆ ಎಲ್ಲರೂ ಆ ಹೊಸ ವರ್ಷವನ್ನ ಮಾಡರ್ನ್ ಆಗಿ ಸೆಲೆಬ್ರೇಟ್ ಮಾಡ್ತಾರೆ. ಆದ್ರೆ ಹಿಂದೂಗಳಿಗೆ ನಿಜವಾದ ಹೊಸ ವರ್ಷ ಅಂದ್ರೆ, ಯುಗಾದಿ. ಯುಗಾದಿ ಹಬ್ಬ ಶುರುವಾದಾಗಲೇ, ಹಿಂದೂಗಳಿಗೆ ಹೊಸ ವರ್ಷ ಶುರುವಾಗುವುದು. ಹಾಗಾಗಿಯೇ ಏಪ್ರಿಲ್ನಿಂದ ಮಾರ್ಚ್ವರೆಗೆ ಹಿಂದೂಗಳ ಪಂಚಾಂಗ ಕಾಲವಿರುತ್ತದೆ. ಇಂದು ನಾವು ಯುಗಾದಿ ಹಬ್ಬವನ್ನು ಯಾವಾಗಿನಿಂದ ಆಚರಿಸಲು ಶುರು ಮಾಡಿದರು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಋತುವಿನಲ್ಲಿ ವಸಂತ ಋತುವನ್ನ ಶ್ರೇಷ್ಠವೆಂದು ಹೇಳಲಾಗಿದೆ. ಯಾಕಂದ್ರೆ ಈ ಋತು ಲೋಕದ ಬೆಳವಣಿಗೆಗೆ ಕಾರಣವಾಗಿರುತ್ತದೆ. ಈ ಋತುವಿನಲ್ಲಿ, ಚೈತ್ರ ಮಾಸದಲ್ಲಿ ಬರುವ ಹಬ್ಬವಾದ ಯುವಾಗಿ, ಹಿಂದೂಗಳಿಗೆ ವರ್ಷದ ಮೊದಲ ಹಬ್ಬವಾಗಿರುತ್ತದೆ. ಅಭ್ಯಂಗ್ಯ ಸ್ನಾನ, ಪಂಚಾಂಗ ಶ್ರವಣ, ಮತ್ತು ಬೇವು ಬೆಲ್ಲದ ಸೇವನೆಯೇ ಈ ಹಬ್ಬದ ಪ್ರಮುಖ ಆಚರಣೆಯಾಗಿದೆ. ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನ ಯುಗಾದಿ ಎಂದು ಆಚರಿಸಿದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ವಾ ಎಂದು ಆಚರಿಸುತ್ತಾರೆ.
ಯುಗ ಮತ್ತು ಆದಿ ಸೇರಿ ಆದ ಪದವೇ ಯುಗಾದಿ. ಯುಗ ಎಂದರೆ ಜೋಡಿ ಎಂದರ್ಥ. ಅಲ್ಲದೇ ಯುಗ ಎಂದರೆ ವರ್ಷ, ಆದಿ ಎಂದರೆ ಆರಂಭ. ಹಾಗಾಗಿ ವರ್ಷದ ಆರಂಭವೇ ಯುಗಾದಿ. ಪೌರಾಣಿಕ ಕಥೆಗಳ ಪ್ರಕಾರ, ಈ ದಿನವೇ ಬ್ರಹ್ಮ ಇಡೀ ಲೋಕವನ್ನ ಸೃಷ್ಟಿಸಿದನಂತೆ. ಅಲ್ಲೇದ ಶ್ರೀರಾಮನ ಪಟ್ಟಾಭಿಷೇಕವಾದದ್ದು ಕೂಡ ಯುಗಾದಿಯಂದೇ ಎನ್ನಲಾಗಿದೆ.
ಇನ್ನು ಯುಗಾದಿ ಹಬ್ಬಕ್ಕಿರುವ ಐತಿಹಾಸಿಕ ಹಿನ್ನೆಲೆ ಬಗ್ಗೆ ನೋಡುವುದಾದರೆ, ಕರ್ನಾಟಕದಲ್ಲಿ ಆಳ್ವಿಕೆ ಮಾಡುತ್ತಿದ್ದ ಶಾಲಿವಾಹನರು ಈ ದಿನದಂದೇ, ಪಟ್ಟಕ್ಕೇರಿದ್ದರು ಎನ್ನಲಾಗಿದೆ. ಅವರು ಪಟ್ಟಕ್ಕೇರಿದ ದಿನದಿಂದಲೇ ಶಾಲಿವಾಹನ ಶಕೆ ಆರಂಭವಾಗಿದ್ದು. ಶಕರು ಕರ್ನಾಟಕದಲ್ಲಿ ಆಳ್ವಿಕೆ ನಡೆಸುತ್ತಿದ್ದ, ಗೌತಮಿ ಪುತ್ರ ಶಾತಕರ್ಣಿಯ ವಿರುದ್ಧ ಯುದ್ಧ ಮಾಡಲು ಬಂದಾಗ, ಅವರನ್ನು ಶಾತಕರ್ಣಿ ಸೋಲಿಸಿ ಕಳುಹಿಸಿದ. ಶಕರಿಂದ ಕರ್ನಾಟಕ ಬಿಡುಗಡೆಯಾದ ಕಾರಣಕ್ಕೆ ಯುಗಾದಿ ಹಬ್ಬವನ್ನ ಆಚರಿಸಲು ಶುರು ಮಾಡಿದರು, ಎಂದು ಹೇಳಲಾಗುತ್ತದೆ.
ಭಾರತದಲ್ಲಿ ಎರಡು ಬಾರಿ ಯುಗಾದಿಯನ್ನ ಆಚರಿಸಲಾಗತ್ತೆ. ಒಂದು ಚಾಂದ್ರಮಾನ ಯುಗಾದಿ ಇನ್ನೊಂದು ಸೌರಮಾನ ಯುಗಾದಿ. ಬೇವು ಬೆಲ್ಲ ಸವಿದು ಆಚರಿಸುವ ಯುಗಾದಿ ಚಾಂದ್ರಮಾನ ಯುಗಾದಿ. ಏಪ್ರಿಲ್ 14ರಂದು ಆಚರಿಸಲಾಗುವ ಯುಗಾದಿ ಸೌರಮಾನ ಯುಗಾದಿ. ಅದನ್ನು ವಿಶು ಎಂದು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡದವರು ಈ ಹಬ್ಬವನ್ನ ಆಚರಿಸುತ್ತಾರೆ. ಮತ್ತು ಭಾರತದ ಹಲವು ಕಡೆ ವಿಶು ಆಚರಿಸಲಾಗತ್ತೆ.
Ugadi special : ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನ ಯಾಕೆ ತಿನ್ನಬೇಕು..?
Ugadi Special: ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಮಾಡಹುದು ಪಾಲಕ್ ರೈಸ್..