Thursday, June 19, 2025

Latest Posts

ವಿದ್ಯಾರ್ಥಿಗಳು ಈ ಕಥೆಯನ್ನ ಖಂಡಿತ ಓದಿ..

- Advertisement -

ವಿದ್ಯಾರ್ಥಿ ಜೀವನ ಉತ್ತಮವಾಗಿದ್ರೆ, ಅವರ ಭವಿಷ್ಟ ಚೆನ್ನಾಗಿರತ್ತೆ ಅಂತಾ ಹಿರಿಯರು ಹೇಳ್ತಾರೆ. ಇದು ನಿಜ ಕೂಡ. ಹಾಗಾಗಿ ಚಿಕ್ಕವರಿರುವಾಗಲೇ, ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಳ್ಳಿ ಅಂತಾ ಬುದ್ಧಿ ಮಾತು ಹೇಳೋದು. ಇಂದು ನಾವು ವಿದ್ಯಾರ್ಥಿಗಳು ಕೇಳಬೇಕಾದ ಕಥೆಯೊಂದನ್ನ ಹೇಳಲಿದ್ದೇವೆ..

ಒಂದು ಗುರುಕುಲದಲ್ಲಿ ಓರ್ವ ವಿದ್ಯಾರ್ಥಿ ಓದಲು ಬಂದಿದ್ದ. ಅವನು ಓದಿನಲ್ಲಿ ಅಷ್ಟು ಜಾಣನಿರಲಿಲ್ಲ. ಆದರೆ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಹೊಂದಿಕೊಂಡಿದ್ದ. ಪರೀಕ್ಷೆ ಮುಗಿದು, ಅದರ ಫಲಿತಾಂಶ ಬಂತು. ಗರುಕುಲದಲ್ಲಿದ್ದ ಎಲ್ಲರೂ ಪಾಸಾಗಿದ್ದರು. ಆದ್ರೆ ಬಾಲಕ ಮಾತ್ರ ಪಾಸಾಗಲಿಲ್ಲ. ಇನ್ನು ಎರಡು ತಿಂಗಳೊಳಗೆ ಅವನು ಉತ್ತೀರ್ಣನಾಗಬೇಕಿತ್ತು. ಅದಕ್ಕಾಗಿ ಅವನ ಗುರುಗಳು ಕಷ್ಟಪಟ್ಟು ಒಂದು ತಿಂಗಳ ಕಾಲ, ಅವನೊಬ್ಬನಿಗೆ ಪಾಠ ಹೇಳಿಕೊಟ್ಟರು. ಆದರೂ ಅವನು ಸುಧಾರಿಸಲಿಲ್ಲ.

ಇವನು ಕಲ್ಲು ಬಂಡೆ ಇದ್ದ ಹಾಗೆ, ಇವನಿಗೆಷ್ಟು ಕಲಿಸಿದರೂ ಪ್ರಯೋಜನವಿಲ್ಲ ಎಂದು ನಿರ್ಧರಿಸಿ ಗುರುಗಳು ಆ ಶಿಷ್ಯನನ್ನು ಕರೆದು ಹೀಗೆಂದರು. ನೀನು ವಿದ್ಯಾಭ್ಯಾಸ ಕಲಿಯಲು ಅರ್ಹನಲ್ಲ. ನೀನು ಮನೆಗೆ ಹೋಗಿ, ಅಲ್ಲಿ ಅಪ್ಪ ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡು ಎಂದು ಹೇಳಿದರು. ಅದಕ್ಕೆ ಅವನು ಬೇಸರದಿಂದಲೇ ಗುರುಕುಲ ಬಿಟ್ಟು ಹೊರಟ.

