Sunday, June 1, 2025

Latest Posts

ಮಂಥರೆ ಏಕೆ ರಾಮನನ್ನು ದ್ವೇಷಿಸುತ್ತಿದ್ದಳು..? ಆಕೆಯ ಹಿಂದಿನ ಜನ್ಮದ ರಹಸ್ಯವೇನು..?

- Advertisement -

Spiritual: ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಮಂಥರೆಯೂ ಒಬ್ಬಳು. ಈಕೆ ರಾಮಾಯಣದ ಖಳನಾಯಕಿ, ರಾಮನ ವಿರೋಧಿಯಾಗಿದ್ದರೂ ಕೂಡ, ಈಕೆಯಿಲ್ಲದೇ, ರಾಮಾಯಣ ಅಪೂರ್ಣ. ಹಾಗಾದ್ರೆ ಯಾರು ಈ ಮಂಥರೆ..? ಯಾಕೆ ಈಕೆ ರಾಮನನ್ನು ಅಷ್ಟು ದ್ವೇಷಿಸುತ್ತಿದ್ದಳು ಅಂತಾ ತಿಳಿಯೋಣ ಬನ್ನಿ..

ಪೂರ್ವ ಜನ್ಮದಲ್ಲಿ ಮಂಥರೆ ದುಂದುಭ ನಾಮಕ ಕನ್ಯೆಯಾಗಿದ್ದಳು. ಈಕೆ ಪ್ರಹ್ಲಾದನ ಮಗನನಾದ ವಿರೋಚನನ ಮಗಳಾಗಿದ್ದಳು. ತಂದೆ ಹಿರಣ್ಯ ಕಶ್ಯಪನನ್ನು ಶ್ರೀವಿಷ್ಠು ನರಸಿಂಹ ಅವತಾರ ತಾಳಿ, ವಧೆ ಮಾಡಿದ ಬಳಿಕ, ಪ್ರಹ್ಲಾದ ರಾಜನಾಗಿ, ರಾಜ್ಯದಲ್ಲಿ ವಿಷ್ಣುವಿನ ಆರಾಧನೆ ಮಾಡುತ್ತ ಬೆಳೆದ. ಅವನ ಮಗ ವಿರೋಚನನೂ ವಿಷ್ಣುವಿನ ಭಕ್ತನಾಗಿದ್ದ. ಅವನ ರಾಜ್ಯದ ರಾಕ್ಷಸರು, ವಿಷ್ಣುವಿನ ಭಕ್ತಿ ಮಾಡುತ್ತ ಸದ್ಗುಣವಂತರಾಗಿದ್ದರು.

ಹೀಗಿರುವಾಗ, ಲೋಕದಲ್ಲಿ ದುಷ್ಟತನ ನಾಶವಾಗಿ, ಎಲ್ಲರೂ ಉತ್ತಮವಾಗಿದ್ದರು. ವಿರೋಚನ ಸ್ವರ್ಗ ಲೋಕ, ಭೂಲೋಕ, ಪಾತಾಳ ಲೋಕವನ್ನು ಗೆದ್ದು, ಇಂದ್ರದೇವನನ್ನು ಓಡಿಸಿದ. ವಿಷ್ಣುವಿನ ಬಳಿ ಬಂದು ಇಂದ್ರ, ವಿರೋಚನನ ಬಗ್ಗೆ ದೂರು ನೀಡಿದಾಗ, ಅವನು ಯಾರಿಗೂ ವಂಚಿಸದೇ, ತನ್ನ ಶಕ್ತಿಯಿಂದ ಯುದ್ಧ ಗೆದ್ದಿದ್ದಾನೆ. ಅಲ್ಲದೇ ಅವನು ದಾನ ಮಾಡುವುದರಲ್ಲಿ ಮುಂದೆ. ನೀನು ಹೋಗಿ ಸ್ವರ್ಗ ಲೋಕವನ್ನು ದಾನವಾಗಿ ಕೇಳಿದರೆ, ಅವನು ಧಾರಾಳವಾಗಿ ನಿನಗೆ ಸ್ವರ್ಗಲೋಕ ದಾನ ಮಾಡುತ್ತಾನೆ ಎಂದನು.

