Saturday, June 21, 2025

Latest Posts

ಕರ್ಚಿಕಾಯಿಯನ್ನು ಈ ರೀತಿ ಮಾಡಿದ್ದಲ್ಲಿ ಹೆಚ್ಚು ಟೇಸ್ಟಿಯಾಗಿರತ್ತೆ ನೋಡಿ..

- Advertisement -

ಇನ್ನೆರಡು ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಗಣೇಶನಿಗೆ ನೈವೇದ್ಯ ಮಾಡಲು ಹಲವು ಬಗೆಗಳ ತಿಂಡಿ ತಯಾರಿಸಬೇಕಾಗುತ್ತದೆ. ಹಾಗಾಗಿ ನಾವಿಂದು ಕರ್ಚಿಕಾಯಿ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.

ಈ ಬಾರಿ ಗಣೇಶ ಚತುರ್ಥಿಗೆ ಮೋದಕವನ್ನು ಹೀಗೆ ತಯಾರಿಸಿ..

ಬೇಕಾಗುವ ಸಾಮಗ್ರಿ: 2 ಕಪ್ ಸಣ್ಣ ರವೆ, ಅರ್ಧ ಕಪ್ ಮೈದಾ, 2 ಸ್ಪೂನ್ ತುಪ್ಪ ಅಥವಾ ಬೆಣ್ಣೆ,ಒಂದು ಕಪ್ ಒಣ ಕೊಬ್ಬರಿ ತುರಿ, ಒಂದು ಸ್ಪೂನ್ ಹುರಿದಿರುವ ಗಸಗಸೆ, ಮತ್ತು ಎಳ್ಳು, ಕೊಂಚ ಏಲಕ್ಕಿ ಪುಡಿ, ಅಗತ್ಯವಿದ್ದಲ್ಲಿ ಅಥವಾ ನಿಮಗೆ ಇಷ್ಟವಾಗಿದ್ದಲ್ಲಿ, ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಯನ್ನು ಇದರಲ್ಲಿ ಸೇರಿಸಿಕೊಳ್ಳಬಹುದು. ಅರ್ಧ ಕಪ್ ಸಕ್ಕರೆ ಪುಡಿ, ಸಿಹಿ ಹೆಚ್ಚು ಬೇಕಿದ್ದಲ್ಲಿ, ಕಂಡು ಮತ್ತೂ ಸಕ್ಕರೆ ಪುಡಿ ಸೇರಿಸಿಕೊಳ್ಳಿ. ಚಿಟಿಕೆ ಉಪ್ಪು. ಕರಿಯಲು ಎಣ್ಣೆ.

ಗಣಪನಿಗೆ ಬಲು ಇಷ್ಟವಾಗುವ ಪಂಚಕಜ್ಜಾಯ ರೆಸಿಪಿ..

ಮೊದಲು ಕರ್ಚಿಕಾಯಿಗೆ ಬೇಕಾಗಿರುವ ಹಿಟ್ಟನ್ನು ಕಲಿಸಿಕೊಳ್ಳಿ. ರವೆ, ಮೈದಾ, ಉಪ್ಪು, ತುಪ್ಪ- ಎಣ್ಣೆ- ಬೆಣ್ಣೆ ಯಾವುದಾದರೂ ಒಂದು ಮತ್ತು ನೀರು ಸೇರಿಸಿ, ಹಿಟ್ಟು ಕಲಿಸಿಕೊಳ್ಳಿ. ಹಿಟ್ಟನ್ನು ಚೆನ್ನಾಗಿ ನಾದಿ, 15 ನಿಮಿಷ ಪಕ್ಕಕ್ಕಿರಿಸಿ. ಈಗ ಹೂರಣ ರೆಡಿ ಮಾಡಿಕೊಳ್ಳಿ. ಒಣ ಕೊಬ್ಬರಿ ತುರಿಗೆ ಹುರಿದಿರುವ ಗಸಗಸೆ, ಎಳ್ಳು, ಏಲಕ್ಕಿ ಪುಡಿ, ಗೋಡಂಬಿ, ಬಾದಾಮಿ, ದ್ರಾಕ್ಷಿ ಎಲ್ಲವೂ ಮಿಕ್ಸ್ ಮಾಡಿ. ಇದಕ್ಕೆ ಸಕ್ಕರೆ ಪುಡಿ ಸೇರಿಸಿದ್ರೆ, ಹೂರಣ ರೆಡಿ.

ಗಜಮುಖನ ನೈವೇದ್ಯಕ್ಕಾಗಿ ಹಬೆ ಬರಿಸಿದ ಮೋದಕ ರೆಸಿಪಿ..

ಈಗ ಕಲಿಸಿಟ್ಟುಕೊಂಡ ಹಿಟ್ಟಿನ ಉಂಡೆ ತಯಾರಿಸಿಕೊಂಡು ಪೂರಿ ಆಕಾರದಲ್ಲಿ ಲಟ್ಟಿಸಿ, ಇದರಲ್ಲಿ ಹೂರಣ ತುಂಬಿಸಿ, ಕರ್ಚಿಕಾಯಿ ಶೇಪ್‌ ಮಾಡಿ, ಕಾದ ಎಣ್ಣೆಯಲ್ಲಿ ಕರಿಯಿರಿ.

- Advertisement -

Latest Posts

Don't Miss