ಇನ್ನು ಮರುಪರೀಕ್ಷೆಗೆ ಒಂದು ತಿಂಗಳು ಬಾಕಿ ಇದೆ. ಆದರೆ ಗುರುಗಳು ಬರೀ ಒಂದೇ ತಿಂಗಳು ತರಬೇತಿ ಕೊಟ್ಟು, ನಿನ್ನಿಂದ ವಿದ್ಯೆ ಕಲಿಯಲು ಸಾಧ್ಯವಿಲ್ಲ ಎಂದು ಕಳುಹಿಸಿದರು ಎಂಬ ಕೊರಗಿನಲ್ಲಿ ಊರಿಗೆ ಹೋಗುತ್ತಿದ್ದ. ಒಂದು ಊರಿಗೆ ಬಂದಾಗ, ಅವನಿಗೆ ದಾಹವಾಗಲು ಶುರುವಾಯ್ತು. ಅವನು ಬಾವಿ ಹುಡುಕಿಕೊಂಡು ಹೋದ. ಅಲ್ಲೇ ಹತ್ತಿರದಲ್ಲೇ ಒಂದು ಬಾವಿಯಿಂದ ಓರ್ವ ಹೆಂಗಸು ನೀರು ಸೇದುತ್ತಿದ್ದಳು.

ಆ ಬಾವಿಯ ಮೇಲೆ ಅಳಿಸಲಾಗದ ಗುರುತೊಂದು ಇತ್ತು. ಅದನ್ನು ಕಂಡ ಬಾಲಕ, ಆ ಮಹಿಳೆಗೆ ಕೇಳಿದ. ಈ ಗುರುತನ್ನು ಹೇಗೆ ಮಾಡಿದಿರಿ..? ಏಕೆ ಮಾಡಿದಿರಿ ಎಂದು ಕೇಳಿದ. ಅದಕ್ಕೆ ಆ ಮಹಿಳೆ, ನಾನು ಈ ಗುರುತು ಮಾಡಿದ್ದಲ್ಲ. ಅದು ತನ್ನಿಂದ ತಾನೇ ಆಗಿದ್ದು. ಬಾವಿಯಿಂದ ಪ್ರತಿದಿನ ನೀರು ಸೇದುತ್ತೇವೆ. ಹಾಗಾಗಿ ಈ ಹಗ್ಗದಿಂದ ಬಾವಿಯ ಮೇಲೆ ಗುರುತು ಬಿದ್ದಿದೆ ಎಂದು ಹೇಳುತ್ತಾಳೆ.

ಇದನ್ನು ಕೇಳಿದ ಬಾಲಕನಿಗೆ ಹೀಗನ್ನಿಸಿತು, ಇಷ್ಟು ಚಿಕ್ಕ ಹಗ್ಗ, ಇಷ್ಟು ಗಟ್ಟಿಮುಟ್ಟಾದ ಕಲ್ಲಿನ ಮೇಲೆ ಅಳಿಸಲಾಗದಂಥ ಗುರುತು ಮಾಡಿದೆ. ಹಾಗಾದರೆ, ನಾನ್ಯಾಕೆ ಓದಲು ಸಾಧ್ಯವಿಲ್ಲ ಎಂದು ನಿರ್ಧಿಸಿ. ಪುನಃ ಗುರುಕುಲಕ್ಕೆ ಹೊರಟ. ಹಾಗೆ ಉಳಿದ ಒಂದು ತಿಂಗಳಲ್ಲಿ ಚೆನ್ನಾಗಿ ಓದಿ, ಉತ್ತಮ ಅಂಕ ಗಳಿಸಿ, ಉತ್ತೀರ್ಣನಾದ. ಹೀಗೆ ಸಂಪೂರ್ಣ ವಿದ್ಯಾಭ್ಯಾಸ ಪಡೆದ ಬಾಲಕ, ಮುಂದೆ ಸಂಸ್ಕೃತದಲ್ಲಿ ವ್ಯಾಕರಣದಲ್ಲಿ ಪಂಡಿತನಾದ. ಅವರೇ ಆಚಾರ್ಯ ವರದರಾಜರು.

ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..

ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?

ಭೀಮನು ಹೇಗೆ ಇಷ್ಟು ಬಲಶಾಲಿಯಾದ..?

ಹೆಣ್ಣಿನಲ್ಲಿ ಈ 4 ಗುಣಗಳಿದ್ದರೆ, ಆಕೆಯ ಜೀವನ ಅತ್ಯುತ್ತಮವಾಗಿರತ್ತೆ..

ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..

- Advertisement -

Latest Posts

Don't Miss