ಆಗ ಇಂದ್ರ ಕಪಟಿ ವೇಷ ಧರಿಸಿ ದುರಾಸೆಯಿಂದ ಸ್ವರ್ಗ ಲೋಕವನ್ನು ಕೇಳುವುದು ಬಿಟ್ಟು, ವಿರೋಚನನ ತಲೆಯನ್ನು ದಾನವಾಗಿ ಕೇಳುತ್ತಾನೆ. ವಿರೋಚನನಿಗೆ ಈ ಕಪಟಿ ಇಂದ್ರನೆಂದು ಗೊತ್ತಾಗುತ್ತದೆ. ನಾನು ಈಗ ನನ್ನ ತಲೆಯನ್ನು ದಾನವಾಗಿ ನೀಡುತ್ತೇನೆ. ಆದರೆ ಮುಂದೊಂದು ದಿನ ನನ್ನ ಪುತ್ರ, ಪುತ್ರಿ ನಿನ್ನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆಂದು ಹೇಳಿ, ತಲೆ ಕಡಿದು ಕೊಡುತ್ತಾನೆ.

ವಿಷಯ ತಿಳಿದ ಬಳಿಕ, ದುಂದುಭ ಮತ್ತು ಬಲಿ ಇಬ್ಬರೂ ಸೇರಿ, ಇಂದ್ರದೇವನ ಮೇಲೆ ಆಕ್ರಮಣ ಮಾಡಿ, ತಂದೆಯ ಶಿರವನ್ನು ತೆಗೆದುಕೊಳ್ಳುತ್ತಾರೆ. ಬಲಿ ಈ ಯುದ್ಧ ನಿಲ್ಲಿಸಲು ಮುಂದಾದರೂ ಕೂಡ, ದುಂದುಭ ಮಾತ್ರ ಯುದ್ಧ ನಿಲ್ಲಿಸದೇ, ದೇವತೆಗಳ ಮೇಲೆ ಸರ್ಪ ಮಳೆಗೈಯ್ಯುತ್ತಾಳೆ. ಆಗ ದೇವತೆಗಳ ಪ್ರಾರ್ಥನೆಗೆ ವಿಷ್ಣು ಪ್ರತ್ಯಕ್ಷನಾಗಿ, ದುಂದುಭಿಗೆ ಯುದ್ಧ ನಿಲ್ಲಿಸಲು ಹೇಳುತ್ತಾನೆ. ಆದರೆ ದುಂದುಭ ಹಠ ಬಿಡದೇ, ಯುದ್ಧ ಮುಂದುವರಿಸುತ್ತಾಳೆ.

ಆಗ ಸರ್ಪಗಳ ವಿರುದ್ಧ ವಿಷ್ಣು ಗರುಡಗಳನ್ನು ಬಿಡುತ್ತಾನೆ. ಗರುಡಗಳು ಸರ್ಪವನ್ನು ತಿಂದು, ದುಂದುಭನ ಮೇಲೆ ಪ್ರಹಾರ ನಡೆಸುತ್ತದೆ. ದುಂದುಭಳ ಮುಖ ವಿಕಾರವಾಗುತ್ತದೆ. ಗಾಯದಿಂದ ಬೆನ್ನು ಬಾಗುತ್ತದೆ. ಸಾಯುವ ಸ್ಥಿತಿಗೆ ತಲುಪುತ್ತಾಳೆ. ಆಗಲೂ ಆಕೆ ವಿಷ್ಣುವನ್ನು ಬೈದುಕೊಂಡು, ತನ್ನ ವಿಕಾರ ಮುಖವನ್ನೇ ನೆನಪಿಸಿಕೊಂಡು ಸಾಯುತ್ತಾಳೆ. ಹಾಗಾಗಿ ಮುಂದಿನ ಜನ್ಮದಲ್ಲಿ ಕೈಕಯಿಯ ಸೇವಕಿ, ಮಂಥರೆಯಾಗಿ ಹುಟ್ಟಿ, ವಿಷ್ಣುವಿನ ಅವತಾರವಾದ ರಾಮನನ್ನು ದ್ವೇಷಿಸುವುದನ್ನು ಮುಂದುವರಿಸುತ್ತಾಳೆ.

ವೃದ್ಧೆ ಜಗನ್ನಾಥನಿಗೆ ಮೀನಿನ ಖಾದ್ಯ ನೈವೇದ್ಯ ಮಾಡಿದಾಗ ನಡೆಯಿತೊಂದು ಪವಾಡ..

ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?

ಈ ಸಮಯದಲ್ಲಿ ಎಂದಿಗೂ ಕಸ ಗುಡಿಸಬಾರದು.. ಇದರಿಂದ ದರಿದ್ರ ಸಂಭವಿಸುವ ಸಾಧ್ಯತೆ ಹೆಚ್ಚು..

- Advertisement -

Latest Posts

Don't Miss