Saturday, July 25, 2026

karnataka tv

‘ಮಂಡ್ಯದಲ್ಲಿ ಕೈ ನಾಯಕರಿಗೆ ಜೆಡಿಎಸ್ ಟಾರ್ಚರ್’- ಚಲುವರಾಯಸ್ವಾಮಿ

ಮಂಡ್ಯ: ಜಿಲ್ಲಾ ಜೆಡಿಎಸ್ ನವರು ಕಾಂಗ್ರೆಸ್ಸಿಗರಿಗೆ ನಿರಂತವಾಗಿ ಕಿರುಕುಳ ನೀಡ್ತಿದ್ದಾರೆ. ಹೀಗೆ ಆದ್ರೆ ನಾವು ಬೀದಿಗಿಳಿದು ಹೋರಾಟ ಮಾಡ್ತೀವಿ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ  ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಮಂಡ್ಯದಲ್ಲಿ ಜೆಡಿಎಸ್ ನವರು ಕಾಂಗ್ರೆಸ್ಸಿಗರನ್ನ ಟಾರ್ಗೆಟ್ ಮಾಡಿ ನಿರಂತರವಾಗಿ ಕಿರುಕುಳ ನೀಡ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಮೇಲೆ ಮಂಡ್ಯ ಕಾಂಗ್ರೆಸ್ಸಿಗರು ಸಭೆ...

‘ಜನ ಸುಮಲತಾರನ್ನ ಗೆಲ್ಲಿಸಿ ಕುಮಾರಸ್ವಾಮಿಗೆ ಪಾಠ ಕಲಿಸಿದ್ದಾರೆ’- ಚಲುರಾಯಸ್ವಾಮಿ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನರು ಸೂಕ್ತ ತೀರ್ಮಾನ ಕೈಗೊಳ್ತಾರೆ ಅಂತ ನಾನು ಹೇಳಿದಂತೆ ಆಗಿದೆ. ಸುಮಲತಾರನ್ನು ಜನ ಗೆಲ್ಲಿಸೋ ಮೂಲಕ ಕುಮಾರಸ್ವಾಮಿಗೆ ಪಾಠ ಕಲಿಸಿದ್ದಾರೆ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ನಾನು ಹೇಳಿದ ಹಾಗೆ ಜನ ಸೂಕ್ತ ತೀರ್ಮಾನ ಕೈಗೊಂಡು ಸುಮಲತಾರನ್ನು ಗೆಲ್ಲಿಸೋ ಮೂಲಕ...

ಆನೆ ಕಂಡು 1 ಕಿ.ಮೀ ರಿವರ್ಸ್ ಗೇರ್ ನಲ್ಲಿ ಚಲಿಸಿದ ಸರ್ಕಾರಿ ಬಸ್…!

ಚಿಕ್ಕಮಗಳೂರು: ಆನೆ ಪ್ರತ್ಯಕ್ಷವಾಗಿದ್ದನ್ನು ಕಂಡು ಸರ್ಕಾರಿ ಬಸ್ ಸುಮಾರು 1 ಕಿಲೋ ಮೀಟರ್ ವರೆಗೂ ಹಿಮ್ಮುವಾಗಿ ಚಲಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಒಂಟಿ ಸಲಗ ಪದೇ ಪದೇ ಇಲ್ಲಿನ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಉಪಟಳ ನೀಡುತ್ತಿದೆ. ಕಳೆದೆರಡು ದಿನಗಳ ಹಿಂದೆ ಕಿರಿದಾದ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದನ್ನು ಕಂಡು ಹೌಹಾರಿದ...

11 ಭಾರತೀಯರಿಗೆ ಸ್ವಿಸ್ ಬ್ಯಾಂಕ್ ನೋಟೀಸ್

ನವದೆಹಲಿ: ಸ್ವಿಸ್ ಬ್ಯಾಂಕ್ ನಲ್ಲಿರೋ ಕಾಳ ಧನವನ್ನ ಭಾರತಕ್ಕೆ ತಂದೇ ತಿರುತ್ತೇನೆ ಅಂತ ಹೇಳಿದ್ದ ನರೇಂದ್ರ ಮೋದಿ ಹೇಳಿಕೆ ಇದೀಗ ಹೇಳಿಕೆಯಾಗಿಯೇ ಉಳಿದಿಲ್ಲ. ಇದನ್ನು ಕಾರ್ಯರೂಪಕ್ಕೆ ತರೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಯತ್ನ ಫಲ ನೀಡುವ ಲಕ್ಷಣ ಕಾಣ್ತಿದೆ. ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರೋ ಭಾರತೀಯರ ವಿವರಗಳನ್ನು ಭಾರತಕ್ಕೆ ಕೊಡಲು ಸಾಧ್ಯವೇ ಇಲ್ಲ ಅಂದಿದ್ದ...

