Thursday, June 19, 2025

Latest Posts

‘ನಾ ಬರಲ್ಲಾ ಅಂದ್ರೆ ಬರಲ್ಲಾ, ಅರಮನೆ ಬಿಟ್ಟು ಕಾಡಿಗೆ ಬರಲ್ಲ’

- Advertisement -

ಮೈಸೂರು ದಸರಾ ಹಬ್ಬದಲ್ಲಿ ಜಂಬೂಸವಾರಿಯದ್ದೇ ಸದ್ದುಗದ್ದಲವಿತ್ತು. ಅಷ್ಟು ಚಂದವಾಗಿ ಜಂಬೂಸವಾರಿ ನಡೆಸಿಕೊಟ್ಟಿತ್ತು ಅಭಿಮನ್ಯು ಮತ್ತು ಟೀಂ. ಆದ್ರೆ ಕೆಲ ತಿಂಗಳಿನಿಂದ ಮೈಸೂರು ಅರಮನೆಗೆ ತರಬೇತಿ ಪಡೆದು, ಜಂಬೂಸವಾರಿ ನಡೆಸಿದ್ದ ಅಭಿಮನ್ಯು ಮತ್ತು ಟೀಂನ್ನು ಇಂದು ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು.

ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬೆಳಿಗ್ಗೆ 10 ಗಂಟೆಗೆ ಗಜಪಡೆಯನ್ನು ಬೀಳ್ಕೊಡಲಾಯಿತು. ಆದ್ರೆ ಇವರೆಲ್ಲ ಹೋಗುವ ಮುನ್ನವೇ ಲಾರಿಯಲ್ಲಿ, ಮೊನ್ನೆಯಷ್ಟೇ ಅರಮನೆಯಲ್ಲಿ ಹೆರಿಗೆಯಾಗಿದ್ದ ಲಕ್ಷ್ಮೀ ಮತ್ತು ಮಗ ಶ್ರೀದತ್ತಾತ್ರೇಯ ಹೊರಟರು. ಆದ್ರೆ ನಾನು ಬರಲ್ಲ ಅಂದ್ರೆ ಬರಲ್ಲ, ಇಲ್ಲೇ ಇರ್ತೀನಿ ಅಂತಾ ಶ್ರೀರಾಮ ಎನ್ನುವ ಆನೆ ಹಠ ಹಿಡಿಯಿತು.

ಅರಮನೆಯಲ್ಲಿ ರಾಜಾತಿಥ್ಯ ಸ್ವೀಕರಿಸಿದ ಬಳಿಕ, ಆನೆಗಳನ್ನ ಲಾರಿ ಹತ್ತಿಸಲು ಕರೆತರಲಾಯಿತು. ಆಗ ಶ್ರೀರಾಮ ತಾನು ಕಾಡಿಗೆ ಬರೋದಿಲ್ಲಾ ಅಂತಾ ಹಠ ಮಾಡಿದ. ಆಗ ದಸರಾ ಗಜಪಡೆಗಳ ಕ್ಯಾಪ್ಟನ್ ಅಭಿಮನ್ಯು ಬಂದು ಶ್ರೀರಾಮನನ್ನು ಹಿಂದೆಯಿಂದ ತಳ್ಳಿದರೂ ಕೂಡ, ಶ್ರೀರಾಮ ಲಾರಿ ಹತ್ತಲು ನಿರಾಕರಿಸಿದ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡಿ, ಶ್ರೀರಾಮನನ್ನು ಲಾರಿಗೆ ಹತ್ತಿಸಿದರು.

- Advertisement -

Latest Posts

Don't Miss