ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಗಣಪತಿಗೆ ಬಲು ಇಷ್ಟವಾಗಿರುವ ಕರಿದ ಕೊಬ್ಬರಿ ಮೋದಕ ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಶ್ರೀ ಕೃಷ್ಣ ಜನ್ಮಾಷ್ಠಮಿಗೆ ಮಾಡಬಹುದು ಈ ಅವಲಕ್ಕಿ ಲಾಡು ಪ್ರಸಾದ..
ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ ಅಥವಾ ಗೋದಿ ಹಿಟ್ಟು, ಕ್ರಿಸ್ಪಿಯಾಗಿರಬೇಕು ಅಂದ್ರೆ ಮೈದಾ ತೆಗೆದುಕೊಳ್ಳಿ, 2 ಸ್ಪೂನ್ ತುಪ್ಪ, ಚಿಟಿಕೆ ಉಪ್ಪು. ಹೂರಣ ಮಾಡಲು ಒಂದು ಕಪ್ ಕೊಬ್ಬರಿ ತುರಿ, ಅರ್ಧ ಕಪ್ ಸಕ್ಕರೆ, 1 ಸ್ಪೂನ್ ಗಸಗಸೆ, ಅಗತ್ಯವಿದ್ದಲ್ಲಿ ಖೋವಾ ಬಳಸಬಹುದು. ಚಿಟಿಕೆ ಏಲಕ್ಕಿ ಪುಡಿ. ಕರಿಯಲು ಎಣ್ಣೆ.
ಮಾಡುವ ವಿಧಾನ: ಮೈದಾ ಹಿಟ್ಟಿಗೆ ಚಿಟಿಕೆ ಉಪ್ಪು ಮತ್ತು ಎರಡು ಸ್ಪೂನ್ ತುಪ್ಪ ಸೇರಿಸಿ, ನೀರು ಹಾಕಿ ಹಿಟ್ಟು ಕಲಿಸಿ. ನೀರು ಅತೀ ಬಿಸಿಯಾಗಿರುವುದು ಬೇಡ, ಅತಿ ತಣ್ಣಗೆಯೂ ಇರಬಾರದು. ಹಿಟ್ಟು ಚೆನ್ನಾಗಿ ನಾದಿದ ಬಳಿಕ, ಅದನ್ನು 30 ನಿಮಿಷ ಪಕ್ಕಕ್ಕಿರಿಸಿ. ಈಗ ಹೂರಣ ತಯಾರಿಸಿಕೊಳ್ಳಿ. ಗ್ಯಾಸ್ ಆನ್ ಮಾಡಿ, ಪ್ಯಾನ್ ಇಟ್ಟು, ಅದಕ್ಕೆ ಗಸಗಸೆ ಹಾಕಿ ಹುರಿದುಕೊಳ್ಳಿ, ಈಗ ಕೊಬ್ಬರಿ ತುರಿ ಹಾಕಿ, 2 ನಿಮಿಷ ಹುರಿಯಿರಿ. ಈ ವೇಳೆ ನಿಮಗೆ ಬೇಕಾದಲ್ಲಿ ಡ್ರೈಫ್ರೂಟ್ಸ್ ಮತ್ತು ಖೋವಾ ಸೇರಿಸಿಕೊಳ್ಳಿ. ಈಗ ಸಕ್ಕರೆ ಸೇರಿಸಿ, 5 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಹೂರಣ ರೆಡಿ.
ಈ ಕೃಷ್ಣ ಜನ್ಮಾಷ್ಠಮಿಗೆ ಮಾಡಿ ಸಿಹಿ ಅವಲಕ್ಕಿ ಪ್ರಸಾದ..
ಈಗ ಕಲಿಸಿಟ್ಟುಕೊಂಡ ಹಿಟ್ಟನ್ನು ಪೂರಿಯಾಕಾರಕ್ಕೆ ಲಟ್ಟಿಸಿ, ಅದರಲ್ಲಿ ಕೊಬ್ಬರಿ ಹೂರಣವನ್ನು ತುಂಬಿಸಿ, ಮೋದಕದ ಆಕಾರ ಮಾಡಿ, ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಕರಿದರೆ, ಕರಿದ ಕೊಬ್ಬರಿ ಮೋದಕ ರೆಡಿ.