ಹೇಗಿರಲಿದೆ ಗೊತ್ತಾ ಸುಮಲತಾ ವಿಜಯೋತ್ಸವ..?

ಮಂಡ್ಯ: ಮೇ 29ರಂದು ಸಂಸದೆ ಸುಮಲತಾ ಕೃತಜ್ಞತಾ ಸಮಾವೇಶ ನಡೆಸಲಿದ್ದು ಅಂದು ನಾನಾ ಕಾರ್ಯಕ್ರಮಗಳಲ್ಲಿ ಸಂಸದೆ ಸುಮಲತಾ ಭಾಗಿಯಾಗಲಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಸಂಸದೆ ಸುಮಲತಾ ಆಪ್ತ ಸಚ್ಚಿದಾನಂದ, ಮೇ 29ರಂದು ಅಂಬರೀಶ್ ಹುಟ್ಚುಹಬ್ಬವಾದ್ದರಿಂದ ಅಂದೇ ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದರು. ಅಲ್ಲದೆ ವಿಜಯೋತ್ಸವ ಸಮಾವೇಶದಲ್ಲಿ ನಟರಾದ ದರ್ಶನ್, ಯಶ್ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ,...

ರಾಜ್ಯದಲ್ಲಿ ಮತ್ತೆ ಎಲೆಕ್ಷನ್…?- ಬಿಎಸ್ವೈಗೆ ಬಿಗ್ ಶಾಕ್ ಕೊಟ್ಟ ಅಮಿತ್ ಶಾ.. !

ರಾಜ್ಯ ಬಿಜೆಪಿ ಕಳೆದೊಂದು ವರ್ಷದಿಂದ ಹಲವು ಬಾರಿ ಫ್ಲಾಪ್ ಆಪರೇಷನ್ ಗಳನ್ನ ಮಾಡಿದೆ.ಆದ್ರೆ ಇದೀಗ ಬಿಜೆಪಿ ಅಂತಿಮ ಸುತ್ತಿನ ಆಪರೇಷನ್ ಕಮಲಕ್ಕೆ ಚಾಲನೆ ಕೊಟ್ಟಿದೆ. ಈ ಮಧ್ಯೆಯೇ ರಾಜ್ಯ ಬಿಜೆಪಿ ನಾಯಕರಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶಾಕ್ ಕೊಟ್ಟಿದ್ದಾರೆ. ಹೇಗಿದ್ರೂ ರಮೇಶ್ ಜಾರಕಿಹೊಳಿ ಟೀಂ ಅಲ್ಲದೇ ಡಾ. ಕೆ ಸುಧಾಕರ್, ರೋಷನ್ ಬೇಗ್ ಕಾಂಗ್ರೆಸ್...

ಸುಮಲತಾ ಮಾತು ಉಳಿಸಿಕೊಳ್ತಾರೋ, ಮಾತು ತಪ್ತಾರೋ…?

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಲತಾ ಅಂಬರೀಶ್ ಜೆಡಿಎಸ್ ಭದ್ರಕೋಟೆಯನ್ನ ಛಿದ್ರ ಛಿದ್ರ ಮಾಡಿದ್ದು ಈಗ ಇತಿಹಾಸ. ಸುಮಲತಾಗೆ ಬಿಜೆಪಿ ನೀವು ಯಾವಾಗ ಬೇಕಾದ್ರೂ ನಮ್ಮ ಪಕ್ಷಕ್ಕೆ ಬರಬಹುದು ಅಂತ ಆಹ್ವಾನಿಸಿದೆ. ಇದೇ ವಿಚಾರವಾಗಿ ಸುಮಲತಾ ಚುನಾವಣೆ ವೇಳೆ ಮಂಡ್ಯದ ಮುಸ್ಲಿಂ ಬಾಂಧವರಿಗೆ ನೀಡಿದ್ದ ಆ ಒಂದು ಮಾತು ಉಳಿಸಿಕೊಳ್ತಾರೋ ಇಲ್ಲವೋ ಅನ್ನೋ ಪ್ರಶ್ನೆ ಎದುರಾಗಿದೆ....

ಸಂಪುಟದಿಂದ ಯಾರಿಗೆ ಕೊಕ್ ಕೊಡ್ತಾರೆ ಸಿಎಂ…?

ಬೆಂಗಳೂರು: ಮೈತ್ರಿ ಸರ್ಕಾರ ಇವತ್ತು ಪತನವಾಗುತ್ತೆ, ನಾಳೆ ಪತನವಾಗುತ್ತೆ ಅಂತ ಬಿಜೆಪಿ ನಾಯಕರು ಬಾಂಬ್ ಹಾಕ್ತಿರೋದು ಇದೀಗ ದೋಸ್ತಿಗಳಿಗೆ ತಲೆನೋವಾಗಿದೆ. ಒಂದು ವೇಳೆ ಅವರು ಹೇಳಿದ ಹಾಗೆ ಆದರೆ ಏನ್ ಮಾಡೋದು ಅಂತ ಲೆಕ್ಕಾಚಾರ ಹಾಕಿರೋ ಮೈತ್ರಿ ಪಕ್ಷದ ನಾಯಕರು ಸಖತ್ ಪ್ಲಾನ್ ಮಾಡಿದ್ದಾರೆ. ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿಬಿಡ್ತಾರೆ ಅನ್ನೋ ಭಯದಿಂದ ಇದೀಗ...

ಸಿಎಂ ಮಕ್ಕಳಿಗೆ ಅದ್ಯಾವ ಶಾಪ- ಎಲೆಕ್ಷನ್ ನಲ್ಲಿ ಸೋತಿದ್ದ್ಯಾಕೆ…?

ಈ ಬಾರಿ ನಡೆದ ಚುನಾವಣೆಯಲ್ಲಿ ತಮ್ಮ ಮಕ್ಕಳನ್ನು ಅಖಾಡಕ್ಕಿಳಿಸೋ ಮೂಲಕ ತಮ್ಮ ಶಕ್ತಿ ಏನು ಅನ್ನೋದನ್ನ ಸಾಬೀತುಪಡಿಸಲು ಹೊರಟಿದ್ದ ನಾಲ್ಕು ರಾಜ್ಯಗಳ ಸಿಎಂಗಳಿಗೆ ತೀವ್ರ ಮುಖಭಂಗವಾಗಿದೆ. ಹೌದು, ನಾನು ಈಗಾಗಲೇ ಸಿಎಂ ಆಗಿದ್ದೀನಿ, ನನಗೆ ರಾಜ್ಯದ ಎಲ್ಲಾ ಮತದಾರರು ಸಪೋರ್ಟ್ ಮಾಡ್ತಾರೆ ಬಿಡಿ ಅಂತ ತಮ್ಮ ಮಕ್ಕಳನ್ನು ಚುನಾವಣಾ ಅಖಾಡಕ್ಕಿಳಿಸಿದ್ದ  ಸಿಎಂಗಳು ಮುಜುಗರಕ್ಕೀಡಾಗಿದ್ದಾರೆ. ಹೌದು ರಾಜ್ಯದಲ್ಲಿ ಸಿಎಂ...

ದೇವೇಗೌಡರ ಸೋಲಿಗೆ ಇದೇ ಕಾರಣ…!

ದೇವೇಗೌಡರು ಸೋಲಬಾರದಿತ್ತು..! ಹೌದು ಹೀಗೊಂದು ಮಾತು ವಿರೋಧಿಗಳ ಬಾಯಲ್ಲೂ ಕೇಳಿ ಬರ್ತಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಇಂಥಹದೊಂದು ಫಲಿತಾಂಶ ಹೊರಬರುತ್ತೆ ಅಂತ ಯಾರೂ ನಿರೀಕ್ಷೆ ಕೂಡ ಮಾಡಿರಲಿಲ್ಲ.. ಯಾಕಂದ್ರೆ ದೇಶ ಕಂಡ ಉತ್ತಮ ಪ್ರಧಾನಿಗಳಲ್ಲಿ ದೇವೇಗೌಡರು ಸಹ ಒಬ್ಬರು. ಆದ್ರೆ ದೇವೇಗೌಡರು ಮಾಡಿದ ಅದೊಂದು ತಪ್ಪು ತುಮಕೂರಿನ ಸೋಲಿಗೆ ಕಾರಣವಾಗಿದೆ. ಸೋಲಿಗೆ ಮೊದಲ ಕಾರಣ 2014ರಲ್ಲಿ ಮೋದಿ ಸುನಾಮಿ ಮುಂದೆ ತುಮಕೂರು ಕ್ಷೇತ್ರದಲ್ಲಿ...
- Advertisement -spot_img

Latest News

ಸಚಿವರ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ – ಮೋದಿಗೆ ಖರ್ಗೆ ಒತ್ತಾಯ!!

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ನಾಯಕರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...
- Advertisement -spot_img